ETV Bharat / bharat

ತಾಕತ್ತಿದ್ದರೆ ರಾಹುಲ್​ ಗಾಂಧಿ ಗುಜರಾತ್​ನಿಂದ ಸ್ಪರ್ಧೆ ಮಾಡಲಿ: ಸ್ಮೃತಿ ಇರಾನಿ ಸವಾಲು

ರಾಹುಲ್ ಗಾಂಧಿ ಗುಜರಾತ್​ನ ಸಣ್ಣ ಚಹಾ ವ್ಯಾಪಾರಿಯಿಂದ ಹಣ ವಸೂಲಿ ಮಾಡಲಿ ಎಂದು ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.

author img

By

Published : Feb 16, 2021, 8:41 PM IST

Smriti Irani
Smriti Irani

ವನ್ಸದಾ(ಗುಜರಾತ್​): ತಾಕತ್ತಿದ್ದರೆ ರಾಹುಲ್​ ಗಾಂಧಿ ಗುಜರಾತ್​ನಿಂದ ಸ್ಪರ್ಧೆ ಮಾಡಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.

ಗುಜರಾತ್​ನಲ್ಲಿ ಸದ್ಯ ಮುನ್ಸಿಪಾಲ್​ ಚುನಾವಣೆ ನಡೆಯುತ್ತಿದ್ದು, ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವೆ ರಾಗಾ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಗುಜರಾತ್​ನ ಸಣ್ಣ ಚಹಾ ವ್ಯಾಪಾರಿಯಿಂದ ಹಣ ವಸೂಲಿ ಮಾಡಲಿ ಎಂದಿರುವ ಅವರು, ಗುಜರಾತ್​ನ ಹಾಗೂ ಇಲ್ಲಿನ ಜನರ ಬಗ್ಗೆ ಕಾಂಗ್ರೆಸ್​ಗೆ ದ್ವೇಷ ಮತ್ತು ಪೂರ್ವಗ್ರಹ ಪೀಡಿತ ಭಾವನೆ ಇದೆ ಎಂದಿದ್ದಾರೆ.

ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಈ ಹಿಂದೆ ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯ್​ ಪಟೇಲ್​​ ಪ್ರತಿಮೆ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿತ್ತು ಎಂದು ಆರೋಪ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಸ್ಸೋಂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದು, ಗುಜರಾತ್​ ಮೂಲದ ಚಹಾ ತೋಟದ ಮಾಲೀಕರಿಂದ ಅದನ್ನು ಭರಿಸುವಂತೆ ಮಾಡಲಾಗುವುದು ಎಂದಿದ್ದರು.

ವನ್ಸದಾ(ಗುಜರಾತ್​): ತಾಕತ್ತಿದ್ದರೆ ರಾಹುಲ್​ ಗಾಂಧಿ ಗುಜರಾತ್​ನಿಂದ ಸ್ಪರ್ಧೆ ಮಾಡಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.

ಗುಜರಾತ್​ನಲ್ಲಿ ಸದ್ಯ ಮುನ್ಸಿಪಾಲ್​ ಚುನಾವಣೆ ನಡೆಯುತ್ತಿದ್ದು, ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವೆ ರಾಗಾ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಗುಜರಾತ್​ನ ಸಣ್ಣ ಚಹಾ ವ್ಯಾಪಾರಿಯಿಂದ ಹಣ ವಸೂಲಿ ಮಾಡಲಿ ಎಂದಿರುವ ಅವರು, ಗುಜರಾತ್​ನ ಹಾಗೂ ಇಲ್ಲಿನ ಜನರ ಬಗ್ಗೆ ಕಾಂಗ್ರೆಸ್​ಗೆ ದ್ವೇಷ ಮತ್ತು ಪೂರ್ವಗ್ರಹ ಪೀಡಿತ ಭಾವನೆ ಇದೆ ಎಂದಿದ್ದಾರೆ.

ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಈ ಹಿಂದೆ ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯ್​ ಪಟೇಲ್​​ ಪ್ರತಿಮೆ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿತ್ತು ಎಂದು ಆರೋಪ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅಸ್ಸೋಂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ಮಿಕರ ಕೂಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದು, ಗುಜರಾತ್​ ಮೂಲದ ಚಹಾ ತೋಟದ ಮಾಲೀಕರಿಂದ ಅದನ್ನು ಭರಿಸುವಂತೆ ಮಾಡಲಾಗುವುದು ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.