ETV Bharat / bharat

ಲೈವ್​ ಮರ್ಡರ್ ವಿಡಿಯೋ​: ಭೂ ವಿವಾದ ಸಂಬಂಧ ಜನರ ಎದುರೇ ಗುಂಡಿಕ್ಕಿ ವ್ಯಕ್ತಿ ಕೊಲೆ! - ಭೂ ವಿವಾದಕ್ಕಾಗಿ ಜನರ ಎದುರೇ ವ್ಯಕ್ತಿಗೆ ಗುಂಡಿಕ್ಕಿ ಕೊಲೆ

ಭೂ ವಿವಾದಕ್ಕಾಗಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬಿಹಾರದ ಚಂಪಾರಣ್ಯದಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿ ಮೊಬೈಲ್​​ನಲ್ಲಿ ಸೆರೆಯಾಗಿವೆ.

Live murder caught in mobile
Live murder caught in mobile
author img

By

Published : Apr 7, 2021, 5:09 PM IST

ಮೋತಿಹಾರಿ(ಬಿಹಾರ): ಪೂರ್ವ ಚಂಪಾರಣ್ಯ​ ಜಿಲ್ಲೆಯ ತುರ್ಕೌಲಿಯಾ ಪೊಲೀಸ್​ ಠಾಣಾ ಪ್ರದೇಶದ ಮಂಜಾರ್​​ ಗ್ರಾಮದಲ್ಲಿ ಭೂ ವಿವಾದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಲೈವ್​ ಮರ್ಡರ್ ವಿಡಿಯೋ

ಹಗಲು ಹೊತ್ತಿನಲ್ಲೇ ಗುಂಡು ಹಾರಿಸಲಾಗಿದ್ದು, ಗಾಯಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವನ್ನಪ್ಪಿದ್ದಾನೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಔಷಧ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಮನೆಯ ಪಕ್ಕದ ಯುವಕನೊಂದಿಗೆ ಜಗಳ ವಾಡುತ್ತಿದ್ದನು. ಜಗಳ ತಾರಕ್ಕೇರುತ್ತಿದ್ದಂತೆ ಕೆಲವರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ವಿವೇಕ್​ ಕುಮಾರ್​ ಎಂಬ ವ್ಯಕ್ತಿ ಔಷಧ ಅಂಗಡಿಯವನ ಮೇಲೆ ಪಿಸ್ತೂಲ್​​ನಿಂದ ಗುಂಡಿಕ್ಕಿದ್ದಾನೆ. ಇದರ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ರಂಗೇರಿದ ಚುನಾವಣಾ ಕಾವು: ಬಿರುಸಿನ ಪ್ರಚಾರದಲ್ಲಿ ಪಕ್ಷಗಳು

ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಮೋತಿಹಾರಿ(ಬಿಹಾರ): ಪೂರ್ವ ಚಂಪಾರಣ್ಯ​ ಜಿಲ್ಲೆಯ ತುರ್ಕೌಲಿಯಾ ಪೊಲೀಸ್​ ಠಾಣಾ ಪ್ರದೇಶದ ಮಂಜಾರ್​​ ಗ್ರಾಮದಲ್ಲಿ ಭೂ ವಿವಾದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಲೈವ್​ ಮರ್ಡರ್ ವಿಡಿಯೋ

ಹಗಲು ಹೊತ್ತಿನಲ್ಲೇ ಗುಂಡು ಹಾರಿಸಲಾಗಿದ್ದು, ಗಾಯಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವನ್ನಪ್ಪಿದ್ದಾನೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಔಷಧ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಮನೆಯ ಪಕ್ಕದ ಯುವಕನೊಂದಿಗೆ ಜಗಳ ವಾಡುತ್ತಿದ್ದನು. ಜಗಳ ತಾರಕ್ಕೇರುತ್ತಿದ್ದಂತೆ ಕೆಲವರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ವಿವೇಕ್​ ಕುಮಾರ್​ ಎಂಬ ವ್ಯಕ್ತಿ ಔಷಧ ಅಂಗಡಿಯವನ ಮೇಲೆ ಪಿಸ್ತೂಲ್​​ನಿಂದ ಗುಂಡಿಕ್ಕಿದ್ದಾನೆ. ಇದರ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ರಂಗೇರಿದ ಚುನಾವಣಾ ಕಾವು: ಬಿರುಸಿನ ಪ್ರಚಾರದಲ್ಲಿ ಪಕ್ಷಗಳು

ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.