ETV Bharat / bharat

ಭಾರತವೇ ನನ್ನ ಆದ್ಯತೆ, ಚೀನಾಗೆ ಮರಳುವ ಮಾತಿಲ್ಲ; ದಲೈ ಲಾಮಾ

author img

By

Published : Dec 19, 2022, 4:28 PM IST

ಚೀನಾ ಕೂಡ ತನ್ನ ನೀತಿಯನ್ನು ಸರಳಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಚೀನಾಕ್ಕೆ ಮರಳುವುದಿಲ್ಲ. ಭಾರತವೇ ನನ್ನ ಆದ್ಯತೆಯಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದೆ ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.

ಭಾರತವೇ ನನ್ನ ಆದತ್ಯೆ, ಚೀನಾಗೆ ಮರಳುವ ಮಾತಿಲ್ಲ; ದಲೈಲಾಮ
india-is-my-choice-no-return-to-china-dalai-lama

ಕಂಗ್ರಾ (ಹಿಮಾಚಲ ಪ್ರದೇಶ): ಭಾರತ ತಮ್ಮ ಖಾಯಂ ನಿವಾಸವಾಗಿದ್ದು, ಉತ್ತಮ ಸ್ಥಳವಾಗಿದೆ. ಭಾರತವನ್ನೇ ವಾಸಿಸಲು ಆಯ್ಕೆ ಮಾಡುತ್ತೇನೆ ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ.

ತವಾಂಗ್​ ಘಟರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಮಾನ್ಯವಾಗಿ ಹೇಳುವುದಾದರೆ ಹಲವು ವಿಷಯಗಳು ಅಭಿವೃದ್ಧಿ ಹೊಂದುತ್ತಿವೆ. ಯುರೋಪ್​ ಮತ್ತು ಆಫ್ರಿಕಾ ಕೂಡ. ಚೀನಾ ಕೂಡ ತನ್ನ ನೀತಿಯನ್ನು ಸರಳಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಚೀನಾಕ್ಕೆ ಮರಳುವುದಿಲ್ಲ. ಭಾರತವೇ ನನ್ನ ಆದ್ಯತೆಯಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದ್ದು, ಪಂಡಿತ್​​ ನೆಹರೂ ಆಯ್ಕೆಯಾಗಿದೆ. ಇದು ಖಾಯಂ ನಿವಾಸವಾಗಿದೆ ಎಂದಿದ್ದಾರೆ.

ಎರಡು ಮೂರು ದಿನಗಳ ಕಾಲ ಆರೋಗ್ಯ ತಪಾಸಣೆ ಹಿನ್ನೆಲೆ ದೆಹಲಿಯಲ್ಲಿ ಧರ್ಮಗುರು ದಲೈ ಲಾಮ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಅವರು ಬಿಹಾರದ ಬೋಧಗಯಾಕ್ಕೆ ತೆರಳಲಿದ್ದಾರೆ. ಈ ವೇಳೆ ಕಂಗ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾಮಾನ್ಯ ವೈದ್ಯಕೀಯ ತಪಾಸಣೆ ಇದೆ. ಇದರ ಹೊರತಾಗಿ ಯಾವುದೇ ದೈಹಿಕ ಸಮಸ್ಯೆ ಇಲ್ಲ. ಎಡಗೈನಲ್ಲಿ ಸ್ವಲ್ಪ ನೋವಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ತವಾಂಗ್​ ಪ್ರದೇಶದಲ್ಲಿ ಡಿ. 9ರಂದು ಚೀನಾ ಮತ್ತು ​ಭಾರತದ ಸೇನೆಯೊಂದಿಗಿನ ಘರ್ಷಣೆ ಬೆನ್ನಲ್ಲೇ ಈ ಪ್ರಶ್ನೆ ಉದ್ಬವಿಸಿದೆ. ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ತವಾಂಗ್​ ಗಡಿಯಲ್ಲಿ ಚೀನಿ ಸೈನಿಕರು ಒಳನುಗ್ಗುವ ಯತ್ನ ನಡೆಸಿದ್ದರು. ಆಗ ನಮ್ಮ ಸೇನೆ ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಘರ್ಷಣೆಯಲ್ಲಿ ನಮ್ಮ ಯೋಧರ ಪ್ರಾಣಹಾನಿಯಾಗಿಲ್ಲ. ಎರಡೂ ಕಡೆ ಸೈನಿಕರಿಗೆ ಗಾಯವಾಗಿದ್ದು, ನಮ್ಮ ಯೋಧರು ಹುತಾತ್ಮರಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಚೀನಾ ಗಡಿ ಸಂಘರ್ಷ ಚರ್ಚೆಗೆ ಸಿಗದ ಅನುಮತಿ: ಪ್ರತಿಪಕ್ಷಗಳಿಂದ ಸಭಾತ್ಯಾಗ

ಕಂಗ್ರಾ (ಹಿಮಾಚಲ ಪ್ರದೇಶ): ಭಾರತ ತಮ್ಮ ಖಾಯಂ ನಿವಾಸವಾಗಿದ್ದು, ಉತ್ತಮ ಸ್ಥಳವಾಗಿದೆ. ಭಾರತವನ್ನೇ ವಾಸಿಸಲು ಆಯ್ಕೆ ಮಾಡುತ್ತೇನೆ ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ.

ತವಾಂಗ್​ ಘಟರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಮಾನ್ಯವಾಗಿ ಹೇಳುವುದಾದರೆ ಹಲವು ವಿಷಯಗಳು ಅಭಿವೃದ್ಧಿ ಹೊಂದುತ್ತಿವೆ. ಯುರೋಪ್​ ಮತ್ತು ಆಫ್ರಿಕಾ ಕೂಡ. ಚೀನಾ ಕೂಡ ತನ್ನ ನೀತಿಯನ್ನು ಸರಳಗೊಳಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಚೀನಾಕ್ಕೆ ಮರಳುವುದಿಲ್ಲ. ಭಾರತವೇ ನನ್ನ ಆದ್ಯತೆಯಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದ್ದು, ಪಂಡಿತ್​​ ನೆಹರೂ ಆಯ್ಕೆಯಾಗಿದೆ. ಇದು ಖಾಯಂ ನಿವಾಸವಾಗಿದೆ ಎಂದಿದ್ದಾರೆ.

ಎರಡು ಮೂರು ದಿನಗಳ ಕಾಲ ಆರೋಗ್ಯ ತಪಾಸಣೆ ಹಿನ್ನೆಲೆ ದೆಹಲಿಯಲ್ಲಿ ಧರ್ಮಗುರು ದಲೈ ಲಾಮ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಅವರು ಬಿಹಾರದ ಬೋಧಗಯಾಕ್ಕೆ ತೆರಳಲಿದ್ದಾರೆ. ಈ ವೇಳೆ ಕಂಗ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾಮಾನ್ಯ ವೈದ್ಯಕೀಯ ತಪಾಸಣೆ ಇದೆ. ಇದರ ಹೊರತಾಗಿ ಯಾವುದೇ ದೈಹಿಕ ಸಮಸ್ಯೆ ಇಲ್ಲ. ಎಡಗೈನಲ್ಲಿ ಸ್ವಲ್ಪ ನೋವಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ತವಾಂಗ್​ ಪ್ರದೇಶದಲ್ಲಿ ಡಿ. 9ರಂದು ಚೀನಾ ಮತ್ತು ​ಭಾರತದ ಸೇನೆಯೊಂದಿಗಿನ ಘರ್ಷಣೆ ಬೆನ್ನಲ್ಲೇ ಈ ಪ್ರಶ್ನೆ ಉದ್ಬವಿಸಿದೆ. ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ತವಾಂಗ್​ ಗಡಿಯಲ್ಲಿ ಚೀನಿ ಸೈನಿಕರು ಒಳನುಗ್ಗುವ ಯತ್ನ ನಡೆಸಿದ್ದರು. ಆಗ ನಮ್ಮ ಸೇನೆ ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಘರ್ಷಣೆಯಲ್ಲಿ ನಮ್ಮ ಯೋಧರ ಪ್ರಾಣಹಾನಿಯಾಗಿಲ್ಲ. ಎರಡೂ ಕಡೆ ಸೈನಿಕರಿಗೆ ಗಾಯವಾಗಿದ್ದು, ನಮ್ಮ ಯೋಧರು ಹುತಾತ್ಮರಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಚೀನಾ ಗಡಿ ಸಂಘರ್ಷ ಚರ್ಚೆಗೆ ಸಿಗದ ಅನುಮತಿ: ಪ್ರತಿಪಕ್ಷಗಳಿಂದ ಸಭಾತ್ಯಾಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.