ETV Bharat / bharat

ಹಿಜಾಬ್​ ತೀರ್ಪಿಗೆ ಮೆಹಬೂಬಾ, ಒಮರ್​ ಅಸಮಾಧಾನ.. ನ್ಯಾಯಾಲಯದ ಸರ್ವಾನುಮತದ ತೀರ್ಪು ಎಂದ ಹೆಚ್​​ಡಿಡಿ

author img

By

Published : Mar 15, 2022, 4:34 PM IST

ಕಳೆದ ಜನವರಿ ತಿಂಗಳಿಂದಲೂ ಹಿಜಾಬ್​ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್​ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು..

Mehbooba Mufti on Hijab Verdict
Mehbooba Mufti on Hijab Verdict

ನವದೆಹಲಿ : ಹಿಜಾಬ್​ ಹಾಕಿಕೊಂಡು ಶಾಲಾ-ಕಾಲೇಜ್​​ಗಳಿಗೆ ಹೋಗುವುದಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧವನ್ನ ಕರ್ನಾಟಕ ಹೈಕೋರ್ಟ್​​ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅನೇಕ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಜಿ ಪ್ರಧಾನಿ ಹೆಚ್​​ ಡಿ ದೇವೇಗೌಡ ಕೂಡ ಹಿಜಾಬ್​ ತೀರ್ಪಿನ ಕುರಿತು ಮಾತನಾಡಿದ್ದಾರೆ.

  • It's a unanimous judgment by the court...State govt should've mutual discussions with political parties. The matter has not been solved & is further aggravated. Govt should take necessary steps to ensure the safety of girls: Former PM & JD(S) leader HD Devegowda on #HijabVerdict pic.twitter.com/m0Z01Giaaz

    — ANI (@ANI) March 15, 2022 " class="align-text-top noRightClick twitterSection" data=" ">

ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ವಾನುಮತದ ತೀರ್ಪು ಹೊರ ಬಂದಿದೆ. ರಾಜ್ಯ ಸರ್ಕಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಪರಸ್ಪರ ಚರ್ಚೆ ನಡೆಸಬೇಕು. ತೀರ್ಪಿನಿಂದ ಸಮಸ್ಯೆ ಬಗೆಹರಿದಿಲ್ಲ, ಅದು ಮತ್ತಷ್ಟು ಉಲ್ಬಣಗೊಂಡಿದೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್​ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್​ ಬಗ್ಗೆ ಸಿಎಂ ಕೆಸಿಆರ್​ ಮಾತು

ಇದೇ ವಿಚಾರವಾಗಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶ್ರೀನಗರದಲ್ಲಿ ಮಾತನಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್​​ ನೀಡಿರುವ ತೀರ್ಪಿನಿಂದಾಗಿ ನಿರಾಸೆಯಾಗಿದೆ ಎಂದಿರುವ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನಾವು, ಅವರ ಸರಳ ಆಯ್ಕೆಯ ಹಕ್ಕು ನಿರಾಕರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

  • The stay on #HijabBan is a very disappointing judgment. On one side, we make big claims on women's rights & their empowerment & on another, we don't even give them the right to wear whatever they want; this right shouldn't be with the Courts: PDP chief Mehbooba Mufti, in Srinagar pic.twitter.com/CyK3gtW124

    — ANI (@ANI) March 15, 2022 " class="align-text-top noRightClick twitterSection" data=" ">

ಈ ತೀರ್ಪಿನ ಬಗ್ಗೆ ಒಮರ್​ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿದ್ದು, ಮಹಿಳೆ ಏನು ಧರಿಸಬೇಕು ಎಂಬ ಆಯ್ಕೆ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಪಹಾಸ್ಯವಾಗಿದೆ ಎಂದಿದ್ದಾರೆ.

ಕಳೆದ ಜನವರಿ ತಿಂಗಳಿಂದಲೂ ಹಿಜಾಬ್​ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್​ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು.

ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್​ ವಿವಾದ ದೇಶಾದ್ಯಂತ ವ್ಯಾಪಿಸಿತ್ತು. ಇಂದು ಕರ್ನಾಟಕ ಹೈಕೋರ್ಟ್​ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

ನವದೆಹಲಿ : ಹಿಜಾಬ್​ ಹಾಕಿಕೊಂಡು ಶಾಲಾ-ಕಾಲೇಜ್​​ಗಳಿಗೆ ಹೋಗುವುದಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧವನ್ನ ಕರ್ನಾಟಕ ಹೈಕೋರ್ಟ್​​ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಅನೇಕ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಜಿ ಪ್ರಧಾನಿ ಹೆಚ್​​ ಡಿ ದೇವೇಗೌಡ ಕೂಡ ಹಿಜಾಬ್​ ತೀರ್ಪಿನ ಕುರಿತು ಮಾತನಾಡಿದ್ದಾರೆ.

  • It's a unanimous judgment by the court...State govt should've mutual discussions with political parties. The matter has not been solved & is further aggravated. Govt should take necessary steps to ensure the safety of girls: Former PM & JD(S) leader HD Devegowda on #HijabVerdict pic.twitter.com/m0Z01Giaaz

    — ANI (@ANI) March 15, 2022 " class="align-text-top noRightClick twitterSection" data=" ">

ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ವಾನುಮತದ ತೀರ್ಪು ಹೊರ ಬಂದಿದೆ. ರಾಜ್ಯ ಸರ್ಕಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಪರಸ್ಪರ ಚರ್ಚೆ ನಡೆಸಬೇಕು. ತೀರ್ಪಿನಿಂದ ಸಮಸ್ಯೆ ಬಗೆಹರಿದಿಲ್ಲ, ಅದು ಮತ್ತಷ್ಟು ಉಲ್ಬಣಗೊಂಡಿದೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್​ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್​ ಬಗ್ಗೆ ಸಿಎಂ ಕೆಸಿಆರ್​ ಮಾತು

ಇದೇ ವಿಚಾರವಾಗಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶ್ರೀನಗರದಲ್ಲಿ ಮಾತನಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್​​ ನೀಡಿರುವ ತೀರ್ಪಿನಿಂದಾಗಿ ನಿರಾಸೆಯಾಗಿದೆ ಎಂದಿರುವ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನಾವು, ಅವರ ಸರಳ ಆಯ್ಕೆಯ ಹಕ್ಕು ನಿರಾಕರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

  • The stay on #HijabBan is a very disappointing judgment. On one side, we make big claims on women's rights & their empowerment & on another, we don't even give them the right to wear whatever they want; this right shouldn't be with the Courts: PDP chief Mehbooba Mufti, in Srinagar pic.twitter.com/CyK3gtW124

    — ANI (@ANI) March 15, 2022 " class="align-text-top noRightClick twitterSection" data=" ">

ಈ ತೀರ್ಪಿನ ಬಗ್ಗೆ ಒಮರ್​ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿದ್ದು, ಮಹಿಳೆ ಏನು ಧರಿಸಬೇಕು ಎಂಬ ಆಯ್ಕೆ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಪಹಾಸ್ಯವಾಗಿದೆ ಎಂದಿದ್ದಾರೆ.

ಕಳೆದ ಜನವರಿ ತಿಂಗಳಿಂದಲೂ ಹಿಜಾಬ್​ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್​ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು.

ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್​ ವಿವಾದ ದೇಶಾದ್ಯಂತ ವ್ಯಾಪಿಸಿತ್ತು. ಇಂದು ಕರ್ನಾಟಕ ಹೈಕೋರ್ಟ್​ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.