ETV Bharat / bharat

ಬಣ್ಣ ಹಚ್ಚಲಿ ಬಿಡಿ, ಶೀಘ್ರದಲ್ಲೇ ಅಳಿಸಿಹೋಗಲಿದೆ : ಕಮಲ್ ಹಾಸನ್ ಸಂದರ್ಶನ

ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಯಲ್ಲಿ ಮಕ್ಕಳ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಬಹುಭಾಷಾ ನಟ ಕಮಲ್​ ಹಾಸನ್ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಅವರ ಎಕ್ಸ್​ಕ್ಲ್ಯೂಸಿವ್ ಸಂದರ್ಶನ ಇಲ್ಲಿದೆ..

author img

By

Published : Mar 23, 2021, 7:36 PM IST

let them paint me in BJP dye and soon the colour will wear off: Kamal
ಬಣ್ಣ ಹಚ್ಚಲಿ ಬಿಡಿ, ಶೀಘ್ರದಲ್ಲೇ ಅಳಿಸಿಹೋಗಲಿದೆ: ಕಮಲ್ ಹಾಸನ್ ಸಂದರ್ಶನ

ಹೈದರಾಬಾದ್ : ಚಿತ್ರನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿಯಾಗಿ ಚಿತ್ರರಂಗವನ್ನು ಆಳುತ್ತಿರುವ ಬಹುಭಾಷಾ ನಟ ಕಮಲ್​ ಹಾಸನ್ ರಾಜಕಾರಣದಲ್ಲಿ ಅತಿ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ. ಮಕ್ಕಳ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಅವರು, ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿರುವ ಅವರು ಈಗಾಗಲೇ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿದ್ದಾರೆ. ಈಟಿವಿ ಭಾರತ್​ನ ಹಿರಿಯ ವರದಿಗಾರರಾದ ಎಸ್​.ಶ್ರೀನಿವಾಸನ್ ಅವರ ಜೊತೆ ತಮ್ಮ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತನಾಡಿದ್ದು, ಅವರ ಪಕ್ಷ ಬಿಜೆಪಿಯ ಬಿ ಟೀಂ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆ: ಕಮಲ್ ಹಾಸನ್ ಬಿಜೆಪಿಯ ಬಿ ಟೀಂ ಎಂಬ ಬಗ್ಗೆ ನಿಮ್ಮ ಮಾತು..

ನನ್ನನ್ನು ತಿಳಿದುಕೊಂಡಿರುವವರ ಬಗ್ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಹೆಸರು ಕಮಲ್ ಹಾಸನ್​​. ನಿಮ್ಮ ಹೆಸರು K ಇಂದ ಆರಂಭವಾಗುತ್ತದೆ. ಆದ್ದರಿಂದ ಅನುಮಾನ ಪಡುತ್ತೇನೆ ಎಂದು ಹೇಳುವುದಾದರೆ ಅವರು ಅನುಮಾನ ಪಡುತ್ತಲೇ ಇರಲಿ. ನನ್ನ ಜೀವನ ಪರಿಚಯ ಇರುವವರು ಈ ರೀತಿ ಹೇಳಲು ಸಾಧ್ಯವಿಲ್ಲ. ನನ್ನ ಬಗ್ಗೆ ಅರಿವಿಲ್ಲದವರು ಈ ರೀತಿ ಹೇಳುತ್ತಾರೆ. ಅದೇ ಬಣ್ಣವನ್ನು ನನಗೆ ಹಚ್ಚಲಿ. ಅದು ಅಳಿಸಿ ಹೋಗಲಿದೆ.

ಪ್ರಶ್ನೆ: ಅರ್ಜಿಗಳಲ್ಲಿ ಜಾತಿ ಕಾಲಂಗಳನ್ನು ಡಿಲೀಟ್ ಮಾಡಿ, ಜಾತಿ ನಾಶ ಮಾಡಬಹುದೇ?

ಉತ್ತರ: ಅರ್ಜಿಯಲ್ಲಿ ಜಾತಿ ಕಾಲಂ ತೆಗೆದು ಹಾಕುವ ಆಲೋಚನೆಯನ್ನು ಅಪಹಾಸ್ಯ ಮಾಡಬಾರದು. “ಅರ್ಜಿಯಲ್ಲಿ ಜಾತಿಯ ಹೆಸರನ್ನು ತೆಗೆದು ಹಾಕಿದರೆ, ಜಾತಿಯನ್ನು ತೆಗೆದು ಹಾಕಲಾಗುತ್ತದೆಯೇ?” ಎಂದು ನೀವು ಹೇಳಿದಾಗ ಜಾತಿ ಯಥಾಸ್ಥಿತಿ ಮುಂದುವರಿಯಬೇಕೆಂದು ನೀವು ಬಯಸುತ್ತಿರುವಂತೆ ತೋರುತ್ತಿದೆ. ಜಾತಿಯನ್ನು ನಿರ್ಮೂಲನೆ ಮಾಡಲು ನೀವು ನನಗೆ ಸವಾಲು ಹಾಕುತ್ತಿದ್ದೀರಿ. ಸವಾಲು ನಮ್ಮದಾಗಬೇಕು. ಜಾತಿ ಮೂಲಕ ಆಟ ಆಡುವವರೆಗೆ ವಂಶಾವಳಿ ಇಲ್ಲ. ನಾವು ಅವರಿಗೆ ಜಾತಿ ಕಲಿಸಬಾರದು.

ಪ್ರಶ್ನೆ: ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನದ ಬಗ್ಗೆ ಮಾತನಾಡಿದ್ದೀರಿ.. ಇದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾಗುವುದಿಲ್ಲವೇ?

ಉತ್ತರ: ನಾವು ಆರ್ಥಿಕತೆಗೆ ಗೃಹಿಣಿಯರ ಕೊಡುಗೆ ಗುರುತಿಸಿದ್ದೇವೆ. ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನ ನೀಡುವುದರಿಂದ ಅವರನ್ನು ಹೊರಗೆ ಬಂದು ಕೆಲಸ ಮಾಡಬೇಡಿ ಎಂದು ಅರ್ಥವಲ್ಲ. ಅವರೂ ವಿದ್ಯಾಭ್ಯಾಸ ಮಾಡಬಹುದು. ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.

ಮನೆಕೆಲಸದವರಿಗೆ ತಿಂಗಳ ವೇತನ ನೀಡದೇ ಇರುವುದು ನಾವು ಈವರೆಗೆ ಗಮನಿಸಲಿಲ್ಲ. ಇದು ನಮ್ಮ ಮೂರ್ಖತನ. ಅವರಿಗೂ ಕೆಲಸದ ಸಮಯವನ್ನು ನಿಗದಿ ಮಾಡಲಾಗುತ್ತದೆ. ನೂರು ವರ್ಷದ ಹಿಂದೆ ಕಾರ್ಮಿಕರಿಗೆ ಎಂಟು ಗಂಟೆಯ ಅವಧಿ ನೀಡಿದ್ದು ಅಚ್ಚರಿ ಮೂಡಿಸಿದಂತೆಯೇ, ಮನೆಕೆಲಸದವರಿಗೆ ವೇತನ ಮತ್ತು ಸಮಯ ನಿಗದಿ ಅಚ್ಚರಿ ಮೂಡಿಸುತ್ತದೆ. ಈ ನಿರ್ಧಾರ ಸರಿಯಾಗಿದೆ.

ಪ್ರಶ್ನೆ: ಶೋಷಿತ ವರ್ಗದ ಸಮುದಾಯಗಳು ರಾಜ್ಯಾದ್ಯಂತ ಹರಡಿವೆ. ನೀವು ಅವರ ಪರ ನಿಲ್ಲಲು ಸಾಧ್ಯವೇ?

ಉತ್ತರ: ಶೋಷಿತ ವರ್ಗದ ಜನರು ಬೇರೆ ಯಾವುದೋ ಗ್ರಹದಿಂದ ಬಂದವರಲ್ಲ. ಅವರು ನನ್ನ ಸಹೋದರರು. ಇತಿಹಾಸದಲ್ಲಿ ನಡೆದ ತಪ್ಪುಗಳಿಂದ, ಜಾತಿವಾದಿ ನೀತಿಯಿಂದಾಗಿ ಶೋಷಿತರು ಸೃಷ್ಟಿಯಾಗಿದ್ದಾರೆ. ಅದನ್ನು ಸರಿ ಮಾಡುವುದು ನನ್ನ ಕರ್ತವ್ಯ, ನಮ್ಮ ಕರ್ತವ್ಯ. ಎಲ್ಲರೂ ಅಭಿವೃದ್ಧಿ ಹೊಂದುವ ತನಕ, ನಮ್ಮ ಪ್ರಯತ್ನ ಮುಂದುವರೆಸುತ್ತೇವೆ.

ಈಟಿವಿ ಭಾರತ್‌ ಜತೆಗೆ ನಟ ಕಮ್‌ ರಾಜಕಾರಣಿ ಕಮಲ್ ಹಾಸನ್ ಸಂದರ್ಶನ

ಪ್ರಶ್ನೆ : ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ದುರ್ಬಲರಿಗೆ ನೆಲೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಇದು ರಾಜಕೀಯ ಆಟವಾಗಬಾರದು. ಜಾತಿಗಣತಿಯ ಮಾಹಿತಿಯನ್ನು ಸಹಜವಾಗಿ ಬಳಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಬಳಿ ಸಾಕಷ್ಟು ಹಣವಿದೆಯೇ ಎಂದು ಖಚಿತಪಡಿಸಿಕೊಂಡ ನಂತರವೇ ಬೇರೊಬ್ಬರಿಗೆ ಚೆಕ್ ನೀಡಬಹುದು. ಹಣವಿಲ್ಲದಿದ್ದಾಗ ನೀವು ಚೆಕ್ ನೀಡಿದರೆ ಅದನ್ನು ‘ರಬ್ಬರ್ ಚೆಕ್’ ಎಂದು ಕರೆಯಲಾಗುತ್ತದೆ. ಅದು ಬೌನ್ಸ್​ ಆಗುತ್ತದೆ. ನಮ್ಮ ಸಮಾಜದಲ್ಲಿ ಎಲ್ಲರಿಗೂ ಅವಕಾಶವಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ.

ಪ್ರಶ್ನೆ: ಸೇವೆಯ ಹಕ್ಕಿನ ಬಗ್ಗೆ ಮಾತನಾಡಿದ್ದೀರಿ.. ಇದನ್ನು ವಿವರಿಸುವಿರಾ?

ಉತ್ತರ : ನಾನು ಹೇಳುವ ಸೇವೆಯ ಹಕ್ಕು ರಾಜಕಾರಣಿಗಳ ಭಿಕ್ಷೆಯಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಈ ರೀತಿಯ ಕಾನೂನು ಸೃಷ್ಟಿಯಾಗದೇ ಇರುವುದು ಅತ್ಯಂತ ದುಃಖಕರವಾಗಿದೆ. ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ರಾಜಕಾರಣಿಗಳಿಗೆ ಇದು ಅರ್ಥವಾಗದ ಕಾರಣ ಇನ್ನೂ ಏನೂ ಮಾಡಲಾಗಲಿಲ್ಲ. ರಾಜಕಾರಣಿಗಳನ್ನು ಪ್ರಶ್ನಿಸುವುದು, ಅವರು ತಪ್ಪು ಮಾಡದಂತೆ ನೋಡಿಕೊಳ್ಳುವುದೇ ಸೇವೆಯ ಹಕ್ಕಿನ ಸಾರಾಂಶ.

ಪ್ರಶ್ನೆ: ಸಾಮಾಜಿಕ ನ್ಯಾಯದ ಬಗ್ಗೆ..

ಉತ್ತರ : ಸಾಮಾಜಿಕ ನ್ಯಾಯ ಎಲ್ಲರಿಗೂ ಬೇಕು. ಸಾಮಾಜಿಕ ನ್ಯಾಯವನ್ನು ಶೇಕಡಾವಾರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯವನ್ನು ಸಾಧಿಸುವವರೆಗೆ ನಮ್ಮ ಪೂರ್ವಜರು ನಮಗೆ ನೀಡಿದ ಯಾವುದೇ ಯೋಜನೆಗಳು ಜಾರಿಯಲ್ಲಿರಬೇಕು. ಅಡಿಪಾಯವೂ ಹಾಗೆಯೇ ಇರಬೇಕು.

ಪ್ರಶ್ನೆ: ಬಿಜೆಪಿ ಮತ್ತು ಬಿಜೆಪಿ ಮುಖಂಡರನ್ನು ನೀವು ಟೀಕಿಸುವುದಿಲ್ಲ ಎಂದು ಕೊಯಮತ್ತೂರು ಸಂಸದರು ಆರೋಪಿಸುತ್ತಾರೆ..

ಉತ್ತರ : ಅವರು ನಮ್ಮ ಭಾಷಣಗಳನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಇದೇ ನಿಜ.

ಪ್ರಶ್ನೆ: ಆರ್ಥಿಕ ಸಮಸ್ಯೆಯಿಂದ ನಲುಗುತ್ತಿರುವ ರಾಜ್ಯದ ಅಭಿವೃದ್ಧಿಗೆ ನಿಮ್ಮಲ್ಲಿರುವ ಯೋಜನೆಗಳೇನು?

ಆದಾಯ ವೃದ್ಧಿಗೆ ಸರ್ಕಾರ ತೆರಿಗೆ ಮತ್ತು ಟ್ಯಾಸ್ಮಾಕ್ (ಸರ್ಕಾರಿ-ಮದ್ಯ ಚಿಲ್ಲರೆ ವ್ಯಾಪಾರ ನಿಗಮ) ಮಾತ್ರ ಅವಲಂಬಿಸಿದೆ. ಕೈಗಾರಿಕೋದ್ಯಮಿಗಳಿಗೆ ಹೊಣೆಯಾಗುವ ಬದಲಿಗೆ ಸೂಕ್ಷ್ಮ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಮಾರ್ಗಗಳನ್ನು ಸುಲಭಗೊಳಿಸಬೇಕು. ಆಗ ಸರ್ಕಾರಕ್ಕೆ ಆದಾಯ ಸಿಗುತ್ತದೆ.

ನಾವು ಅದನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ಪ್ರಾಮಾಣಿಕತೆ ಇದ್ದಾಗ ನಾವು ಅಭಿವೃದ್ಧಿ ಹೊಂದುತ್ತೇವೆ. ನಮ್ಮ ಚುನಾವಣಾ ಧ್ಯೇಯವಾಕ್ಯ ‘ನಾವು ಪುನರ್ನಿರ್ಮಿಸೋಣ’ ಆಗಿದ್ದು, ಎಲ್ಲವನ್ನೂ ಪುನರ್ನಿರ್ಮಿಸುತ್ತೇವೆ,

ಹೈದರಾಬಾದ್ : ಚಿತ್ರನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿಯಾಗಿ ಚಿತ್ರರಂಗವನ್ನು ಆಳುತ್ತಿರುವ ಬಹುಭಾಷಾ ನಟ ಕಮಲ್​ ಹಾಸನ್ ರಾಜಕಾರಣದಲ್ಲಿ ಅತಿ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ. ಮಕ್ಕಳ ನೀಧಿ ಮೈಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಅವರು, ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿರುವ ಅವರು ಈಗಾಗಲೇ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿದ್ದಾರೆ. ಈಟಿವಿ ಭಾರತ್​ನ ಹಿರಿಯ ವರದಿಗಾರರಾದ ಎಸ್​.ಶ್ರೀನಿವಾಸನ್ ಅವರ ಜೊತೆ ತಮ್ಮ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತನಾಡಿದ್ದು, ಅವರ ಪಕ್ಷ ಬಿಜೆಪಿಯ ಬಿ ಟೀಂ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆ: ಕಮಲ್ ಹಾಸನ್ ಬಿಜೆಪಿಯ ಬಿ ಟೀಂ ಎಂಬ ಬಗ್ಗೆ ನಿಮ್ಮ ಮಾತು..

ನನ್ನನ್ನು ತಿಳಿದುಕೊಂಡಿರುವವರ ಬಗ್ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಹೆಸರು ಕಮಲ್ ಹಾಸನ್​​. ನಿಮ್ಮ ಹೆಸರು K ಇಂದ ಆರಂಭವಾಗುತ್ತದೆ. ಆದ್ದರಿಂದ ಅನುಮಾನ ಪಡುತ್ತೇನೆ ಎಂದು ಹೇಳುವುದಾದರೆ ಅವರು ಅನುಮಾನ ಪಡುತ್ತಲೇ ಇರಲಿ. ನನ್ನ ಜೀವನ ಪರಿಚಯ ಇರುವವರು ಈ ರೀತಿ ಹೇಳಲು ಸಾಧ್ಯವಿಲ್ಲ. ನನ್ನ ಬಗ್ಗೆ ಅರಿವಿಲ್ಲದವರು ಈ ರೀತಿ ಹೇಳುತ್ತಾರೆ. ಅದೇ ಬಣ್ಣವನ್ನು ನನಗೆ ಹಚ್ಚಲಿ. ಅದು ಅಳಿಸಿ ಹೋಗಲಿದೆ.

ಪ್ರಶ್ನೆ: ಅರ್ಜಿಗಳಲ್ಲಿ ಜಾತಿ ಕಾಲಂಗಳನ್ನು ಡಿಲೀಟ್ ಮಾಡಿ, ಜಾತಿ ನಾಶ ಮಾಡಬಹುದೇ?

ಉತ್ತರ: ಅರ್ಜಿಯಲ್ಲಿ ಜಾತಿ ಕಾಲಂ ತೆಗೆದು ಹಾಕುವ ಆಲೋಚನೆಯನ್ನು ಅಪಹಾಸ್ಯ ಮಾಡಬಾರದು. “ಅರ್ಜಿಯಲ್ಲಿ ಜಾತಿಯ ಹೆಸರನ್ನು ತೆಗೆದು ಹಾಕಿದರೆ, ಜಾತಿಯನ್ನು ತೆಗೆದು ಹಾಕಲಾಗುತ್ತದೆಯೇ?” ಎಂದು ನೀವು ಹೇಳಿದಾಗ ಜಾತಿ ಯಥಾಸ್ಥಿತಿ ಮುಂದುವರಿಯಬೇಕೆಂದು ನೀವು ಬಯಸುತ್ತಿರುವಂತೆ ತೋರುತ್ತಿದೆ. ಜಾತಿಯನ್ನು ನಿರ್ಮೂಲನೆ ಮಾಡಲು ನೀವು ನನಗೆ ಸವಾಲು ಹಾಕುತ್ತಿದ್ದೀರಿ. ಸವಾಲು ನಮ್ಮದಾಗಬೇಕು. ಜಾತಿ ಮೂಲಕ ಆಟ ಆಡುವವರೆಗೆ ವಂಶಾವಳಿ ಇಲ್ಲ. ನಾವು ಅವರಿಗೆ ಜಾತಿ ಕಲಿಸಬಾರದು.

ಪ್ರಶ್ನೆ: ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನದ ಬಗ್ಗೆ ಮಾತನಾಡಿದ್ದೀರಿ.. ಇದು ಮಹಿಳಾ ಸಬಲೀಕರಣಕ್ಕೆ ವಿರುದ್ಧವಾಗುವುದಿಲ್ಲವೇ?

ಉತ್ತರ: ನಾವು ಆರ್ಥಿಕತೆಗೆ ಗೃಹಿಣಿಯರ ಕೊಡುಗೆ ಗುರುತಿಸಿದ್ದೇವೆ. ಮನೆ ಕೆಲಸ ಮಾಡುವವರಿಗೆ ತಿಂಗಳ ವೇತನ ನೀಡುವುದರಿಂದ ಅವರನ್ನು ಹೊರಗೆ ಬಂದು ಕೆಲಸ ಮಾಡಬೇಡಿ ಎಂದು ಅರ್ಥವಲ್ಲ. ಅವರೂ ವಿದ್ಯಾಭ್ಯಾಸ ಮಾಡಬಹುದು. ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.

ಮನೆಕೆಲಸದವರಿಗೆ ತಿಂಗಳ ವೇತನ ನೀಡದೇ ಇರುವುದು ನಾವು ಈವರೆಗೆ ಗಮನಿಸಲಿಲ್ಲ. ಇದು ನಮ್ಮ ಮೂರ್ಖತನ. ಅವರಿಗೂ ಕೆಲಸದ ಸಮಯವನ್ನು ನಿಗದಿ ಮಾಡಲಾಗುತ್ತದೆ. ನೂರು ವರ್ಷದ ಹಿಂದೆ ಕಾರ್ಮಿಕರಿಗೆ ಎಂಟು ಗಂಟೆಯ ಅವಧಿ ನೀಡಿದ್ದು ಅಚ್ಚರಿ ಮೂಡಿಸಿದಂತೆಯೇ, ಮನೆಕೆಲಸದವರಿಗೆ ವೇತನ ಮತ್ತು ಸಮಯ ನಿಗದಿ ಅಚ್ಚರಿ ಮೂಡಿಸುತ್ತದೆ. ಈ ನಿರ್ಧಾರ ಸರಿಯಾಗಿದೆ.

ಪ್ರಶ್ನೆ: ಶೋಷಿತ ವರ್ಗದ ಸಮುದಾಯಗಳು ರಾಜ್ಯಾದ್ಯಂತ ಹರಡಿವೆ. ನೀವು ಅವರ ಪರ ನಿಲ್ಲಲು ಸಾಧ್ಯವೇ?

ಉತ್ತರ: ಶೋಷಿತ ವರ್ಗದ ಜನರು ಬೇರೆ ಯಾವುದೋ ಗ್ರಹದಿಂದ ಬಂದವರಲ್ಲ. ಅವರು ನನ್ನ ಸಹೋದರರು. ಇತಿಹಾಸದಲ್ಲಿ ನಡೆದ ತಪ್ಪುಗಳಿಂದ, ಜಾತಿವಾದಿ ನೀತಿಯಿಂದಾಗಿ ಶೋಷಿತರು ಸೃಷ್ಟಿಯಾಗಿದ್ದಾರೆ. ಅದನ್ನು ಸರಿ ಮಾಡುವುದು ನನ್ನ ಕರ್ತವ್ಯ, ನಮ್ಮ ಕರ್ತವ್ಯ. ಎಲ್ಲರೂ ಅಭಿವೃದ್ಧಿ ಹೊಂದುವ ತನಕ, ನಮ್ಮ ಪ್ರಯತ್ನ ಮುಂದುವರೆಸುತ್ತೇವೆ.

ಈಟಿವಿ ಭಾರತ್‌ ಜತೆಗೆ ನಟ ಕಮ್‌ ರಾಜಕಾರಣಿ ಕಮಲ್ ಹಾಸನ್ ಸಂದರ್ಶನ

ಪ್ರಶ್ನೆ : ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ದುರ್ಬಲರಿಗೆ ನೆಲೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಇದು ರಾಜಕೀಯ ಆಟವಾಗಬಾರದು. ಜಾತಿಗಣತಿಯ ಮಾಹಿತಿಯನ್ನು ಸಹಜವಾಗಿ ಬಳಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಬಳಿ ಸಾಕಷ್ಟು ಹಣವಿದೆಯೇ ಎಂದು ಖಚಿತಪಡಿಸಿಕೊಂಡ ನಂತರವೇ ಬೇರೊಬ್ಬರಿಗೆ ಚೆಕ್ ನೀಡಬಹುದು. ಹಣವಿಲ್ಲದಿದ್ದಾಗ ನೀವು ಚೆಕ್ ನೀಡಿದರೆ ಅದನ್ನು ‘ರಬ್ಬರ್ ಚೆಕ್’ ಎಂದು ಕರೆಯಲಾಗುತ್ತದೆ. ಅದು ಬೌನ್ಸ್​ ಆಗುತ್ತದೆ. ನಮ್ಮ ಸಮಾಜದಲ್ಲಿ ಎಲ್ಲರಿಗೂ ಅವಕಾಶವಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ.

ಪ್ರಶ್ನೆ: ಸೇವೆಯ ಹಕ್ಕಿನ ಬಗ್ಗೆ ಮಾತನಾಡಿದ್ದೀರಿ.. ಇದನ್ನು ವಿವರಿಸುವಿರಾ?

ಉತ್ತರ : ನಾನು ಹೇಳುವ ಸೇವೆಯ ಹಕ್ಕು ರಾಜಕಾರಣಿಗಳ ಭಿಕ್ಷೆಯಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಈ ರೀತಿಯ ಕಾನೂನು ಸೃಷ್ಟಿಯಾಗದೇ ಇರುವುದು ಅತ್ಯಂತ ದುಃಖಕರವಾಗಿದೆ. ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ರಾಜಕಾರಣಿಗಳಿಗೆ ಇದು ಅರ್ಥವಾಗದ ಕಾರಣ ಇನ್ನೂ ಏನೂ ಮಾಡಲಾಗಲಿಲ್ಲ. ರಾಜಕಾರಣಿಗಳನ್ನು ಪ್ರಶ್ನಿಸುವುದು, ಅವರು ತಪ್ಪು ಮಾಡದಂತೆ ನೋಡಿಕೊಳ್ಳುವುದೇ ಸೇವೆಯ ಹಕ್ಕಿನ ಸಾರಾಂಶ.

ಪ್ರಶ್ನೆ: ಸಾಮಾಜಿಕ ನ್ಯಾಯದ ಬಗ್ಗೆ..

ಉತ್ತರ : ಸಾಮಾಜಿಕ ನ್ಯಾಯ ಎಲ್ಲರಿಗೂ ಬೇಕು. ಸಾಮಾಜಿಕ ನ್ಯಾಯವನ್ನು ಶೇಕಡಾವಾರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯವನ್ನು ಸಾಧಿಸುವವರೆಗೆ ನಮ್ಮ ಪೂರ್ವಜರು ನಮಗೆ ನೀಡಿದ ಯಾವುದೇ ಯೋಜನೆಗಳು ಜಾರಿಯಲ್ಲಿರಬೇಕು. ಅಡಿಪಾಯವೂ ಹಾಗೆಯೇ ಇರಬೇಕು.

ಪ್ರಶ್ನೆ: ಬಿಜೆಪಿ ಮತ್ತು ಬಿಜೆಪಿ ಮುಖಂಡರನ್ನು ನೀವು ಟೀಕಿಸುವುದಿಲ್ಲ ಎಂದು ಕೊಯಮತ್ತೂರು ಸಂಸದರು ಆರೋಪಿಸುತ್ತಾರೆ..

ಉತ್ತರ : ಅವರು ನಮ್ಮ ಭಾಷಣಗಳನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಇದೇ ನಿಜ.

ಪ್ರಶ್ನೆ: ಆರ್ಥಿಕ ಸಮಸ್ಯೆಯಿಂದ ನಲುಗುತ್ತಿರುವ ರಾಜ್ಯದ ಅಭಿವೃದ್ಧಿಗೆ ನಿಮ್ಮಲ್ಲಿರುವ ಯೋಜನೆಗಳೇನು?

ಆದಾಯ ವೃದ್ಧಿಗೆ ಸರ್ಕಾರ ತೆರಿಗೆ ಮತ್ತು ಟ್ಯಾಸ್ಮಾಕ್ (ಸರ್ಕಾರಿ-ಮದ್ಯ ಚಿಲ್ಲರೆ ವ್ಯಾಪಾರ ನಿಗಮ) ಮಾತ್ರ ಅವಲಂಬಿಸಿದೆ. ಕೈಗಾರಿಕೋದ್ಯಮಿಗಳಿಗೆ ಹೊಣೆಯಾಗುವ ಬದಲಿಗೆ ಸೂಕ್ಷ್ಮ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಮಾರ್ಗಗಳನ್ನು ಸುಲಭಗೊಳಿಸಬೇಕು. ಆಗ ಸರ್ಕಾರಕ್ಕೆ ಆದಾಯ ಸಿಗುತ್ತದೆ.

ನಾವು ಅದನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ಪ್ರಾಮಾಣಿಕತೆ ಇದ್ದಾಗ ನಾವು ಅಭಿವೃದ್ಧಿ ಹೊಂದುತ್ತೇವೆ. ನಮ್ಮ ಚುನಾವಣಾ ಧ್ಯೇಯವಾಕ್ಯ ‘ನಾವು ಪುನರ್ನಿರ್ಮಿಸೋಣ’ ಆಗಿದ್ದು, ಎಲ್ಲವನ್ನೂ ಪುನರ್ನಿರ್ಮಿಸುತ್ತೇವೆ,

ETV Bharat Logo

Copyright © 2024 Ushodaya Enterprises Pvt. Ltd., All Rights Reserved.