ಪುಣೆ( ಮಹಾರಾಷ್ಟ್ರ): ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದ ಮಹಿಳೆ ರಸ್ತೆ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದರು. ಕಣ್ಣೇದುರೇ ಕರಳುಬಳ್ಳಿ ಹೊತ್ತು ಹೆಂಡತಿ ಸಾವು ಕಂಡ ಗಂಡ, ಈ ದುಃಖದಿಂದ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ.
ದೊಂಡಕರ್ವಾಡಿಯ ರಮೇಶ್ ನವ್ನಾಥ್ ಕನ್ಶಕರ್ (29) ಸಾವನ್ನಪ್ಪಿದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ರಮೇಶ್ ವಿದ್ಯಾ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವಾರ ಇಲ್ಲಿನ ನಾರಾಯಣ ಗಾಂವ್ ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ಅವರ ಬೈಕ್ ಟ್ರಾಕ್ಟರ್ ಮುಖಾಮುಖಿಯಾಗಿದೆ.
ಇದರ ಪರಿಣಾಮವಾಗಿ ಪತ್ನಿ ಬೈಕ್ನಿಂದ ಬಿದ್ದಿದ್ದಾಳೆ. ಈ ವೇಳೆ ಆಕೆ ತಲೆ ಟ್ರಾಕ್ಟರ್ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಣ್ಣಾರೆ ಕಂಡ ರಮೇಶ್ ಶಾಕ್ಗೆ ಒಳಗಾಗಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಕಡೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪುಣೆ ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಕಾರು ಅಪಘಾತ.. ಐವರ ದಾರುಣ ಸಾವು