ETV Bharat / bharat

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭ

author img

By

Published : Apr 18, 2023, 12:58 PM IST

Updated : Apr 18, 2023, 1:09 PM IST

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಸಾಂವಿಧಾನಿಕ ಪೀಠ ಆರಂಭಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟುಗೂಡಿಸಿರುವ ಸುಪ್ರೀಂಕೋರ್ಟ್​ ಇಂದು ಆ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾದನಿಕ ಪೀಠ ಇದರ ವಿಚಾರಣೆ ನಡೆಸುತ್ತಿದೆ. ಸಲಿಂಗ ವಿವಾಹ ಭಾರತದ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದುದು. ವಿವಾಹ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿರುವ ಈ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡುವುದು ತರವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ನಿನ್ನೆಯಷ್ಟೇ ತಕರಾರು ಸಲ್ಲಿಸಿತ್ತು.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು. ಅವರ ಭಾವನೆಗಳಿಗೂ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂನ ಏಕಸದಸ್ಯ ಪೀಠ, ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುವ ವ್ಯಕ್ತಿಗಳನ್ನು ಭಾರತೀಯ ಕುಟುಂಬದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು. ಕುಟುಂಬ ವ್ಯವಸ್ಥೆ ಎಂಬುದು ಪತಿ, ಪತ್ನಿ ಮತ್ತು ಜನಿಸಿದ ಮಕ್ಕಳ ಒಕ್ಕೂಟವಾಗಿದೆ. ಹೀಗಾಗಿ ಸಲಿಂಗ ವಿವಾಹವನ್ನು ಪ್ರತಿಪಾದಿಸುವ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ವಿಸ್ತೃತ ಚರ್ಚೆ ನಡೆಸುವುದು ಉತ್ತಮ ಎಂದು ಹೇಳಿ ಪ್ರಕರಣವನ್ನು ವರ್ಗಾಯಿಸಿತ್ತು.

ಸಲಿಂಗ ವಿವಾಹಕ್ಕೆ ಕೇಂದ್ರ ತೀವ್ರ ವಿರೋಧ: ಮದುವೆ ಎಂಬುದು ವಿಶೇಷವಾದ ಒಕ್ಕೂಟವಾಗಿದೆ. ಅದರಲ್ಲಿ ಹೆಣ್ಣು- ಗಂಡು ಅವರಿಗೆ ಜನಿಸಿದ ಮಕ್ಕಳು ಇರುತ್ತಾರೆ. ಇಂತಹ ಸಂಬಂಧಕ್ಕೆ ಸಮಾಜದಲ್ಲಿ ವಿಶೇಷವಾದ ಪ್ರಾಧಾನ್ಯತೆ ಇದೆ. ಅದರ ಹೊರತಾದ ಯಾವುದೇ ಸಂಬಂಧಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಒಳಿತಲ್ಲ ಎಂದು ಹೇಳಿದ ಕೇಂದ್ರ ಸರ್ಕಾರ ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದೆ.

ಸಲಿಂಗ ವಿವಾಹವನ್ನು ಅಸ್ತಿತ್ವದಲ್ಲಿರುವ ವಿವಾಹದ ಪರಿಕಲ್ಪನೆಗೆ ಸಮಾನವಾಗಿ ಪರಿಗಣಿಸಲು ಹೊರಟರೆ ಅದು "ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಹೇಳಿದೆ. ಒಂದು ವೇಳೆ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿ ನ್ಯಾಯಾಲಯ ಆದೇಶ ನೀಡಿದರೆ ಅದು ಕಾನೂನಿನ ಒಂದು ಇಡೀ ಶಾಖೆಯನ್ನು ಪುನಃ ಬರೆದಂತಾಗುತ್ತದೆ. ನ್ಯಾಯಾಲಯವು ಅಂಥ ಆದೇಶ ನೀಡಬಾರದು ಎಂದು ಬಲವಾಗಿ ವಾದಿಸಿದೆ.

ವಿರುದ್ಧ ಲಿಂಗಿಗಳ ವಿವಾಹ ಸಂಬಂಧವನ್ನು ಸಮಾಜದ ಎಲ್ಲ ವರ್ಗಗಳು ಪುರಸ್ಕರಿಸುತ್ತವೆ. ಹಿಂದು ಸಂಪ್ರದಾಯದಲ್ಲಿ ವಿವಾಹವನ್ನು ಮುಕ್ತಿ ಎಂದು ಪರಿಗಣಿಸಲಾಗಿದೆ. ಇಸ್ಲಾಂನಲ್ಲೂ ಇದನ್ನು ಪವಿತ್ರ ಒಪ್ಪಂದ ಎಂದು ಪರಿಗಣಿಸಲಾಗಿದೆ. ಮಾನ್ಯವಾದ ಮದುವೆಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ನಡೆಯಬೇಕು ಎಂದು ಪ್ರತಿಪಾದಿಸಿದೆ.

ಓದಿ: ಕುಟುಂಬ ವ್ಯವಸ್ಥೆಗೆ ವಿರುದ್ಧವಾದ ಸಲಿಂಗ ವಿವಾಹ: ಸುಪ್ರೀಂಕೋರ್ಟ್​, ಪಂಚಪೀಠಕ್ಕೆ ಪ್ರಕರಣ ವರ್ಗ

ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಗಳು ಕೆಲವೇ ನಗರ ಗಣ್ಯರ ದೃಷ್ಟಿಕೋನದ ಅರ್ಜಿಗಳಾಗಿವೆ. ಆದರೆ, ಸಂಸತ್ತು ಎಲ್ಲ ಗ್ರಾಮೀಣ, ಅರೆ - ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ. ಹಕ್ಕುಗಳ ಸೃಷ್ಟಿ, ಸಂಬಂಧಗಳಿಗೆ ಮಾನ್ಯತೆ ಮತ್ತು ಅಂತಹ ಸಂಬಂಧಗಳಿಗೆ ಕಾನೂನು ಪಾವಿತ್ರ್ಯವನ್ನು ನೀಡುವುದು ಶಾಸಕಾಂಗದಿಂದ ಮಾತ್ರ ಸಾಧ್ಯವೇ ಹೊರತು ನ್ಯಾಯಾಂಗದಿಂದಲ್ಲ ಎಂದು ಕೇಂದ್ರವು ಪ್ರತಿಪಾದಿಸಿದೆ.

ಪೀಠದಲ್ಲಿರುವ ಜಡ್ಜ್​ಗಳು: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​, ನ್ಯಾಯಮೂರ್ತಿ ಪಿಎಸ್​​ ನರಸಿಂಹ, ನ್ಯಾ.ಎಸ್​ಕೆ ಕೌಲ್​, ನ್ಯಾ.ರವೀಂದ್ರ ಭಟ್​, ನ್ಯಾ. ಹಿಮಾ ಕೊಹ್ಲಿ ಅವರು ಸಾಂವಿಧಾನಿಕ ಪೀಠದಲ್ಲಿದ್ದಾರೆ.

ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ವಿರೋಧ

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟುಗೂಡಿಸಿರುವ ಸುಪ್ರೀಂಕೋರ್ಟ್​ ಇಂದು ಆ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾದನಿಕ ಪೀಠ ಇದರ ವಿಚಾರಣೆ ನಡೆಸುತ್ತಿದೆ. ಸಲಿಂಗ ವಿವಾಹ ಭಾರತದ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದುದು. ವಿವಾಹ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿರುವ ಈ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡುವುದು ತರವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ನಿನ್ನೆಯಷ್ಟೇ ತಕರಾರು ಸಲ್ಲಿಸಿತ್ತು.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು. ಅವರ ಭಾವನೆಗಳಿಗೂ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂನ ಏಕಸದಸ್ಯ ಪೀಠ, ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುವ ವ್ಯಕ್ತಿಗಳನ್ನು ಭಾರತೀಯ ಕುಟುಂಬದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು. ಕುಟುಂಬ ವ್ಯವಸ್ಥೆ ಎಂಬುದು ಪತಿ, ಪತ್ನಿ ಮತ್ತು ಜನಿಸಿದ ಮಕ್ಕಳ ಒಕ್ಕೂಟವಾಗಿದೆ. ಹೀಗಾಗಿ ಸಲಿಂಗ ವಿವಾಹವನ್ನು ಪ್ರತಿಪಾದಿಸುವ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ವಿಸ್ತೃತ ಚರ್ಚೆ ನಡೆಸುವುದು ಉತ್ತಮ ಎಂದು ಹೇಳಿ ಪ್ರಕರಣವನ್ನು ವರ್ಗಾಯಿಸಿತ್ತು.

ಸಲಿಂಗ ವಿವಾಹಕ್ಕೆ ಕೇಂದ್ರ ತೀವ್ರ ವಿರೋಧ: ಮದುವೆ ಎಂಬುದು ವಿಶೇಷವಾದ ಒಕ್ಕೂಟವಾಗಿದೆ. ಅದರಲ್ಲಿ ಹೆಣ್ಣು- ಗಂಡು ಅವರಿಗೆ ಜನಿಸಿದ ಮಕ್ಕಳು ಇರುತ್ತಾರೆ. ಇಂತಹ ಸಂಬಂಧಕ್ಕೆ ಸಮಾಜದಲ್ಲಿ ವಿಶೇಷವಾದ ಪ್ರಾಧಾನ್ಯತೆ ಇದೆ. ಅದರ ಹೊರತಾದ ಯಾವುದೇ ಸಂಬಂಧಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಒಳಿತಲ್ಲ ಎಂದು ಹೇಳಿದ ಕೇಂದ್ರ ಸರ್ಕಾರ ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದೆ.

ಸಲಿಂಗ ವಿವಾಹವನ್ನು ಅಸ್ತಿತ್ವದಲ್ಲಿರುವ ವಿವಾಹದ ಪರಿಕಲ್ಪನೆಗೆ ಸಮಾನವಾಗಿ ಪರಿಗಣಿಸಲು ಹೊರಟರೆ ಅದು "ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಹೇಳಿದೆ. ಒಂದು ವೇಳೆ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿ ನ್ಯಾಯಾಲಯ ಆದೇಶ ನೀಡಿದರೆ ಅದು ಕಾನೂನಿನ ಒಂದು ಇಡೀ ಶಾಖೆಯನ್ನು ಪುನಃ ಬರೆದಂತಾಗುತ್ತದೆ. ನ್ಯಾಯಾಲಯವು ಅಂಥ ಆದೇಶ ನೀಡಬಾರದು ಎಂದು ಬಲವಾಗಿ ವಾದಿಸಿದೆ.

ವಿರುದ್ಧ ಲಿಂಗಿಗಳ ವಿವಾಹ ಸಂಬಂಧವನ್ನು ಸಮಾಜದ ಎಲ್ಲ ವರ್ಗಗಳು ಪುರಸ್ಕರಿಸುತ್ತವೆ. ಹಿಂದು ಸಂಪ್ರದಾಯದಲ್ಲಿ ವಿವಾಹವನ್ನು ಮುಕ್ತಿ ಎಂದು ಪರಿಗಣಿಸಲಾಗಿದೆ. ಇಸ್ಲಾಂನಲ್ಲೂ ಇದನ್ನು ಪವಿತ್ರ ಒಪ್ಪಂದ ಎಂದು ಪರಿಗಣಿಸಲಾಗಿದೆ. ಮಾನ್ಯವಾದ ಮದುವೆಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ನಡೆಯಬೇಕು ಎಂದು ಪ್ರತಿಪಾದಿಸಿದೆ.

ಓದಿ: ಕುಟುಂಬ ವ್ಯವಸ್ಥೆಗೆ ವಿರುದ್ಧವಾದ ಸಲಿಂಗ ವಿವಾಹ: ಸುಪ್ರೀಂಕೋರ್ಟ್​, ಪಂಚಪೀಠಕ್ಕೆ ಪ್ರಕರಣ ವರ್ಗ

ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಗಳು ಕೆಲವೇ ನಗರ ಗಣ್ಯರ ದೃಷ್ಟಿಕೋನದ ಅರ್ಜಿಗಳಾಗಿವೆ. ಆದರೆ, ಸಂಸತ್ತು ಎಲ್ಲ ಗ್ರಾಮೀಣ, ಅರೆ - ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ. ಹಕ್ಕುಗಳ ಸೃಷ್ಟಿ, ಸಂಬಂಧಗಳಿಗೆ ಮಾನ್ಯತೆ ಮತ್ತು ಅಂತಹ ಸಂಬಂಧಗಳಿಗೆ ಕಾನೂನು ಪಾವಿತ್ರ್ಯವನ್ನು ನೀಡುವುದು ಶಾಸಕಾಂಗದಿಂದ ಮಾತ್ರ ಸಾಧ್ಯವೇ ಹೊರತು ನ್ಯಾಯಾಂಗದಿಂದಲ್ಲ ಎಂದು ಕೇಂದ್ರವು ಪ್ರತಿಪಾದಿಸಿದೆ.

ಪೀಠದಲ್ಲಿರುವ ಜಡ್ಜ್​ಗಳು: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​, ನ್ಯಾಯಮೂರ್ತಿ ಪಿಎಸ್​​ ನರಸಿಂಹ, ನ್ಯಾ.ಎಸ್​ಕೆ ಕೌಲ್​, ನ್ಯಾ.ರವೀಂದ್ರ ಭಟ್​, ನ್ಯಾ. ಹಿಮಾ ಕೊಹ್ಲಿ ಅವರು ಸಾಂವಿಧಾನಿಕ ಪೀಠದಲ್ಲಿದ್ದಾರೆ.

ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ವಿರೋಧ

Last Updated : Apr 18, 2023, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.