ETV Bharat / bharat

ಸೇನಾ ದುರಂತಗಳು ಇದೇ ಮೊದಲಲ್ಲ..1993, 1997ರಲ್ಲಿ ನಡೆದಿದ್ದವು ಇಂಥದ್ದೇ ಅವಘಡಗಳು!

author img

By

Published : Dec 8, 2021, 10:54 PM IST

ಹೆಲಿಕಾಪ್ಟರ್​ ಪತನವಾಗಿ ಸೇನಾಧಿಕಾರಿಗಳು ಸಾವನಪ್ಪಿರುವುದು ಇಡೀ ದೇಶಕ್ಕೆ ದುಃಖದ ಸಂಗತಿ. ಈ ಹಿಂದೆ ಅಂದ್ರೆ 1997 ಮತ್ತು 1993 ರಲ್ಲಿಯೂ ಕೂಡ ಇದೇ ರೀತಿಯ ಹೆಲಿಕಾಪ್ಟರ್​ ದುರಂತಗಳು ಸಂಭವಿಸಿ ಸೇನಾ ಮುಖ್ಯಸ್ಥರು ಮತ್ತು ಸೇನಾಧಿಕಾರಿಗಳು ದಾರುಣ ಅಂತ್ಯ ಕಂಡಿದ್ದಾರೆ.

senior army officer
ಸೇನಾಧಿಕಾರಿಗಳು

ಹೈದರಾಬಾದ್​: ಹೆಲಿಕಾಪ್ಟರ್​ ಪತನವಾಗಿ ಸೇನಾಧಿಕಾರಿಗಳು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆ 1997 ಮತ್ತು 1993 ರಲ್ಲಿಯೂ ಕೂಡ ಇದೇ ರೀತಿಯ ಹೆಲಿಕಾಪ್ಟರ್​ ದುರಂತಗಳು ಸಂಭವಿಸಿ ಸೇನಾ ಮುಖ್ಯಸ್ಥರು ಮತ್ತು ಸೇನಾಧಿಕಾರಿಗಳು ದಾರುಣ ಅಂತ್ಯ ಕಂಡಿದ್ದರು.

ಅದು 1997. ಐ.ಕೆ. ಗುಜ್ರಾಲ್​ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್​.ವಿ. ಎನ್​. ಸೋಮು, ಮೇಜರ್​ ಜನರಲ್​ ರಮೇಶ್​ ಚಂದ್ರ ನಾಗ್ಪಾಲ್​ ಮತ್ತು ಇಬ್ಬರು ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿತ್ತು. ಅಂದಿನ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು. ಇದು ಕೂಡ ಬಹುದೊಡ್ಡ ದುರಂತ ಎಂದು ದಾಖಲಾಗಿದೆ.

ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್​ವಿಎನ್​ ಸೋಮು ಅವರು 1997ರಲ್ಲಿ ಅರುಣಾಚಲ ಪ್ರದೇಶದ ತವಾಂಗ್​ನಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು. ಈ ವೇಳೆ, ಚೀನಾದ ಗಡಿಭಾಗದ ಮಾಗೋ ಎಂಬಲ್ಲಿ ಹೆಲಿಕಾಪ್ಟರ್​ ಪತನಗೊಂಡಿತ್ತು. ದುರಂತದಲ್ಲಿ ಸಚಿವರು, ಮೇಜರ್​ ಜನರಲ್​ ಮತ್ತು ಇಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ: ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್​​ ರಾವತ್​ ನಿಧನ: ಶುಕ್ರವಾರ ಅಂತ್ಯಕ್ರಿಯೆ

ಇದಕ್ಕೂ ಮುನ್ನ 1993 ರಲ್ಲಿ ಭೂತಾನ್​ನಲ್ಲಿ ಎಂಐ-17 ಹೆಲಿಕಾಪ್ಟರ್​ ಪತನಗೊಂಡು ಭಾರತದ 8 ಮಂದಿ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು.

ಬಳಿಕ, ಇದೀಗ ಭಾರತೀಯ ಮೂರು ಪಡೆಗಳ ಮುಖ್ಯಸ್ಥ(ಸಿಡಿಎಸ್​) ಬಿಪಿನ್​ ರಾವತ್​ ಸೇರಿದಂತೆ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡು 13 ಜನರು ದಾರುಣವಾಗಿ ಮೃತಪಟ್ಟ ಘಟನೆ ಸೇನಾ ವಲಯದ ಅತಿದೊಡ್ಡ ದುರಂತವಾಗಿದೆ.

ಹೈದರಾಬಾದ್​: ಹೆಲಿಕಾಪ್ಟರ್​ ಪತನವಾಗಿ ಸೇನಾಧಿಕಾರಿಗಳು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆ 1997 ಮತ್ತು 1993 ರಲ್ಲಿಯೂ ಕೂಡ ಇದೇ ರೀತಿಯ ಹೆಲಿಕಾಪ್ಟರ್​ ದುರಂತಗಳು ಸಂಭವಿಸಿ ಸೇನಾ ಮುಖ್ಯಸ್ಥರು ಮತ್ತು ಸೇನಾಧಿಕಾರಿಗಳು ದಾರುಣ ಅಂತ್ಯ ಕಂಡಿದ್ದರು.

ಅದು 1997. ಐ.ಕೆ. ಗುಜ್ರಾಲ್​ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್​.ವಿ. ಎನ್​. ಸೋಮು, ಮೇಜರ್​ ಜನರಲ್​ ರಮೇಶ್​ ಚಂದ್ರ ನಾಗ್ಪಾಲ್​ ಮತ್ತು ಇಬ್ಬರು ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿತ್ತು. ಅಂದಿನ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು. ಇದು ಕೂಡ ಬಹುದೊಡ್ಡ ದುರಂತ ಎಂದು ದಾಖಲಾಗಿದೆ.

ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್​ವಿಎನ್​ ಸೋಮು ಅವರು 1997ರಲ್ಲಿ ಅರುಣಾಚಲ ಪ್ರದೇಶದ ತವಾಂಗ್​ನಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು. ಈ ವೇಳೆ, ಚೀನಾದ ಗಡಿಭಾಗದ ಮಾಗೋ ಎಂಬಲ್ಲಿ ಹೆಲಿಕಾಪ್ಟರ್​ ಪತನಗೊಂಡಿತ್ತು. ದುರಂತದಲ್ಲಿ ಸಚಿವರು, ಮೇಜರ್​ ಜನರಲ್​ ಮತ್ತು ಇಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ: ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್​​ ರಾವತ್​ ನಿಧನ: ಶುಕ್ರವಾರ ಅಂತ್ಯಕ್ರಿಯೆ

ಇದಕ್ಕೂ ಮುನ್ನ 1993 ರಲ್ಲಿ ಭೂತಾನ್​ನಲ್ಲಿ ಎಂಐ-17 ಹೆಲಿಕಾಪ್ಟರ್​ ಪತನಗೊಂಡು ಭಾರತದ 8 ಮಂದಿ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು.

ಬಳಿಕ, ಇದೀಗ ಭಾರತೀಯ ಮೂರು ಪಡೆಗಳ ಮುಖ್ಯಸ್ಥ(ಸಿಡಿಎಸ್​) ಬಿಪಿನ್​ ರಾವತ್​ ಸೇರಿದಂತೆ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡು 13 ಜನರು ದಾರುಣವಾಗಿ ಮೃತಪಟ್ಟ ಘಟನೆ ಸೇನಾ ವಲಯದ ಅತಿದೊಡ್ಡ ದುರಂತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.