ETV Bharat / bharat

ಮದ್ಯ ಮಾರಾಟ ಮಾಡದಂತೆ ಹೇಳಿದ ವ್ಯಕ್ತಿಗೆ ಥಳಿತ.. ಗುಪ್ತಾಂಗಕ್ಕೆ ಬರೆ ಎಳೆದು ದುಷ್ಕೃತ್ಯ!

ಧಾರ್ಮಿಕ ಸ್ಥಳದ ಬಳಿ ಮದ್ಯ ಮಾರಾಟ ಮಾಡದಂತೆ ಹೇಳಿಕೆ ಕಾರಣಕ್ಕೆ ವ್ಯಕ್ತಿಯನ್ನು ನಿರ್ದಯವಾಗಿ ಥಳಿಸಿ, ಗುಪ್ತಾಂಗಕ್ಕೆ ಬರೆ ಎಳೆದ ದುಷ್ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ.

author img

By

Published : Jul 24, 2022, 11:06 PM IST

man-brutally-beaten-in-churu-exceeding-the-limits-of-torture
ಮದ್ಯ ಮಾರಾಟ ಮಾಡದಂತೆ ಹೇಳಿದ ವ್ಯಕ್ತಿಗೆ ಥಳಿಸಿ ಗುಪ್ತಾಂಗಕ್ಕೆ ಬರೆ ಎಳೆದು ದುಷ್ಕೃತ್ಯ

ಚುರು (ರಾಜಸ್ಥಾನ): ರಾಜಸ್ಥಾನದ ಚುರು ಜಿಲ್ಲೆಯ ಗ್ರಾಮವೊಂದಲ್ಲಿ ಮದ್ಯ ಮಾರಾಟ ವಿಷಯವಾಗಿ 34 ವರ್ಷದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಅಮಾನುಷವಾಗಿ ಥಳಿಸಿ, ಗುಪ್ತಾಂಗಕ್ಕೆ ಬರೆ ಎಳೆದಿರುವ ಘಟನೆ ನಡೆದಿದೆ. ಸದ್ಯ ಈ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಚುರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಸಿದ್ಧಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಧಾರ್ಮಿಕ ಸ್ಥಳದ ಬಳಿ ಕೆಲವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಲ್ಲಿ ಮದ್ಯ ಮಾರಾಟ ಮಾಡದಂತೆ ಹೇಳಿಕೆ ಕಾರಣಕ್ಕೆ ಈ ವ್ಯಕ್ತಿಯನ್ನು ದೂರು ಕರೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ. ಅಲ್ಲದೇ, ಆತನನ್ನು ವಿವಸ್ತ್ರಗೊಳಿಸಿ ಮತ್ತು ಗುಪ್ತಾಂಗಕ್ಕೆ ಬರೆ ಎಳೆದಿದ್ದಾರೆ ಎಂದು ಹೇಳಲಾಗ್ತಿದೆ.

ಇದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸಲಾಗಿದೆ. ಈ ಘಟನೆಯಿಂದ ಸದ್ಯ ಭಯಭೀತನಾಗಿರುವ ವ್ಯಕ್ತಿ ಕುಟುಂಬ ಸಮೇತ ದೂರ ಹೋಗುವುದಾಗಿ ಹೇಳಿದ್ದಾನೆ. ನನ್ನನ್ನು ಆರೋಪಿಗಳು ಗ್ರಾಮದಲ್ಲಿರಲು ಬಿಡುವುದಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾನೆ.

ಈ ಬಗ್ಗೆ ಘಟನೆ ಕುರಿತು ಪೊಲೀಸ್​ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಹಲ್ಲೆಗೊಳಾಗದ ಸಂತ್ರಸ್ತನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯತಮೆ ಜೊತೆಗೆ ಲಿವ್​ ಇನ್​, ಆಕೆಯ ತಂಗಿಯ ಮೇಲೆ ರೇಪ್​: ಲವ್ ಜಿಹಾದ್ ಶಂಕೆ

ಚುರು (ರಾಜಸ್ಥಾನ): ರಾಜಸ್ಥಾನದ ಚುರು ಜಿಲ್ಲೆಯ ಗ್ರಾಮವೊಂದಲ್ಲಿ ಮದ್ಯ ಮಾರಾಟ ವಿಷಯವಾಗಿ 34 ವರ್ಷದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಅಮಾನುಷವಾಗಿ ಥಳಿಸಿ, ಗುಪ್ತಾಂಗಕ್ಕೆ ಬರೆ ಎಳೆದಿರುವ ಘಟನೆ ನಡೆದಿದೆ. ಸದ್ಯ ಈ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಚುರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಸಿದ್ಧಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಧಾರ್ಮಿಕ ಸ್ಥಳದ ಬಳಿ ಕೆಲವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಲ್ಲಿ ಮದ್ಯ ಮಾರಾಟ ಮಾಡದಂತೆ ಹೇಳಿಕೆ ಕಾರಣಕ್ಕೆ ಈ ವ್ಯಕ್ತಿಯನ್ನು ದೂರು ಕರೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ. ಅಲ್ಲದೇ, ಆತನನ್ನು ವಿವಸ್ತ್ರಗೊಳಿಸಿ ಮತ್ತು ಗುಪ್ತಾಂಗಕ್ಕೆ ಬರೆ ಎಳೆದಿದ್ದಾರೆ ಎಂದು ಹೇಳಲಾಗ್ತಿದೆ.

ಇದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸಲಾಗಿದೆ. ಈ ಘಟನೆಯಿಂದ ಸದ್ಯ ಭಯಭೀತನಾಗಿರುವ ವ್ಯಕ್ತಿ ಕುಟುಂಬ ಸಮೇತ ದೂರ ಹೋಗುವುದಾಗಿ ಹೇಳಿದ್ದಾನೆ. ನನ್ನನ್ನು ಆರೋಪಿಗಳು ಗ್ರಾಮದಲ್ಲಿರಲು ಬಿಡುವುದಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾನೆ.

ಈ ಬಗ್ಗೆ ಘಟನೆ ಕುರಿತು ಪೊಲೀಸ್​ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಹಲ್ಲೆಗೊಳಾಗದ ಸಂತ್ರಸ್ತನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯತಮೆ ಜೊತೆಗೆ ಲಿವ್​ ಇನ್​, ಆಕೆಯ ತಂಗಿಯ ಮೇಲೆ ರೇಪ್​: ಲವ್ ಜಿಹಾದ್ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.