ETV Bharat / bharat

ಜೊತೆಯಾಗಿ ಸಾಯಲು ನಿರ್ಧರಿಸಿದ್ದ ಜೋಡಿ.. ಹೆಣವಾಗಿದ್ದು ಮಾತ್ರ ಅವನೊಬ್ಬನೇ!

author img

By

Published : Dec 13, 2022, 1:27 PM IST

Updated : Dec 13, 2022, 1:56 PM IST

ತಡರಾತ್ರಿ ಮಹಿಳೆಯ ಚೀರಾಟ ಕೇಳಿದ ಹೋಟೆಲ್​ ಸಿಬ್ಬಂದಿ ಕೋಣೆಗೆ ಧಾವಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

Kerala couple enters into suicide pact, man dies, woman backs out
ಜೊತೆಯಾಗಿ ಸಾಯಲು ನಿರ್ಧರಿಸಿದ್ದ ಜೋಡಿ... ಹೆಣವಾಗಿದ್ದು ಮಾತ್ರ ಅವನೊಬ್ಬನೇ!

ತಿರುವನಂತಪುರ(ಕೇರಳ): ಜೊತೆಯಾಗಿ ಸಾಯಲು ನಿರ್ಧರಿಸಿದ ಜೋಡಿಯಲ್ಲಿ ಮಹಿಳೆಯು ಹಿಂದೆ ಸರಿದಿದ್ದು, 31 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಜೋಡಿಯು ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿ, ಹೋಟೆಲ್​ಗೆ ತೆರಳಿದ್ದರು. ಅದರಂತೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆಯು ಹೆದರಿ ಹಿಂದಕ್ಕೆ ಸರಿದಿದ್ದಾರೆ. ತಡರಾತ್ರಿ ಮಹಿಳೆಯ ಚೀರಾಟ ಕೇಳಿದ ಹೋಟೆಲ್​ ಸಿಬ್ಬಂದಿ ಕೋಣೆಗೆ ಧಾವಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆಯನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

ಘಟನೆಯ ಹಿನ್ನೆಲೆ: ಜೋಡಿಗಳು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನಿರ್ಧರಿಸಿದ್ದರು. ಅದರಂತೆ ಭಾನುವಾರದಂದು ಹೋಟೆಲ್​ಗೆ ಬಂದಿದ್ದಾರೆ. ಸೋಮವಾರ ರಾತ್ರಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಭಯಗೊಂಡ ಮಹಿಳೆ ಕಿರುಚಾಡಲು ಪ್ರಾರಂಭಿಸಿದ್ದರೆ, ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯ ಪ್ರಾಣ ಅಷ್ಟೊತ್ತಿಗೆ ಹಾರಿ ಹೋಗಿತ್ತು.

ಮಹಿಳೆಯು ತಿರುವನಂತಪುರಂನವರಾಗಿದ್ದು, ಮನೆಗೆ ವಾಪಸ್​ ಆಗದ ಕಾರಣ ಅವರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರಾಜ್ಯದಲ್ಲೂ ಭೀಕರ ಕೊಲೆ: ತಂದೆ ದೇಹವನ್ನು 30ಕ್ಕೂ ಹೆಚ್ಚು ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದ ಮಗ!

ತಿರುವನಂತಪುರ(ಕೇರಳ): ಜೊತೆಯಾಗಿ ಸಾಯಲು ನಿರ್ಧರಿಸಿದ ಜೋಡಿಯಲ್ಲಿ ಮಹಿಳೆಯು ಹಿಂದೆ ಸರಿದಿದ್ದು, 31 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಜೋಡಿಯು ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿ, ಹೋಟೆಲ್​ಗೆ ತೆರಳಿದ್ದರು. ಅದರಂತೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆಯು ಹೆದರಿ ಹಿಂದಕ್ಕೆ ಸರಿದಿದ್ದಾರೆ. ತಡರಾತ್ರಿ ಮಹಿಳೆಯ ಚೀರಾಟ ಕೇಳಿದ ಹೋಟೆಲ್​ ಸಿಬ್ಬಂದಿ ಕೋಣೆಗೆ ಧಾವಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆಯನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

ಘಟನೆಯ ಹಿನ್ನೆಲೆ: ಜೋಡಿಗಳು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನಿರ್ಧರಿಸಿದ್ದರು. ಅದರಂತೆ ಭಾನುವಾರದಂದು ಹೋಟೆಲ್​ಗೆ ಬಂದಿದ್ದಾರೆ. ಸೋಮವಾರ ರಾತ್ರಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಭಯಗೊಂಡ ಮಹಿಳೆ ಕಿರುಚಾಡಲು ಪ್ರಾರಂಭಿಸಿದ್ದರೆ, ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯ ಪ್ರಾಣ ಅಷ್ಟೊತ್ತಿಗೆ ಹಾರಿ ಹೋಗಿತ್ತು.

ಮಹಿಳೆಯು ತಿರುವನಂತಪುರಂನವರಾಗಿದ್ದು, ಮನೆಗೆ ವಾಪಸ್​ ಆಗದ ಕಾರಣ ಅವರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರಾಜ್ಯದಲ್ಲೂ ಭೀಕರ ಕೊಲೆ: ತಂದೆ ದೇಹವನ್ನು 30ಕ್ಕೂ ಹೆಚ್ಚು ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದ ಮಗ!

Last Updated : Dec 13, 2022, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.