ETV Bharat / bharat

ಮಾನವ ಕಳ್ಳಸಾಗಣೆ : ಅಧಿಕಾರಿಗಳಿಂದ ಏಳು ಅಪ್ರಾಪ್ತರ ರಕ್ಷಣೆ

ಗುತ್ತಿಗೆದಾರರೊಬ್ಬರು ಈ ಮಕ್ಕಳನ್ನು ಪಂಜಾಬ್​ಗೆ ಕರೆದೊಯ್ದು, ಅಲ್ಲಿ ಕೆಲಸ ಮಾಡಿಸಲು ಹೊರಟಿದ್ದರಂತೆ ಎಂದು ತಿಳಿದು ಬಂದಿದೆ. ಮಕ್ಕಳನ್ನು CWCಗೆ ಹಸ್ತಾಂತರಿಸಲಾಗಿದೆ. ಅವರ ಪೋಷಕರು ಬಂದ ನಂತರ ಬಿಡುಗಡೆ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ..

author img

By

Published : Jul 2, 2021, 7:07 AM IST

ಮಾನವ ಕಳ್ಳಸಾಗಣೆ
ಮಾನವ ಕಳ್ಳಸಾಗಣೆ

ಮೊರದಾಬಾದ್ (ಉತ್ತರಪ್ರದೇಶ) : ಬಿಹಾರದಿಂದ ಪಂಜಾಬ್​ಗೆ ರೈಲಿನಲ್ಲಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ನಿರ್ದಿಷ್ಟ ಮಾಹಿತಿ ಮೇರೆಗೆ ಜಿಆರ್​ಪಿ ಮತ್ತು ಮಕ್ಕಳು ಆರೈಕೆಯ ಜಂಟಿ ತಂಡ ದಾಳಿ ನಡೆಸಿದೆ. ಈ ವೇಳೆ 32 ಮಕ್ಕಳು ಸೇರಿದಂತೆ 83 ಜನರನ್ನು ಮೊರದಾಬಾದ್​ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿದೆ. ಇದರಲ್ಲಿ ಏಳು ಅಪ್ರಾಪ್ತರ ಸಂಬಂಧಿಕರು ಯಾರೂ ಪ್ರಯಾಣಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಮೊರದಾಬಾದ್​ ಜಿಆರ್​ಪಿ ಎಸ್​ಪಿ ಅಪರ್ಣ ಗುಪ್ತಾರಿಗೆ ಬಿಹಾರದಿಂದ ಪಂಜಾಬ್‌ಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್​ಪ್ರೆಸ್​ನಲ್ಲಿ ಅಪ್ರಾಪ್ತರನ್ನು ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಎಸ್‌ಪಿ ಅಪರ್ಣ ಗುಪ್ತಾ ಮಕ್ಕಳ ಆರೈಕೆ ಮತ್ತು ಜಿಆರ್‌ಪಿ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿದ್ದರು. ಮೊರದಾಬಾದ್​ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಏಳು ಮಕ್ಕಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಎಸ್​ಪಿ ಅಪರ್ಣ ಗುಪ್ತಾ, ಕರ್ಮಭೂಮಿ ಎಕ್ಸ್​ಪ್ರೆಸ್​ನಲ್ಲಿ 213 ಮಕ್ಕಳನ್ನು ಬಿಹಾರದಿಂದ ಪಂಜಾಬ್​ಗೆ ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಇದರಲ್ಲಿ ಕೆಲ ಮಕ್ಕಳನ್ನು ಸೀತಾಪುರ ರೈಲ್ವೆ ನಿಲ್ದಾಣದಲ್ಲಿ ಬಿಡಲಾಯಿತು. 32 ಮಕ್ಕಳನ್ನು ಮೊರದಾಬಾದ್​ನಲ್ಲಿ ಇಳಿಸಲಾಗಿದೆ ಎಂದರು.

ಬಾಲ ಕಾರ್ಮಿಕರಾಗಲು ಹೊರಟಿದ್ದ ಏಳು ಚಿಣ್ಣರು

ಗುತ್ತಿಗೆದಾರರೊಬ್ಬರು ಈ ಮಕ್ಕಳನ್ನು ಪಂಜಾಬ್​ಗೆ ಕರೆದೊಯ್ದು, ಅಲ್ಲಿ ಕೆಲಸ ಮಾಡಿಸಲು ಹೊರಟಿದ್ದರಂತೆ ಎಂದು ತಿಳಿದು ಬಂದಿದೆ. ಮಕ್ಕಳನ್ನು CWCಗೆ ಹಸ್ತಾಂತರಿಸಲಾಗಿದೆ. ಅವರ ಪೋಷಕರು ಬಂದ ನಂತರ ಬಿಡುಗಡೆ ಮಾಡುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಮೊರದಾಬಾದ್ (ಉತ್ತರಪ್ರದೇಶ) : ಬಿಹಾರದಿಂದ ಪಂಜಾಬ್​ಗೆ ರೈಲಿನಲ್ಲಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ನಿರ್ದಿಷ್ಟ ಮಾಹಿತಿ ಮೇರೆಗೆ ಜಿಆರ್​ಪಿ ಮತ್ತು ಮಕ್ಕಳು ಆರೈಕೆಯ ಜಂಟಿ ತಂಡ ದಾಳಿ ನಡೆಸಿದೆ. ಈ ವೇಳೆ 32 ಮಕ್ಕಳು ಸೇರಿದಂತೆ 83 ಜನರನ್ನು ಮೊರದಾಬಾದ್​ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿದೆ. ಇದರಲ್ಲಿ ಏಳು ಅಪ್ರಾಪ್ತರ ಸಂಬಂಧಿಕರು ಯಾರೂ ಪ್ರಯಾಣಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಮೊರದಾಬಾದ್​ ಜಿಆರ್​ಪಿ ಎಸ್​ಪಿ ಅಪರ್ಣ ಗುಪ್ತಾರಿಗೆ ಬಿಹಾರದಿಂದ ಪಂಜಾಬ್‌ಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್​ಪ್ರೆಸ್​ನಲ್ಲಿ ಅಪ್ರಾಪ್ತರನ್ನು ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಎಸ್‌ಪಿ ಅಪರ್ಣ ಗುಪ್ತಾ ಮಕ್ಕಳ ಆರೈಕೆ ಮತ್ತು ಜಿಆರ್‌ಪಿ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿದ್ದರು. ಮೊರದಾಬಾದ್​ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಏಳು ಮಕ್ಕಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಎಸ್​ಪಿ ಅಪರ್ಣ ಗುಪ್ತಾ, ಕರ್ಮಭೂಮಿ ಎಕ್ಸ್​ಪ್ರೆಸ್​ನಲ್ಲಿ 213 ಮಕ್ಕಳನ್ನು ಬಿಹಾರದಿಂದ ಪಂಜಾಬ್​ಗೆ ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಇದರಲ್ಲಿ ಕೆಲ ಮಕ್ಕಳನ್ನು ಸೀತಾಪುರ ರೈಲ್ವೆ ನಿಲ್ದಾಣದಲ್ಲಿ ಬಿಡಲಾಯಿತು. 32 ಮಕ್ಕಳನ್ನು ಮೊರದಾಬಾದ್​ನಲ್ಲಿ ಇಳಿಸಲಾಗಿದೆ ಎಂದರು.

ಬಾಲ ಕಾರ್ಮಿಕರಾಗಲು ಹೊರಟಿದ್ದ ಏಳು ಚಿಣ್ಣರು

ಗುತ್ತಿಗೆದಾರರೊಬ್ಬರು ಈ ಮಕ್ಕಳನ್ನು ಪಂಜಾಬ್​ಗೆ ಕರೆದೊಯ್ದು, ಅಲ್ಲಿ ಕೆಲಸ ಮಾಡಿಸಲು ಹೊರಟಿದ್ದರಂತೆ ಎಂದು ತಿಳಿದು ಬಂದಿದೆ. ಮಕ್ಕಳನ್ನು CWCಗೆ ಹಸ್ತಾಂತರಿಸಲಾಗಿದೆ. ಅವರ ಪೋಷಕರು ಬಂದ ನಂತರ ಬಿಡುಗಡೆ ಮಾಡುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.