ETV Bharat / bharat

ಐತಿಹಾಸಿಕ ತೀರ್ಪುಗಳ ಮೂಲಕ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿಸಿದ ಸಿಜೆಐ ಎನ್​.ವಿ. ರಮಣ

author img

By

Published : Aug 26, 2022, 1:19 PM IST

ಎನ್​ ವಿ ರಮಣ ಐತಿಹಾಸಿಕ ತೀರ್ಪುಗಳು.. ಜಾರ್ಖಂಡ್‌ನಲ್ಲಿ ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಹಾಡಹಗಲೇ ಆಟೋ ಡಿಕ್ಕಿ ಹೊಡೆಸಿ ಸಾಯಿಸಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಆ ದುಷ್ಕೃತ್ಯದ ಅಪರಾಧಿಗಳಿಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶಿಕ್ಷೆ ವಿಧಿಸಲಾಯಿತು. ಹೀಗಾಗಿ ನ್ಯಾಯಾಂಗದಲ್ಲಿ ಜನರ ವಿಶ್ವಾಸ ಹೆಚ್ಚಾಗುವಂತಾಯಿತು

ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿಸಿದ ನ್ಯಾಯಮೂರ್ತಿ ಎನ್​.ವಿ. ರಮಣ
Justice N.V. has increased the confidence of the common people in the judiciary

ನ್ಯಾಯಮೂರ್ತಿ ನೂತಲಪಾಟಿ ವೆಂಕಟರಮಣ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದು ಅಷ್ಟೊಂದು ಸರಾಗವಾಗಿರಲಿಲ್ಲ. ಆ ಹುದ್ದೆಗೇರಬೇಕಾದರೆ ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಯಿತು. ಆದರೆ ಅವರು ತಮಗೆ ಎದುರಾದ ಕಷ್ಟಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನಡೆದರು. ದೈನಂದಿನ ಜೀವನದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯು ಅವರನ್ನು ಮೇಲಕ್ಕೆ ನಿಲ್ಲುವಂತೆ ಮಾಡಿತು.

ಪರಿಣಾಮವಾಗಿ, ಅವರು ಮೌಲ್ಯಯುತ ತೀರ್ಪುಗಳೊಂದಿಗೆ ಸುಪ್ರೀಂ ಕೋರ್ಟ್ ಮುಖ್ಯಸ್ಥನ ಸ್ಥಾನಕ್ಕೆ ಹೆಚ್ಚು ಖ್ಯಾತಿಯನ್ನು ತಂದರು. ಅವರು ಐತಿಹಾಸಿಕ ತೀರ್ಪುಗಳೊಂದಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇತಿಹಾಸದಲ್ಲಿ ಸ್ಫೂರ್ತಿಯಾಗಿ ಉಳಿಯುವಂತಹ ತೀರ್ಪುಗಳನ್ನು ನೀಡಿದ ಶ್ರೇಷ್ಠ ನ್ಯಾಯಾಧೀಶರು ಎಂಬ ಶ್ಲಾಘನೆಗೆ ಇವರು ಪಾತ್ರರಾಗಿದ್ದಾರೆ.

ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾದರೆ ನ್ಯಾಯಾಲಯ ಪ್ರೇಕ್ಷಕನ ಪಾತ್ರ ವಹಿಸದೆ ಜನರ ಪರ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ರಮಣ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ರಮಣ ಅವರು ತಮ್ಮ ಸೇವಾವಧಿಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಅವರ ಪ್ರಯತ್ನಗಳ ಕಾರಣದಿಂದಲೇ ಕೆಲವು ಪ್ರಮುಖ ಆದೇಶಗಳನ್ನು ಹೊರಡಿಸಲಾಯಿತು.

ಸಿಬಿಐ ಮುಖ್ಯಸ್ಥರ ಆಯ್ಕೆ ಸಂಬಂಧದ ಸಭೆ: ನ್ಯಾಯಮೂರ್ತಿ ಎನ್‌ವಿ ರಮಣ ಅವರು ಅಧಿಕಾರ ವಹಿಸಿಕೊಂಡ ವಾರಗಳಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಎಲ್ಲರಿಗೂ ತಮ್ಮ ನಿಲುವನ್ನು ತಿಳಿಸಿದರು. ಪ್ರಧಾನಿ, ವಿರೋಧ ಪಕ್ಷದ ನಾಯಕರು ಮತ್ತು ಸಿಜೆಐ ಸದಸ್ಯರಿದ್ದ ಸಮಿತಿಯ ಸಭೆಯಲ್ಲಿ, ಸಿಬಿಐ ಮುಖ್ಯಸ್ಥರ ಆಯ್ಕೆಗೆ ಪ್ರತಿಭೆಯೇ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪುನರುಚ್ಚರಿಸಲಾಗಿದೆ. ಕನಿಷ್ಠ 6 ತಿಂಗಳ ಅಧಿಕಾರಾವಧಿ ಇರುವವರನ್ನು ಪ್ರತಿಭೆ ಜತೆಗೆ ಪರಿಗಣಿಸಬೇಕು ಎಂದು ಹೇಳಲಾಗಿದೆ. ಅಪೆಕ್ಸ್ ಕಮಿಟಿ ಸಭೆಯು ದೇಶದಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಹೊಸ ನಿಯತಾಂಕವನ್ನು ನೀಡಿದೆ.

ಎಲ್ಲರಿಗೂ ನ್ಯಾಯ ತಲುಪಿದಾಗ ಮಾತ್ರ ಸಾರ್ಥಕ: ನ್ಯಾಯಮೂರ್ತಿ ಎನ್.ವಿ.ರಮಣ ಅವರು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನೀಡಿರುವ ಪ್ರಮುಖ ತೀರ್ಪುಗಳು ಮತ್ತು ಅವರು ಮಾಡಿದ ಟೀಕೆಗಳನ್ನು ನೋಡುವ ಮೊದಲು ಇನ್ನೊಂದು ವಿಷಯ ತಿಳಿಯಬೇಕು. ಸಂವಿಧಾನ ನೀಡಿರುವ ನ್ಯಾಯ ಎಲ್ಲರಿಗೂ ತಲುಪಿದಾಗ ಮಾತ್ರ ವ್ಯವಸ್ಥೆ ಸಾರ್ಥಕವಾಗುತ್ತದೆ ಎಂಬುದು ಅವರ ದೃಢ ಸಂಕಲ್ಪವಾಗಿತ್ತು. ಅವರ ತೀರ್ಪುಗಳಲ್ಲಿ ನ್ಯಾಯಶಾಸ್ತ್ರ ಹಾಗೂ ಮಾನವೀಯತೆ ಎದ್ದುಕಾಣುತ್ತದೆ.

ಸಿಜೆಐ ಆಗಿ ತಮ್ಮ 16 ತಿಂಗಳ ಅಧಿಕಾರಾವಧಿಯಲ್ಲಿ, ನ್ಯಾಯಮೂರ್ತಿ ಎನ್‌ವಿ ರಮಣ ಅವರು ಸಾಮಾನ್ಯ ಕಾನೂನು ಮತ್ತು ಸಾಂವಿಧಾನಿಕ ಮೌಲ್ಯಗಳ ತತ್ವಗಳನ್ನು ಭದ್ರಪಡಿಸುವ ಮಹತ್ವದ ತೀರ್ಪುಗಳನ್ನು ನೀಡಿದರು. ಅವರ ಉಪಕ್ರಮದ ಮೇರೆಗೆ ಸುಪ್ರೀಂ ಕೋರ್ಟ್ ಹೊರಡಿಸಿದ ಕೆಲವು ಪ್ರಮುಖ ಆದೇಶಗಳನ್ನು ನೋಡಿದರೆ, ದೇಶವನ್ನು ಬೆಚ್ಚಿಬೀಳಿಸಿದ ಪೆಗಾಸಸ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನರ ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ರಕ್ಷಿಸುವ ಉದ್ದೇಶವು ಆದೇಶದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ದೇಶದ್ರೋಹ ಕಾನೂನು ಸಾಮಾನ್ಯರ ವಿರುದ್ಧ ಹೇರುವುದನ್ನು ತಡೆದ ಕೋರ್ಟ್​: ವಸಾಹತುಶಾಹಿ ಕಾಲದ ದೇಶದ್ರೋಹ ಕಾನೂನನ್ನು ಸಾಮಾನ್ಯ ಜನರ ವಿರುದ್ಧ ಸರ್ಕಾರಗಳು ಹೇರುವುದನ್ನು ತಡೆಯಲು ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿತು. ನ್ಯಾಯಮೂರ್ತಿ ಎನ್.ವಿ.ರಮಣ ಅವರು, ಕೇಂದ್ರ ಸರ್ಕಾರವು ಅದನ್ನು ಪರಿಶೀಲಿಸುವವರೆಗೆ ಸೆಕ್ಷನ್ 124 ಎ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯಮದಿಂದ ವರ್ತಿಸುವಂತೆ ಸ್ಪಷ್ಟವಾಗಿ ಆದೇಶಿಸಿದ್ದಾರೆ.

ಇದರಡಿ ದಾಖಲಾಗಿರುವ ಪ್ರಕರಣಗಳಿಂದ ಜೈಲುಗಳಲ್ಲಿ ಕೊಳೆಯುತ್ತಿರುವವರು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿದರು. ಎಲ್ಲ ಬಾಕಿ ಉಳಿದಿರುವ ತನಿಖೆಗಳು, ಮೇಲ್ಮನವಿಗಳು ಮತ್ತು ಸೆಕ್ಷನ್ 124A ಅಡಿಯಲ್ಲಿ ಸಲ್ಲಿಸಲಾದ ಆರೋಪಗಳನ್ನು ತಡೆಹಿಡಿಯುವ ಮೂಲಕ ಜನರ ಸ್ವಾತಂತ್ರ್ಯಕ್ಕೆ ಮಹತ್ವ ನೀಡಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರೊಂದು ಹರಿದ ಘಟನೆಗೆ ಸಂಬಂಧಿಸಿದಂತೆ ಪತ್ರವನ್ನು ಪರಿಗಣಿಸಿ ಸ್ವತಂತ್ರ ತನಿಖೆಗೆ ಆದೇಶ ನೀಡಲಾಗಿದೆ.

‘ಫಾಸ್ಟರ್’ ಎಂಬ ಸುರಕ್ಷಿತ ಎಲೆಕ್ಟ್ರಾನಿಕ್ ವ್ಯವಸ್ಥೆ: ಮತ್ತು ಎಲ್ಲಕ್ಕಿಂತ ಮುಖ್ಯವಾಗಿ.. ನ್ಯಾಯಾಲಯಗಳು ಜಾಮೀನು ನೀಡಿದ್ದರೂ.. ಆ ಆದೇಶಗಳು ಕೈಗೆ ಸಿಗದಿರುವ ಕಾರಣದಿಂದ ಕೈದಿಗಳ ಬಿಡುಗಡೆ ವಿಳಂಬವಾಗುವುದನ್ನು ತಪ್ಪಿಸಲು ‘ಫಾಸ್ಟರ್’ ಎಂಬ ಸುರಕ್ಷಿತ ಎಲೆಕ್ಟ್ರಾನಿಕ್ ವ್ಯವಸ್ಥೆ ಲಭ್ಯವಾಗಿದೆ. ಇದರಿಂದ ದೀರ್ಘಾವಧಿಯ ಸಮಸ್ಯೆಯೊಂದು ಪರಿಹಾರವಾದಂತಾಗಿದೆ.

ಕಠಿಣ ಯುಎಪಿಎ ಕಾಯ್ದೆಯಡಿ ಬಂಧಿಸಿರುವ ಕೇರಳದ ಪತ್ರಕರ್ತರಿಗೆ ದೆಹಲಿಯಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ನ್ಯಾಯಮೂರ್ತಿ ರಮಣ ಆದೇಶಿಸಿದರು. ಹೀಗಾಗಿ ತನಿಖೆಯಲ್ಲಿರುವವರಿಗೂ ಬದುಕುವ ಮೂಲಭೂತ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದರು. ಜಾರ್ಖಂಡ್‌ನಲ್ಲಿ ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಹಾಡಹಗಲೇ ಆಟೋ ಡಿಕ್ಕಿ ಹೊಡೆಸಿ ಸಾಯಿಸಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಆ ದುಷ್ಕೃತ್ಯದ ಅಪರಾಧಿಗಳಿಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶಿಕ್ಷೆ ವಿಧಿಸಲಾಯಿತು. ಹೀಗಾಗಿ ನ್ಯಾಯಾಂಗದಲ್ಲಿ ಜನರ ವಿಶ್ವಾಸ ಹೆಚ್ಚಾಗುವಂತಾಯಿತು.

ಕೊರೊನಾ ವೇಳೆ ಸುಮೋಟೋ ಪ್ರಕರಣ ಕೈಗೆತ್ತಿಕೊಂಡು ತೀರ್ಪು: ಕೊರೊನಾ ಸಮಯದಲ್ಲಿಯೂ ಸಹ, ನ್ಯಾಯಮೂರ್ತಿ ರಮಣ ಅವರು ಸುಮೋಟೋ ಆಗಿ ಪ್ರಕರಣವನ್ನು ತೆಗೆದುಕೊಂಡು, ಆಮ್ಲಜನಕ ಪೂರೈಕೆ ಮತ್ತು ಲಸಿಕೆ ಬೆಲೆಗಳ ವಿಷಯದಲ್ಲಿ ಮಧ್ಯಪ್ರವೇಶಿಸಿದರು. ಇದರಿಂದ ಸರ್ಕಾರ ತನ್ನ ನೀತಿಯನ್ನು ಬದಲಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಯನ್ನು ಘೋಷಿಸಬೇಕಾಯಿತು.

ಆ ಸಂದರ್ಭದಲ್ಲಿ ಕೇರಳದ ಲಿಡ್ವಿನಾ ಜೋಸೆಫ್ ಎಂಬ 5ನೇ ತರಗತಿಯ ಬಾಲಕಿ ನ್ಯಾಯಾಲಯದ ಮಧ್ಯಪ್ರವೇಶವನ್ನು ಶ್ಲಾಘಿಸಿ ಸಿಜೆಐಗೆ ಪತ್ರ ಬರೆದಿದ್ದಾಳೆ. ಇದು ಅವರ ಅಧಿಕಾರಾವಧಿಯಲ್ಲಿ ಸಾಮಾನ್ಯ ಜನರ ಮೇಲೆ ಸುಪ್ರೀಂ ಕೋರ್ಟ್​​ನ ಕಾರ್ಯನಿರ್ವಹಣೆಯ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ರಂಗಾರೆಡ್ಡಿ ಜಿಲ್ಲೆಯ ವೈಷ್ಣವಿ ಎಂಬ 8ನೇ ತರಗತಿಯ ಬಾಲಕಿ ತನ್ನ ಗ್ರಾಮಕ್ಕೆ ಬಸ್‌ಗಾಗಿ ಸಿಜೆಐ ನ್ಯಾಯಮೂರ್ತಿ ರಮಣ ಅವರಿಗೆ ಪತ್ರ ಬರೆದಿರುವುದು ಅವರ ಕೆಲಸ ಸಾಮಾನ್ಯ ಜನರನ್ನು ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪಂಜಾಬ್​ ವರ್ಸಸ್​​ ಕೇಂದ್ರ- ಸಿಜೆಐ ಸಮಯೋಚಿತ ತೀರ್ಪು: ಪಂಜಾಬ್ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಪ್ರಕರಣದಲ್ಲಿ ನ್ಯಾಯಮೂರ್ತಿ ಎನ್ ವಿ ರಮಣ ಸಮಯೋಚಿತ ತೀರ್ಪನ್ನು ನೀಡಿದರು. ಜನವರಿಯಲ್ಲಿ ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪಗಳ ಕುರಿತು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.

ಇತ್ತೀಚೆಗೆ ಶಿವಸೇನೆ ವಿಭಜನೆ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಲಾಗಿತ್ತು. ಪರ್ಯಾಯ ಪರಿಹಾರ ವೇದಿಕೆಯಾದ ಮಧ್ಯಸ್ಥಿಕೆಯನ್ನು ಉತ್ತೇಜಿಸುವಲ್ಲಿ ನ್ಯಾಯಮೂರ್ತಿ ರಮಣ ಅವರು ಉತ್ತಮ ಕೆಲಸ ಮಾಡಿದ್ದಾರೆ. ನ್ಯಾಯಾಲಯಗಳು ಕೆಲಸದ ಹೊರೆಯಿಂದ ಮುಳುಗಿರುವ ಈ ಸಮಯದಲ್ಲಿ, ಹೈದರಾಬಾದ್‌ನಲ್ಲಿ ವಿಶ್ವ ದರ್ಜೆಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸುವುದು ಉತ್ತಮ ವಿಷಯ. ಈಗಲೂ ದೇಶಾದ್ಯಂತ ಚರ್ಚೆಯಾಗುತ್ತಿರುವ ಉಚಿತ ಯೋಜನೆಗಳ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ದೀರ್ಘಕಾಲ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತನಿಖೆ: ಸಿಜೆಐ ಆಗುವ ಮುನ್ನ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಸಾರ್ವಜನಿಕ ಪ್ರತಿನಿಧಿಗಳ ವಿರುದ್ಧ ದೀರ್ಘಕಾಲ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಬೇಕೆಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಸೆಪ್ಟೆಂಬರ್ 17, 2020 ರಂದು, ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಪೀಠವು ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳಿಗೆ ಆದೇಶಗಳನ್ನು ನೀಡಿತು.

ಜಸ್ಟಿಸ್ ರಮಣ ಅವರು ಕೀರ್ತಿ ವರ್ಸಸ್ ಓರಿಯಂಟಲ್ ಇನ್ಶುರೆನ್ಸ್ ಪ್ರಕರಣದಲ್ಲಿ ಗೃಹಿಣಿಯರಿಗೆ ಕುಟುಂಬದಲ್ಲಿ ಆದಾಯ ಗಳಿಸುವವರಿಗೆ ಸಮಾನ ಸ್ಥಾನಮಾನ ನೀಡಬೇಕು ಮತ್ತು ಕುಟುಂಬಕ್ಕೆ ಅವರ ಸೇವೆಯನ್ನು ಗುರುತಿಸಬೇಕು ಎಂದು ನಿರ್ಣಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧ ಪ್ರಕರಣದ ವಿಚಾರಣೆ ವೇಳೆ.. ಈ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮೂಲಭೂತ ಹಕ್ಕು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಮತ್ತೊಂದು ಐತಿಹಾಸಿಕ ತೀರ್ಪು ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕು ಅಡಿಯಲ್ಲಿದೆ: ನ್ಯಾಯಮೂರ್ತಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕು ಅಡಿಯಲ್ಲಿದೆ ಎಂದು ತೀರ್ಪು ನೀಡಿದ ಪೀಠದ ಸದಸ್ಯರಾಗಿದ್ದರು. 2018ರಲ್ಲಿ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಕಾಯಂ ಆಯೋಗ ರಚನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸದೆ ಮಹಿಳಾ ಅಧಿಕಾರಿಗಳಿಗೆ ಏಕೆ ಕಿರುಕುಳ ನೀಡಲಾಗುತ್ತಿದೆ ಎಂದು ಕೇಂದ್ರವನ್ನು ಪ್ರಶ್ನಿಸಿದ್ದ ನ್ಯಾಯಮೂರ್ತಿ ಎನ್.ವಿ., ಇದನ್ನು ತಾರತಮ್ಯ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನ್ಯಾಯಮೂರ್ತಿ ಎನ್.ವಿ.ರಮಣ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾಗ ಮಹಿಳೆಯರಿಗೆ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು 2020 ರಲ್ಲಿ `ಕಾನೂನು ಅರಿವಿನ ಮೂಲಕ ಮಹಿಳೆಯರ ಸಬಲೀಕರಣ' ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಇದನ್ನು ಓದಿ:ಪಕ್ಷಾತೀತ ನಿಲುವು, ಮಹತ್ವದ ತೀರ್ಪುಗಳಿಂದ ನಾಡಿಗೆ ಸ್ಪೂರ್ತಿ ಸಿಜೆಐ ಎನ್​ ವಿ ರಮಣ

ನ್ಯಾಯಮೂರ್ತಿ ನೂತಲಪಾಟಿ ವೆಂಕಟರಮಣ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದು ಅಷ್ಟೊಂದು ಸರಾಗವಾಗಿರಲಿಲ್ಲ. ಆ ಹುದ್ದೆಗೇರಬೇಕಾದರೆ ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಯಿತು. ಆದರೆ ಅವರು ತಮಗೆ ಎದುರಾದ ಕಷ್ಟಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನಡೆದರು. ದೈನಂದಿನ ಜೀವನದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯು ಅವರನ್ನು ಮೇಲಕ್ಕೆ ನಿಲ್ಲುವಂತೆ ಮಾಡಿತು.

ಪರಿಣಾಮವಾಗಿ, ಅವರು ಮೌಲ್ಯಯುತ ತೀರ್ಪುಗಳೊಂದಿಗೆ ಸುಪ್ರೀಂ ಕೋರ್ಟ್ ಮುಖ್ಯಸ್ಥನ ಸ್ಥಾನಕ್ಕೆ ಹೆಚ್ಚು ಖ್ಯಾತಿಯನ್ನು ತಂದರು. ಅವರು ಐತಿಹಾಸಿಕ ತೀರ್ಪುಗಳೊಂದಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇತಿಹಾಸದಲ್ಲಿ ಸ್ಫೂರ್ತಿಯಾಗಿ ಉಳಿಯುವಂತಹ ತೀರ್ಪುಗಳನ್ನು ನೀಡಿದ ಶ್ರೇಷ್ಠ ನ್ಯಾಯಾಧೀಶರು ಎಂಬ ಶ್ಲಾಘನೆಗೆ ಇವರು ಪಾತ್ರರಾಗಿದ್ದಾರೆ.

ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾದರೆ ನ್ಯಾಯಾಲಯ ಪ್ರೇಕ್ಷಕನ ಪಾತ್ರ ವಹಿಸದೆ ಜನರ ಪರ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ರಮಣ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ರಮಣ ಅವರು ತಮ್ಮ ಸೇವಾವಧಿಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಅವರ ಪ್ರಯತ್ನಗಳ ಕಾರಣದಿಂದಲೇ ಕೆಲವು ಪ್ರಮುಖ ಆದೇಶಗಳನ್ನು ಹೊರಡಿಸಲಾಯಿತು.

ಸಿಬಿಐ ಮುಖ್ಯಸ್ಥರ ಆಯ್ಕೆ ಸಂಬಂಧದ ಸಭೆ: ನ್ಯಾಯಮೂರ್ತಿ ಎನ್‌ವಿ ರಮಣ ಅವರು ಅಧಿಕಾರ ವಹಿಸಿಕೊಂಡ ವಾರಗಳಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಎಲ್ಲರಿಗೂ ತಮ್ಮ ನಿಲುವನ್ನು ತಿಳಿಸಿದರು. ಪ್ರಧಾನಿ, ವಿರೋಧ ಪಕ್ಷದ ನಾಯಕರು ಮತ್ತು ಸಿಜೆಐ ಸದಸ್ಯರಿದ್ದ ಸಮಿತಿಯ ಸಭೆಯಲ್ಲಿ, ಸಿಬಿಐ ಮುಖ್ಯಸ್ಥರ ಆಯ್ಕೆಗೆ ಪ್ರತಿಭೆಯೇ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪುನರುಚ್ಚರಿಸಲಾಗಿದೆ. ಕನಿಷ್ಠ 6 ತಿಂಗಳ ಅಧಿಕಾರಾವಧಿ ಇರುವವರನ್ನು ಪ್ರತಿಭೆ ಜತೆಗೆ ಪರಿಗಣಿಸಬೇಕು ಎಂದು ಹೇಳಲಾಗಿದೆ. ಅಪೆಕ್ಸ್ ಕಮಿಟಿ ಸಭೆಯು ದೇಶದಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಹೊಸ ನಿಯತಾಂಕವನ್ನು ನೀಡಿದೆ.

ಎಲ್ಲರಿಗೂ ನ್ಯಾಯ ತಲುಪಿದಾಗ ಮಾತ್ರ ಸಾರ್ಥಕ: ನ್ಯಾಯಮೂರ್ತಿ ಎನ್.ವಿ.ರಮಣ ಅವರು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನೀಡಿರುವ ಪ್ರಮುಖ ತೀರ್ಪುಗಳು ಮತ್ತು ಅವರು ಮಾಡಿದ ಟೀಕೆಗಳನ್ನು ನೋಡುವ ಮೊದಲು ಇನ್ನೊಂದು ವಿಷಯ ತಿಳಿಯಬೇಕು. ಸಂವಿಧಾನ ನೀಡಿರುವ ನ್ಯಾಯ ಎಲ್ಲರಿಗೂ ತಲುಪಿದಾಗ ಮಾತ್ರ ವ್ಯವಸ್ಥೆ ಸಾರ್ಥಕವಾಗುತ್ತದೆ ಎಂಬುದು ಅವರ ದೃಢ ಸಂಕಲ್ಪವಾಗಿತ್ತು. ಅವರ ತೀರ್ಪುಗಳಲ್ಲಿ ನ್ಯಾಯಶಾಸ್ತ್ರ ಹಾಗೂ ಮಾನವೀಯತೆ ಎದ್ದುಕಾಣುತ್ತದೆ.

ಸಿಜೆಐ ಆಗಿ ತಮ್ಮ 16 ತಿಂಗಳ ಅಧಿಕಾರಾವಧಿಯಲ್ಲಿ, ನ್ಯಾಯಮೂರ್ತಿ ಎನ್‌ವಿ ರಮಣ ಅವರು ಸಾಮಾನ್ಯ ಕಾನೂನು ಮತ್ತು ಸಾಂವಿಧಾನಿಕ ಮೌಲ್ಯಗಳ ತತ್ವಗಳನ್ನು ಭದ್ರಪಡಿಸುವ ಮಹತ್ವದ ತೀರ್ಪುಗಳನ್ನು ನೀಡಿದರು. ಅವರ ಉಪಕ್ರಮದ ಮೇರೆಗೆ ಸುಪ್ರೀಂ ಕೋರ್ಟ್ ಹೊರಡಿಸಿದ ಕೆಲವು ಪ್ರಮುಖ ಆದೇಶಗಳನ್ನು ನೋಡಿದರೆ, ದೇಶವನ್ನು ಬೆಚ್ಚಿಬೀಳಿಸಿದ ಪೆಗಾಸಸ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನರ ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ರಕ್ಷಿಸುವ ಉದ್ದೇಶವು ಆದೇಶದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ದೇಶದ್ರೋಹ ಕಾನೂನು ಸಾಮಾನ್ಯರ ವಿರುದ್ಧ ಹೇರುವುದನ್ನು ತಡೆದ ಕೋರ್ಟ್​: ವಸಾಹತುಶಾಹಿ ಕಾಲದ ದೇಶದ್ರೋಹ ಕಾನೂನನ್ನು ಸಾಮಾನ್ಯ ಜನರ ವಿರುದ್ಧ ಸರ್ಕಾರಗಳು ಹೇರುವುದನ್ನು ತಡೆಯಲು ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿತು. ನ್ಯಾಯಮೂರ್ತಿ ಎನ್.ವಿ.ರಮಣ ಅವರು, ಕೇಂದ್ರ ಸರ್ಕಾರವು ಅದನ್ನು ಪರಿಶೀಲಿಸುವವರೆಗೆ ಸೆಕ್ಷನ್ 124 ಎ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯಮದಿಂದ ವರ್ತಿಸುವಂತೆ ಸ್ಪಷ್ಟವಾಗಿ ಆದೇಶಿಸಿದ್ದಾರೆ.

ಇದರಡಿ ದಾಖಲಾಗಿರುವ ಪ್ರಕರಣಗಳಿಂದ ಜೈಲುಗಳಲ್ಲಿ ಕೊಳೆಯುತ್ತಿರುವವರು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿದರು. ಎಲ್ಲ ಬಾಕಿ ಉಳಿದಿರುವ ತನಿಖೆಗಳು, ಮೇಲ್ಮನವಿಗಳು ಮತ್ತು ಸೆಕ್ಷನ್ 124A ಅಡಿಯಲ್ಲಿ ಸಲ್ಲಿಸಲಾದ ಆರೋಪಗಳನ್ನು ತಡೆಹಿಡಿಯುವ ಮೂಲಕ ಜನರ ಸ್ವಾತಂತ್ರ್ಯಕ್ಕೆ ಮಹತ್ವ ನೀಡಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರೊಂದು ಹರಿದ ಘಟನೆಗೆ ಸಂಬಂಧಿಸಿದಂತೆ ಪತ್ರವನ್ನು ಪರಿಗಣಿಸಿ ಸ್ವತಂತ್ರ ತನಿಖೆಗೆ ಆದೇಶ ನೀಡಲಾಗಿದೆ.

‘ಫಾಸ್ಟರ್’ ಎಂಬ ಸುರಕ್ಷಿತ ಎಲೆಕ್ಟ್ರಾನಿಕ್ ವ್ಯವಸ್ಥೆ: ಮತ್ತು ಎಲ್ಲಕ್ಕಿಂತ ಮುಖ್ಯವಾಗಿ.. ನ್ಯಾಯಾಲಯಗಳು ಜಾಮೀನು ನೀಡಿದ್ದರೂ.. ಆ ಆದೇಶಗಳು ಕೈಗೆ ಸಿಗದಿರುವ ಕಾರಣದಿಂದ ಕೈದಿಗಳ ಬಿಡುಗಡೆ ವಿಳಂಬವಾಗುವುದನ್ನು ತಪ್ಪಿಸಲು ‘ಫಾಸ್ಟರ್’ ಎಂಬ ಸುರಕ್ಷಿತ ಎಲೆಕ್ಟ್ರಾನಿಕ್ ವ್ಯವಸ್ಥೆ ಲಭ್ಯವಾಗಿದೆ. ಇದರಿಂದ ದೀರ್ಘಾವಧಿಯ ಸಮಸ್ಯೆಯೊಂದು ಪರಿಹಾರವಾದಂತಾಗಿದೆ.

ಕಠಿಣ ಯುಎಪಿಎ ಕಾಯ್ದೆಯಡಿ ಬಂಧಿಸಿರುವ ಕೇರಳದ ಪತ್ರಕರ್ತರಿಗೆ ದೆಹಲಿಯಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ನ್ಯಾಯಮೂರ್ತಿ ರಮಣ ಆದೇಶಿಸಿದರು. ಹೀಗಾಗಿ ತನಿಖೆಯಲ್ಲಿರುವವರಿಗೂ ಬದುಕುವ ಮೂಲಭೂತ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದರು. ಜಾರ್ಖಂಡ್‌ನಲ್ಲಿ ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಹಾಡಹಗಲೇ ಆಟೋ ಡಿಕ್ಕಿ ಹೊಡೆಸಿ ಸಾಯಿಸಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಆ ದುಷ್ಕೃತ್ಯದ ಅಪರಾಧಿಗಳಿಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶಿಕ್ಷೆ ವಿಧಿಸಲಾಯಿತು. ಹೀಗಾಗಿ ನ್ಯಾಯಾಂಗದಲ್ಲಿ ಜನರ ವಿಶ್ವಾಸ ಹೆಚ್ಚಾಗುವಂತಾಯಿತು.

ಕೊರೊನಾ ವೇಳೆ ಸುಮೋಟೋ ಪ್ರಕರಣ ಕೈಗೆತ್ತಿಕೊಂಡು ತೀರ್ಪು: ಕೊರೊನಾ ಸಮಯದಲ್ಲಿಯೂ ಸಹ, ನ್ಯಾಯಮೂರ್ತಿ ರಮಣ ಅವರು ಸುಮೋಟೋ ಆಗಿ ಪ್ರಕರಣವನ್ನು ತೆಗೆದುಕೊಂಡು, ಆಮ್ಲಜನಕ ಪೂರೈಕೆ ಮತ್ತು ಲಸಿಕೆ ಬೆಲೆಗಳ ವಿಷಯದಲ್ಲಿ ಮಧ್ಯಪ್ರವೇಶಿಸಿದರು. ಇದರಿಂದ ಸರ್ಕಾರ ತನ್ನ ನೀತಿಯನ್ನು ಬದಲಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಯನ್ನು ಘೋಷಿಸಬೇಕಾಯಿತು.

ಆ ಸಂದರ್ಭದಲ್ಲಿ ಕೇರಳದ ಲಿಡ್ವಿನಾ ಜೋಸೆಫ್ ಎಂಬ 5ನೇ ತರಗತಿಯ ಬಾಲಕಿ ನ್ಯಾಯಾಲಯದ ಮಧ್ಯಪ್ರವೇಶವನ್ನು ಶ್ಲಾಘಿಸಿ ಸಿಜೆಐಗೆ ಪತ್ರ ಬರೆದಿದ್ದಾಳೆ. ಇದು ಅವರ ಅಧಿಕಾರಾವಧಿಯಲ್ಲಿ ಸಾಮಾನ್ಯ ಜನರ ಮೇಲೆ ಸುಪ್ರೀಂ ಕೋರ್ಟ್​​ನ ಕಾರ್ಯನಿರ್ವಹಣೆಯ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ರಂಗಾರೆಡ್ಡಿ ಜಿಲ್ಲೆಯ ವೈಷ್ಣವಿ ಎಂಬ 8ನೇ ತರಗತಿಯ ಬಾಲಕಿ ತನ್ನ ಗ್ರಾಮಕ್ಕೆ ಬಸ್‌ಗಾಗಿ ಸಿಜೆಐ ನ್ಯಾಯಮೂರ್ತಿ ರಮಣ ಅವರಿಗೆ ಪತ್ರ ಬರೆದಿರುವುದು ಅವರ ಕೆಲಸ ಸಾಮಾನ್ಯ ಜನರನ್ನು ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪಂಜಾಬ್​ ವರ್ಸಸ್​​ ಕೇಂದ್ರ- ಸಿಜೆಐ ಸಮಯೋಚಿತ ತೀರ್ಪು: ಪಂಜಾಬ್ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಪ್ರಕರಣದಲ್ಲಿ ನ್ಯಾಯಮೂರ್ತಿ ಎನ್ ವಿ ರಮಣ ಸಮಯೋಚಿತ ತೀರ್ಪನ್ನು ನೀಡಿದರು. ಜನವರಿಯಲ್ಲಿ ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪಗಳ ಕುರಿತು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.

ಇತ್ತೀಚೆಗೆ ಶಿವಸೇನೆ ವಿಭಜನೆ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಲಾಗಿತ್ತು. ಪರ್ಯಾಯ ಪರಿಹಾರ ವೇದಿಕೆಯಾದ ಮಧ್ಯಸ್ಥಿಕೆಯನ್ನು ಉತ್ತೇಜಿಸುವಲ್ಲಿ ನ್ಯಾಯಮೂರ್ತಿ ರಮಣ ಅವರು ಉತ್ತಮ ಕೆಲಸ ಮಾಡಿದ್ದಾರೆ. ನ್ಯಾಯಾಲಯಗಳು ಕೆಲಸದ ಹೊರೆಯಿಂದ ಮುಳುಗಿರುವ ಈ ಸಮಯದಲ್ಲಿ, ಹೈದರಾಬಾದ್‌ನಲ್ಲಿ ವಿಶ್ವ ದರ್ಜೆಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸುವುದು ಉತ್ತಮ ವಿಷಯ. ಈಗಲೂ ದೇಶಾದ್ಯಂತ ಚರ್ಚೆಯಾಗುತ್ತಿರುವ ಉಚಿತ ಯೋಜನೆಗಳ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ದೀರ್ಘಕಾಲ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತನಿಖೆ: ಸಿಜೆಐ ಆಗುವ ಮುನ್ನ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಸಾರ್ವಜನಿಕ ಪ್ರತಿನಿಧಿಗಳ ವಿರುದ್ಧ ದೀರ್ಘಕಾಲ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಬೇಕೆಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಸೆಪ್ಟೆಂಬರ್ 17, 2020 ರಂದು, ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಪೀಠವು ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳಿಗೆ ಆದೇಶಗಳನ್ನು ನೀಡಿತು.

ಜಸ್ಟಿಸ್ ರಮಣ ಅವರು ಕೀರ್ತಿ ವರ್ಸಸ್ ಓರಿಯಂಟಲ್ ಇನ್ಶುರೆನ್ಸ್ ಪ್ರಕರಣದಲ್ಲಿ ಗೃಹಿಣಿಯರಿಗೆ ಕುಟುಂಬದಲ್ಲಿ ಆದಾಯ ಗಳಿಸುವವರಿಗೆ ಸಮಾನ ಸ್ಥಾನಮಾನ ನೀಡಬೇಕು ಮತ್ತು ಕುಟುಂಬಕ್ಕೆ ಅವರ ಸೇವೆಯನ್ನು ಗುರುತಿಸಬೇಕು ಎಂದು ನಿರ್ಣಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧ ಪ್ರಕರಣದ ವಿಚಾರಣೆ ವೇಳೆ.. ಈ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮೂಲಭೂತ ಹಕ್ಕು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಮತ್ತೊಂದು ಐತಿಹಾಸಿಕ ತೀರ್ಪು ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕು ಅಡಿಯಲ್ಲಿದೆ: ನ್ಯಾಯಮೂರ್ತಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯೂ ಮಾಹಿತಿ ಹಕ್ಕು ಅಡಿಯಲ್ಲಿದೆ ಎಂದು ತೀರ್ಪು ನೀಡಿದ ಪೀಠದ ಸದಸ್ಯರಾಗಿದ್ದರು. 2018ರಲ್ಲಿ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಕಾಯಂ ಆಯೋಗ ರಚನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸದೆ ಮಹಿಳಾ ಅಧಿಕಾರಿಗಳಿಗೆ ಏಕೆ ಕಿರುಕುಳ ನೀಡಲಾಗುತ್ತಿದೆ ಎಂದು ಕೇಂದ್ರವನ್ನು ಪ್ರಶ್ನಿಸಿದ್ದ ನ್ಯಾಯಮೂರ್ತಿ ಎನ್.ವಿ., ಇದನ್ನು ತಾರತಮ್ಯ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನ್ಯಾಯಮೂರ್ತಿ ಎನ್.ವಿ.ರಮಣ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾಗ ಮಹಿಳೆಯರಿಗೆ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು 2020 ರಲ್ಲಿ `ಕಾನೂನು ಅರಿವಿನ ಮೂಲಕ ಮಹಿಳೆಯರ ಸಬಲೀಕರಣ' ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಇದನ್ನು ಓದಿ:ಪಕ್ಷಾತೀತ ನಿಲುವು, ಮಹತ್ವದ ತೀರ್ಪುಗಳಿಂದ ನಾಡಿಗೆ ಸ್ಪೂರ್ತಿ ಸಿಜೆಐ ಎನ್​ ವಿ ರಮಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.