ETV Bharat / bharat

ಕೊರೊನಾ ಕರಿಛಾಯೆ: ಯುಪಿಯಲ್ಲಿ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್​ ಯಾತ್ರೆಗೆ ಬ್ರೇಕ್​

author img

By

Published : Jul 18, 2021, 7:07 AM IST

ಈ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್​ ಯಾತ್ರೆಯನ್ನು ಕೋವಿಡ್​ ವೈರಸ್​ ಹಿನ್ನೆಲೆ ರದ್ದು ಮಾಡಿರುವುದಾಗಿ ಕನ್ವರ್ ಯಾತ್ರೆಯ ಸಂಘಗಗಳು ತಿಳಿಸಿವೆ.

ಕನ್ವರ್​ ಯಾತ್ರೆ
Kanwar yatra

ಲಖನೌ: ಉತ್ತರ ಪ್ರದೇಶ ಸರ್ಕಾರದ ಮನವಿ ಮೇರೆಗೆ ಈ ವರ್ಷ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್​ ಯಾತ್ರೆಯನ್ನು ಕನ್ವರ್ ಸಂಘ (ಒಕ್ಕೂಟಗಳು) ರದ್ದುಗೊಳಿಸಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಯುಪಿ ಸರ್ಕಾರ ಜನಪ್ರಿಯ ತೀರ್ಥಯಾತ್ರೆಯನ್ನು ರದ್ದುಗೊಳಿಸುವಂತೆ ಕನ್ವರ್ ಸಂಘಗಳಿಗೆ ತಿಳಿಸಿತ್ತು. ಸರ್ಕಾರದ ಮನವಿಗೆ ಸ್ಪಂದಿಸಿದ ಒಕ್ಕೂಟಗಳು ಇದೀಗ ಯಾತ್ರೆಯನ್ನು ರದ್ದು ಮಾಡಿರುವುದಾಗಿ ತಿಳಿಸಿವೆ.

ಕನ್ವರ್​ ಯಾತ್ರೆಯ ವಿಶೇಷತೆ: ಶಿವನನ್ನು ಆರಾಧಿಸುವ ಭಕ್ತರು ಪ್ರತಿ ವರ್ಷ ಕನ್ವರ್​ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬಂದು ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ತಮ್ಮ ಊರುಗಳಲ್ಲಿರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.

ಲಖನೌ: ಉತ್ತರ ಪ್ರದೇಶ ಸರ್ಕಾರದ ಮನವಿ ಮೇರೆಗೆ ಈ ವರ್ಷ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್​ ಯಾತ್ರೆಯನ್ನು ಕನ್ವರ್ ಸಂಘ (ಒಕ್ಕೂಟಗಳು) ರದ್ದುಗೊಳಿಸಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಯುಪಿ ಸರ್ಕಾರ ಜನಪ್ರಿಯ ತೀರ್ಥಯಾತ್ರೆಯನ್ನು ರದ್ದುಗೊಳಿಸುವಂತೆ ಕನ್ವರ್ ಸಂಘಗಳಿಗೆ ತಿಳಿಸಿತ್ತು. ಸರ್ಕಾರದ ಮನವಿಗೆ ಸ್ಪಂದಿಸಿದ ಒಕ್ಕೂಟಗಳು ಇದೀಗ ಯಾತ್ರೆಯನ್ನು ರದ್ದು ಮಾಡಿರುವುದಾಗಿ ತಿಳಿಸಿವೆ.

ಕನ್ವರ್​ ಯಾತ್ರೆಯ ವಿಶೇಷತೆ: ಶಿವನನ್ನು ಆರಾಧಿಸುವ ಭಕ್ತರು ಪ್ರತಿ ವರ್ಷ ಕನ್ವರ್​ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬಂದು ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ತಮ್ಮ ಊರುಗಳಲ್ಲಿರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.