ETV Bharat / bharat

ತನಿಖಾ ಸಂಸ್ಥೆಗಳಿಗೆ ಪತ್ರಕರ್ತರು ಸುದ್ದಿಮೂಲ ತಿಳಿಸಲೇಬೇಕು: ಸಿಬಿಐ ವಿಶೇಷ ನ್ಯಾಯಾಲಯದ ಆದೇಶ

author img

By

Published : Jan 19, 2023, 4:15 PM IST

ಪ್ರಕರಣವೊಂದರ ತನಿಖೆಯಲ್ಲಿ ಅಗತ್ಯವಿದ್ದಾಗ ಪತ್ರಕರ್ತರು ತಮ್ಮ ಮಾಹಿತಿ ಮೂಲವನ್ನು ತನಿಖಾ ಸಂಸ್ಥೆಗಳಿಗೆ ಬಹಿರಂಗಪಡಿಸಲೇಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಪತ್ರಕರ್ತರಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಲು ಸಿಬಿಐಗೆ ಸಂಪೂರ್ಣ ಶಾಸನಬದ್ಧ ಅಧಿಕಾರವಿದೆ ಎಂದು ನ್ಯಾಯಾಲಯ ಹೇಳಿದೆ.

ತನಿಖಾ ಸಂಸ್ಥೆಗಳಿಗೆ ಪತ್ರಕರ್ತರು ಸುದ್ದಿಮೂಲ ತಿಳಿಸಲೇಬೇಕು: ಸಿಬಿಐ ವಿಶೇಷ ನ್ಯಾಯಾಲಯ ಆದೇಶ
journalists-must-report-source-to-investigating-agencies-cbi-special-court-orders

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ತನಿಖಾ ಸಂಸ್ಥೆಗಳೊಂದಿಗೆ ತಮ್ಮ ಸುದ್ದಿ ಮೂಲಗಳನ್ನು ಹಂಚಿಕೊಳ್ಳದಂತೆ ತಡೆಯುವ ಯಾವುದೇ ಶಾಸನಬದ್ಧ ವಿನಾಯಿತಿ ಪತ್ರಕರ್ತರಿಗೆ ಇಲ್ಲ ಎಂದು ಹೇಳಿರುವ ವಿಶೇಷ ಸಿಬಿಐ ಕೋರ್ಟ್, ಪ್ರಕರಣವೊಂದರ ​ಮುಕ್ತಾಯ ವರದಿಯನ್ನು (closure report) ತಿರಸ್ಕರಿಸಿದೆ. ಮುಕ್ತಾಯ ವರದಿ ತಿರಸ್ಕರಿಸಿದ ಸಿಬಿಐ ನ್ಯಾಯಾಲಯ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗೆ ನಿರ್ದೇಶಿಸಿದೆ. ಯಾವುದೇ ತನಿಖೆಯ ಸಮಯದಲ್ಲಿ ಸುದ್ದಿಯ ಮೂಲವನ್ನು ತಿಳಿಯುವುದು ಅಗತ್ಯ ಎನಿಸಿದಾಗ ಮತ್ತು ಅದು ವಿಚಾರಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದಾಗ, ತನಿಖಾ ಸಂಸ್ಥೆಯು ಈ ವಿಷಯವನ್ನು ಸಂಬಂಧಿಸಿದ ಪತ್ರಕರ್ತರ ಗಮನಕ್ಕೆ ತರಬಹುದು ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.

ತನಿಖೆ ನಡೆಯುತ್ತಿರುವ ಪ್ರಕರಣದ ಬಗ್ಗೆ ಸಾರ್ವಜನಿಕ ವ್ಯಕ್ತಿಯೊಬ್ಬರು ಯಾವುದೇ ಮಾಹಿತಿ ಅಥವಾ ಘಟನೆಯ ಬಗ್ಗೆ ಸಂಪರ್ಕ ಹೊಂದಿದ್ದರೆ, ಅಂಥ ಸಾರ್ವಜನಿಕ ವ್ಯಕ್ತಿಯನ್ನು ವಿಚಾರಣೆಗೊಳಪಡಿಸುವ ಎಲ್ಲ ಅಧಿಕಾರವನ್ನು ಭಾರತೀಯ ದಂಡ ಸಂಹಿತೆ (IPC) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಗಳ ಅಡಿ ತನಿಖಾ ಸಂಸ್ಥೆಯು ಹೊಂದಿರುತ್ತದೆ ಮತ್ತು ಹಾಗೆ ಪ್ರಕರಣದ ಮಾಹಿತಿ ಹೊಂದಿದ ಸಾರ್ವಜನಿಕ ವ್ಯಕ್ತಿಗಳು ವಿಚಾರಣೆಯಲ್ಲಿ ಭಾಗಿಯಾಗುವ ಕಾನೂನು ಬದ್ಧ ಜವಾಬ್ದಾರಿ ಹೊಂದಿರುತ್ತಾರೆ ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.

ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಅಂಜನಿ ಮಹಾಜನ್ ಮೇಲಿನ ಉಲ್ಲೇಖಗಳನ್ನು ಮಾಡಿದರು ಮತ್ತು ದಾಖಲೆಗಳ ಫೋರ್ಜರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿ ತಿರಸ್ಕರಿಸಿದರು. ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಲಾದ ದಾಖಲೆಗಳನ್ನು ಪಬ್ಲಿಷ್ ಮತ್ತು ಪ್ರಸಾರ ಮಾಡಿದ ಪತ್ರಕರ್ತರು ಅದರ ಮೂಲಗಳನ್ನು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರಿಸಲಾಗುತ್ತಿಲ್ಲ ಎಂದು ಸಿಬಿಐ ಹೇಳಿತ್ತು.

ಫೆಬ್ರವರಿ 9, 2009 ರಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಮಾಡಿ ವರದಿಯೊಂದನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಹಾಗೂ ಅದನ್ನೇ ಕೆಲ ಟಿವಿ ಚಾನೆಲ್​ಗಳು ಸಹ ಪ್ರಸಾರ ಮಾಡಿದ್ದವು. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುವ ಒಂದು ದಿನ ಮುಂಚೆ ಈ ರೀತಿ ವರದಿ ಪ್ರಕಟಿಸಲಾಗಿತ್ತು. ಇದೇ ಪ್ರಕರಣದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸದ್ಯ ನಡೆಯುತ್ತಿದೆ.

ಯಾರೋ ಅಪರಿಚಿತ ವ್ಯಕ್ತಿಗಳು ಸಿಬಿಐನ ಪ್ರತಿಷ್ಠೆಯನ್ನು ಹಾಳುಮಾಡಲು ನಕಲಿ ಮತ್ತು ಕಪೋಲಕಲ್ಪಿತ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಆಗ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿತ್ತು. ತನಿಖೆಯ ನಂತರ, ಸಿಬಿಐ ಈ ಪ್ರಕರಣದ ಕ್ಲೋಸಿಂಗ್​ ರಿಪೋರ್ಟ್​​ ಅನ್ನು ಕೋರ್ಟ್​​ಗೆ ಸಲ್ಲಿಸಿತು. ಆದರೆ, ನ್ಯಾಯಾಲಯವು ಸಿಬಿಐ ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿತು. ತನಿಖೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್​, ಪತ್ರಕರ್ತರನ್ನು ಪ್ರಶ್ನಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

ಸಂಬಂಧಿತ ಪತ್ರಕರ್ತರು ತಮ್ಮ ಸುದ್ದಿ ಮೂಲಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಕಾರಣವೊಂದರಿಂದಲೇ ತನಿಖಾ ಸಂಸ್ಥೆಯು ಸಂಪೂರ್ಣ ತನಿಖೆಯನ್ನು ಸ್ಥಗಿತಗೊಳಿಸುವಂತಿಲ್ಲ. ಕ್ರಿಮಿನಲ್ ಮೊಕದ್ದಮೆಯ ತನಿಖೆಯಲ್ಲಿ ಸಹಾಯ ಮಾಡುವ ಉದ್ದೇಶಕ್ಕಾಗಿ ಅಂಥ ಬಹಿರಂಗಪಡಿಸುವಿಕೆ ಅಗತ್ಯವಿದ್ದಾಗ, ಪತ್ರಕರ್ತರು ತಮ್ಮ ಸುದ್ದಿ ಮೂಲಗಳನ್ನು ತನಿಖಾ ಸಂಸ್ಥೆಗಳಿಗೆ ಬಹಿರಂಗಪಡಿಸದಂತಹ ನಿಯಮ ಪತ್ರಕರ್ತರಿಗೆ ಇಲ್ಲ. ಭಾರತದಲ್ಲಿ ಇಂತಹ ಯಾವುದೇ ಶಾಸನಬದ್ಧ ವಿನಾಯಿತಿಯೂ ಇಲ್ಲ ಎಂದು ನ್ಯಾಯಾಲಯವು ಜನವರಿ 17 ರಂದು ನೀಡಿದ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ದೇವರಾಜ ಅರಸು ಶಿಕ್ಷಣ ಟ್ರಸ್ಟ್‌​ನ ಕಾರ್ಯದರ್ಶಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ತನಿಖಾ ಸಂಸ್ಥೆಗಳೊಂದಿಗೆ ತಮ್ಮ ಸುದ್ದಿ ಮೂಲಗಳನ್ನು ಹಂಚಿಕೊಳ್ಳದಂತೆ ತಡೆಯುವ ಯಾವುದೇ ಶಾಸನಬದ್ಧ ವಿನಾಯಿತಿ ಪತ್ರಕರ್ತರಿಗೆ ಇಲ್ಲ ಎಂದು ಹೇಳಿರುವ ವಿಶೇಷ ಸಿಬಿಐ ಕೋರ್ಟ್, ಪ್ರಕರಣವೊಂದರ ​ಮುಕ್ತಾಯ ವರದಿಯನ್ನು (closure report) ತಿರಸ್ಕರಿಸಿದೆ. ಮುಕ್ತಾಯ ವರದಿ ತಿರಸ್ಕರಿಸಿದ ಸಿಬಿಐ ನ್ಯಾಯಾಲಯ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗೆ ನಿರ್ದೇಶಿಸಿದೆ. ಯಾವುದೇ ತನಿಖೆಯ ಸಮಯದಲ್ಲಿ ಸುದ್ದಿಯ ಮೂಲವನ್ನು ತಿಳಿಯುವುದು ಅಗತ್ಯ ಎನಿಸಿದಾಗ ಮತ್ತು ಅದು ವಿಚಾರಣೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದಾಗ, ತನಿಖಾ ಸಂಸ್ಥೆಯು ಈ ವಿಷಯವನ್ನು ಸಂಬಂಧಿಸಿದ ಪತ್ರಕರ್ತರ ಗಮನಕ್ಕೆ ತರಬಹುದು ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.

ತನಿಖೆ ನಡೆಯುತ್ತಿರುವ ಪ್ರಕರಣದ ಬಗ್ಗೆ ಸಾರ್ವಜನಿಕ ವ್ಯಕ್ತಿಯೊಬ್ಬರು ಯಾವುದೇ ಮಾಹಿತಿ ಅಥವಾ ಘಟನೆಯ ಬಗ್ಗೆ ಸಂಪರ್ಕ ಹೊಂದಿದ್ದರೆ, ಅಂಥ ಸಾರ್ವಜನಿಕ ವ್ಯಕ್ತಿಯನ್ನು ವಿಚಾರಣೆಗೊಳಪಡಿಸುವ ಎಲ್ಲ ಅಧಿಕಾರವನ್ನು ಭಾರತೀಯ ದಂಡ ಸಂಹಿತೆ (IPC) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಗಳ ಅಡಿ ತನಿಖಾ ಸಂಸ್ಥೆಯು ಹೊಂದಿರುತ್ತದೆ ಮತ್ತು ಹಾಗೆ ಪ್ರಕರಣದ ಮಾಹಿತಿ ಹೊಂದಿದ ಸಾರ್ವಜನಿಕ ವ್ಯಕ್ತಿಗಳು ವಿಚಾರಣೆಯಲ್ಲಿ ಭಾಗಿಯಾಗುವ ಕಾನೂನು ಬದ್ಧ ಜವಾಬ್ದಾರಿ ಹೊಂದಿರುತ್ತಾರೆ ಎಂದು ವಿಶೇಷ ಸಿಬಿಐ ಕೋರ್ಟ್ ಹೇಳಿದೆ.

ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (CMM) ಅಂಜನಿ ಮಹಾಜನ್ ಮೇಲಿನ ಉಲ್ಲೇಖಗಳನ್ನು ಮಾಡಿದರು ಮತ್ತು ದಾಖಲೆಗಳ ಫೋರ್ಜರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿ ತಿರಸ್ಕರಿಸಿದರು. ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಲಾದ ದಾಖಲೆಗಳನ್ನು ಪಬ್ಲಿಷ್ ಮತ್ತು ಪ್ರಸಾರ ಮಾಡಿದ ಪತ್ರಕರ್ತರು ಅದರ ಮೂಲಗಳನ್ನು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರಿಸಲಾಗುತ್ತಿಲ್ಲ ಎಂದು ಸಿಬಿಐ ಹೇಳಿತ್ತು.

ಫೆಬ್ರವರಿ 9, 2009 ರಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಮಾಡಿ ವರದಿಯೊಂದನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಹಾಗೂ ಅದನ್ನೇ ಕೆಲ ಟಿವಿ ಚಾನೆಲ್​ಗಳು ಸಹ ಪ್ರಸಾರ ಮಾಡಿದ್ದವು. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುವ ಒಂದು ದಿನ ಮುಂಚೆ ಈ ರೀತಿ ವರದಿ ಪ್ರಕಟಿಸಲಾಗಿತ್ತು. ಇದೇ ಪ್ರಕರಣದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸದ್ಯ ನಡೆಯುತ್ತಿದೆ.

ಯಾರೋ ಅಪರಿಚಿತ ವ್ಯಕ್ತಿಗಳು ಸಿಬಿಐನ ಪ್ರತಿಷ್ಠೆಯನ್ನು ಹಾಳುಮಾಡಲು ನಕಲಿ ಮತ್ತು ಕಪೋಲಕಲ್ಪಿತ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಆಗ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿತ್ತು. ತನಿಖೆಯ ನಂತರ, ಸಿಬಿಐ ಈ ಪ್ರಕರಣದ ಕ್ಲೋಸಿಂಗ್​ ರಿಪೋರ್ಟ್​​ ಅನ್ನು ಕೋರ್ಟ್​​ಗೆ ಸಲ್ಲಿಸಿತು. ಆದರೆ, ನ್ಯಾಯಾಲಯವು ಸಿಬಿಐ ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿತು. ತನಿಖೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್​, ಪತ್ರಕರ್ತರನ್ನು ಪ್ರಶ್ನಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

ಸಂಬಂಧಿತ ಪತ್ರಕರ್ತರು ತಮ್ಮ ಸುದ್ದಿ ಮೂಲಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಕಾರಣವೊಂದರಿಂದಲೇ ತನಿಖಾ ಸಂಸ್ಥೆಯು ಸಂಪೂರ್ಣ ತನಿಖೆಯನ್ನು ಸ್ಥಗಿತಗೊಳಿಸುವಂತಿಲ್ಲ. ಕ್ರಿಮಿನಲ್ ಮೊಕದ್ದಮೆಯ ತನಿಖೆಯಲ್ಲಿ ಸಹಾಯ ಮಾಡುವ ಉದ್ದೇಶಕ್ಕಾಗಿ ಅಂಥ ಬಹಿರಂಗಪಡಿಸುವಿಕೆ ಅಗತ್ಯವಿದ್ದಾಗ, ಪತ್ರಕರ್ತರು ತಮ್ಮ ಸುದ್ದಿ ಮೂಲಗಳನ್ನು ತನಿಖಾ ಸಂಸ್ಥೆಗಳಿಗೆ ಬಹಿರಂಗಪಡಿಸದಂತಹ ನಿಯಮ ಪತ್ರಕರ್ತರಿಗೆ ಇಲ್ಲ. ಭಾರತದಲ್ಲಿ ಇಂತಹ ಯಾವುದೇ ಶಾಸನಬದ್ಧ ವಿನಾಯಿತಿಯೂ ಇಲ್ಲ ಎಂದು ನ್ಯಾಯಾಲಯವು ಜನವರಿ 17 ರಂದು ನೀಡಿದ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ದೇವರಾಜ ಅರಸು ಶಿಕ್ಷಣ ಟ್ರಸ್ಟ್‌​ನ ಕಾರ್ಯದರ್ಶಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.