ETV Bharat / bharat

ಕೊರೊನಾ ಮುಕ್ತವಾದರೂ ಮನೆಗೋಗಲು ಮನಸ್ಸಿಲ್ಲ.. ವೈದ್ಯೆಯನ್ನು ತಬ್ಬಿಕೊಂಡು ವೃದ್ಧೆಯ ಕೃತಜ್ಞತೆ!

author img

By

Published : May 17, 2021, 4:52 PM IST

ವೈದ್ಯರ ನಿರಂತರ ಸೇವೆಯಿಂದ ಅಜ್ಜಿವೋರ್ವರು ಕೋವಿಡ್​ಅನ್ನು ಗೆದ್ದಿದ್ದಾರೆ. ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ವೃದ್ಧೆ ಲತಾಬೆನ್​ಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಹೆತ್ತ ತಾಯಿಯಂತೆ ನೋಡಿಕೊಂಡಿದ್ದ ವೈದ್ಯೆ, ಸಿಬ್ಬಂದಿಯನ್ನು ಬಿಟ್ಟೋಗಲು ಮನಸ್ಸಿಗೆ ತುಂಬ ಭಾರವಾಗಿದೆ ಎಂದು ಹೇಳಿ ಅಳುತ್ತಿದ್ದಳು. ಆಗ ಆಸ್ಪತ್ರೆಯ ಸಿಬ್ಬಂದಿ ಕಣ್ಣಾಲೆಗಳು ಸಹ ತೇವಗೊಂಡಿದ್ದವು.

ವೃದ್ಧೆ
ವೃದ್ಧೆ

ಸೂರತ್​(ಗುಜರಾತ್​): ಇಳಿವಯಸ್ಸಿನಲ್ಲಿ ಮಹಾಮಾರಿ ವಕ್ಕರಿಸಿತು. ಇನ್ನೇನು ಜೀವನ ಪಯಣ ಮುಗಿದೇ ಹೋಯಿತು ಅಂದುಕೊಂಡಿದ್ದ ವೃದ್ಧೆ ಈಗ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ಮರುಜನ್ಮ ಪಡೆದವರಂತೆ ಖುಷಿಯಾಗಿರುವ ಈ ಅಜ್ಜಿ ವೈದ್ಯರ ಸೇವೆಗೆ ಮನಸೋತಿದ್ದಾರೆ.

ಹೌದು, ಗುಜರಾತ್​ನಲ್ಲಿ ಇಂತಹದೊಂದು ಪ್ರಕರಣ ವೈದ್ಯರ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಸತತ ಪ್ರಯತ್ನದಿಂದ ವೈರಸ್‌ನಿಂದ ತನ್ನನ್ನು ಪಾರು ಮಾಡಿ ತನಗೆ ಮತ್ತೊಂದು ಜನ್ಮ ನೀಡಿದ ವೈದ್ಯರು, ಸಿಬ್ಬಂದಿಯನ್ನು ಬಿಟ್ಟು ಹೋಗಲು ಈ ವೃದ್ಧೆ ಮನಸ್ಸಿಗೆ ಭಾರವೆನಿಸಿದೆ.

ಸೂರತ್‌ ಮೂಲದ ಲತಾಬೆನ್ ಕೋವಿಡ್ ಸೋಂಕಿಗೆ ಒಳಗಾಗಿ ಇಲ್ಲಿನ ಮೋದಿ ಐಸೋಲೇಷನ್​ ಸೆಂಟರ್​ಗೆ ದಾಖಲಾಗಿದ್ರು. ಈ ವೇಳೆ ಅವರನ್ನು ಬದುಕಿಸಲು ಆಸ್ಪತ್ರೆ ಸಿಬ್ಬಂದಿ ಬಹಳಷ್ಟು ಆರೈಕೆ ಮಾಡಿದ್ರು.

ವೈದ್ಯೆಯನ್ನು ಬಿಟ್ಟು ಹೋಗದ ವೃದ್ಧೆ

ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ವೈದ್ಯರ ಸಹಾಯದಿಂದ ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಲತಾಬೆನ್​ಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಹೆತ್ತ ತಾಯಿಯಂತೆ ನೋಡಿಕೊಂಡಿದ್ದ ವೈದ್ಯೆ, ಸಿಬ್ಬಂದಿಯನ್ನು ಬಿಟ್ಟು ಹೋಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಆನಂದಭಾಷ್ಪ ಸುರಿಸಿದ ಅಜ್ಜಿಯನ್ನು ಕಂಡ ಸಿಬ್ಬಂದಿಯ ಕಣ್ಣಾಲೆಗಳು ತುಂಬಿದ್ದವು.

heart-touching-scenes-were-created-in-surat-covid-care-centre-love-like-mother-daughter-between-doctor-and-patient
ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ನನಗೆ ಮನೆಗೆ ಹೋಗಳು ಇಷ್ಟವಿಲ್ಲ. ಎಲ್ಲರೂ ನನಗೆ ಎಷ್ಟೋ ಸೇವೆ ಮಾಡಿದ್ದೀರಿ, ಇಲ್ಲಿದ್ದರೆ ನನಗೆ ಮನೆಯಲ್ಲಿದ್ದ ಭಾವನೆ ಇರುತ್ತದೆ ಎಂದು ಹೇಳಿ ಅಳುತ್ತಿದ್ದಂತೆ, ಡಾ. ಪೂಜಾಸಹ್ನಿ, ಲತಾಬೆನ್​ ಅವರನ್ನು ಸಮಾಧಾನಪಡಿಸಿ ಬಳಿಕ ಆಕೆಗೆ ತುಳಸಿ ಗಿಡ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಇಲ್ಲಿಗೆ ಬರುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಸಂತೋಷವಾಗಿಡಲು ಬಹಳ ಶ್ರಮಿಸುತ್ತಿದ್ದೇವೆ ಎಂದು ಡಾ. ಪೂಜಾಸಹ್ನಿ ಹೇಳಿದರು.

ಸೂರತ್​(ಗುಜರಾತ್​): ಇಳಿವಯಸ್ಸಿನಲ್ಲಿ ಮಹಾಮಾರಿ ವಕ್ಕರಿಸಿತು. ಇನ್ನೇನು ಜೀವನ ಪಯಣ ಮುಗಿದೇ ಹೋಯಿತು ಅಂದುಕೊಂಡಿದ್ದ ವೃದ್ಧೆ ಈಗ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ಮರುಜನ್ಮ ಪಡೆದವರಂತೆ ಖುಷಿಯಾಗಿರುವ ಈ ಅಜ್ಜಿ ವೈದ್ಯರ ಸೇವೆಗೆ ಮನಸೋತಿದ್ದಾರೆ.

ಹೌದು, ಗುಜರಾತ್​ನಲ್ಲಿ ಇಂತಹದೊಂದು ಪ್ರಕರಣ ವೈದ್ಯರ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಸತತ ಪ್ರಯತ್ನದಿಂದ ವೈರಸ್‌ನಿಂದ ತನ್ನನ್ನು ಪಾರು ಮಾಡಿ ತನಗೆ ಮತ್ತೊಂದು ಜನ್ಮ ನೀಡಿದ ವೈದ್ಯರು, ಸಿಬ್ಬಂದಿಯನ್ನು ಬಿಟ್ಟು ಹೋಗಲು ಈ ವೃದ್ಧೆ ಮನಸ್ಸಿಗೆ ಭಾರವೆನಿಸಿದೆ.

ಸೂರತ್‌ ಮೂಲದ ಲತಾಬೆನ್ ಕೋವಿಡ್ ಸೋಂಕಿಗೆ ಒಳಗಾಗಿ ಇಲ್ಲಿನ ಮೋದಿ ಐಸೋಲೇಷನ್​ ಸೆಂಟರ್​ಗೆ ದಾಖಲಾಗಿದ್ರು. ಈ ವೇಳೆ ಅವರನ್ನು ಬದುಕಿಸಲು ಆಸ್ಪತ್ರೆ ಸಿಬ್ಬಂದಿ ಬಹಳಷ್ಟು ಆರೈಕೆ ಮಾಡಿದ್ರು.

ವೈದ್ಯೆಯನ್ನು ಬಿಟ್ಟು ಹೋಗದ ವೃದ್ಧೆ

ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ವೈದ್ಯರ ಸಹಾಯದಿಂದ ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಲತಾಬೆನ್​ಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಹೆತ್ತ ತಾಯಿಯಂತೆ ನೋಡಿಕೊಂಡಿದ್ದ ವೈದ್ಯೆ, ಸಿಬ್ಬಂದಿಯನ್ನು ಬಿಟ್ಟು ಹೋಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಆನಂದಭಾಷ್ಪ ಸುರಿಸಿದ ಅಜ್ಜಿಯನ್ನು ಕಂಡ ಸಿಬ್ಬಂದಿಯ ಕಣ್ಣಾಲೆಗಳು ತುಂಬಿದ್ದವು.

heart-touching-scenes-were-created-in-surat-covid-care-centre-love-like-mother-daughter-between-doctor-and-patient
ಹೆತ್ತ ತಾಯಿಯಂತೆ ನೋಡಿದ್ದ ಸಿಬ್ಬಂದಿ

ನನಗೆ ಮನೆಗೆ ಹೋಗಳು ಇಷ್ಟವಿಲ್ಲ. ಎಲ್ಲರೂ ನನಗೆ ಎಷ್ಟೋ ಸೇವೆ ಮಾಡಿದ್ದೀರಿ, ಇಲ್ಲಿದ್ದರೆ ನನಗೆ ಮನೆಯಲ್ಲಿದ್ದ ಭಾವನೆ ಇರುತ್ತದೆ ಎಂದು ಹೇಳಿ ಅಳುತ್ತಿದ್ದಂತೆ, ಡಾ. ಪೂಜಾಸಹ್ನಿ, ಲತಾಬೆನ್​ ಅವರನ್ನು ಸಮಾಧಾನಪಡಿಸಿ ಬಳಿಕ ಆಕೆಗೆ ತುಳಸಿ ಗಿಡ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಇಲ್ಲಿಗೆ ಬರುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಸಂತೋಷವಾಗಿಡಲು ಬಹಳ ಶ್ರಮಿಸುತ್ತಿದ್ದೇವೆ ಎಂದು ಡಾ. ಪೂಜಾಸಹ್ನಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.