ETV Bharat / bharat

Aditya-L1 ಯು.ಆರ್‌.ರಾವ್‌ ಕನಸಿನ ಯೋಜನೆ: 'ಉಪಗ್ರಹ ಪಿತಾಮಹ'ನ ಸ್ಮರಿಸಿದ ಇಸ್ರೋ

author img

By ETV Bharat Karnataka Team

Published : Sep 3, 2023, 9:56 AM IST

Updated : Sep 3, 2023, 10:10 AM IST

ಆದಿತ್ಯ-ಎಲ್‌ 1 ಯೋಜನೆಗೆ ಹಿರಿಯ ವಿಜ್ಞಾನಿ ಯು.ಆರ್‌.ರಾವ್‌ ಅಡಿಪಾಯ ಹಾಕಿದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಮರಿಸಿದೆ.

Aditya L1 mission
ಆದಿತ್ಯ ಎಲ್‌ 1

ಬೆಂಗಳೂರು: ಸೂರ್ಯನ ಅಧ್ಯಯನದ ಆದಿತ್ಯ-ಎಲ್‌ 1 ಯೋಜನೆಯ ಆರಂಭಿಕ ಹಂತಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳುವಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಹಾಗೂ 'ಉಪಗ್ರಹ ಪಿತಾಮಹ' ಎಂದೇ ಖ್ಯಾತರಾಗಿದ್ದ ದಿ.ಪ್ರೊ.ಯು.ಆರ್.ರಾವ್‌ ಅವರ ಪಾತ್ರ ಹಿರಿದು ಎಂದು ಇಸ್ರೋ ಹೇಳಿದೆ. 'ಆದಿತ್ಯ-ಎಲ್ 1 ಯು.ಆರ್‌.ರಾವ್‌ ಕನಸಿನ ಯೋಜನೆ'. ರಾವ್ ಅವರು ಈ ಯೋಜನೆಯನ್ನು ಸಮಕಾಲೀನ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿಸಲು ವಿಶೇಷ ಒತ್ತು ನೀಡಿದ್ದರು. ನೌಕೆಯನ್ನು ಕಕ್ಷೆಗೆ ಸೇರಿಸುವುದೂ ಸೇರಿ ಒಟ್ಟು ಗುರಿ ಸಾಧನೆಗೆ ಯೋಜನೆ ರೂಪಿಸಿದ್ದರು. 'ಭಾರತದಿಂದ ಲಗ್ರಾಂಜಿಯನ್‌ ಪಾಯಿಂಟ್‌ಗೆ ಸೇರಿಸುವ ಮೊದಲ ಯೋಜನೆ ಆದಿತ್ಯ-ಎಲ್ 1 ಆಗಿದೆ. ಯು.ಆರ್‌.ರಾವ್ ಅವರಿಗೆ ಧನ್ಯವಾದಗಳು' ಎಂದು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ‌ಕೃತಜ್ಞತಾ ಸಂದೇಶ ಪ್ರಕಟಿಸಿದೆ.

ಆದಿತ್ಯ-ಎಲ್1 ಯಶಸ್ವಿ ಉಡಾವಣೆಯ ನಂತರ ನಿನ್ನೆ (ಶನಿವಾರ) ಮಾತನಾಡಿದ ಯೋಜನೆಯ ನಿರ್ದೇಶಕಿ ನಿಗರ್ ಶಾಜಿ, ಯು.ಆರ್.ರಾವ್ ಕೊಡುಗೆಯನ್ನು ಉಲ್ಲೇಖಿಸಿದರು. ಈ ಯೋಜನೆಯ ಬೀಜ ಬಿತ್ತಿದ್ದ ರಾವ್‌ ಅವರನ್ನು ಸ್ಮರಿಸುವೆ ಎಂದು ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ (ಐಐಎ) ಪ್ರೊ.ಜಗ್‌ದೇವ್ ಸಿಂಗ್ , ಯೋಜನೆಯ ಆರಂಭಿಕ ದಿನಗಳಲ್ಲಿ ಯು.ಆರ್​ ರಾವ್‌ ಅವರ ಸೇವೆಯನ್ನು ನೆನಪಿಸಿಕೊಂಡರು. ಆದಿತ್ಯ ಎಲ್‌-1ನಲ್ಲಿ ಅಳವಡಿಸಿರುವ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್‌ಸಿ) ಪರಿಕರವನ್ನು ಐಐಎ ಅಭಿವೃದ್ಧಿಪಡಿಸಿದೆ. ಇಸ್ರೋ ಮೊದಲು ನಮಗೆ 50 ಸೆಂ.ಮೀ. ಸಣ್ಣ ವೇದಿಕೆ ಒದಗಿಸಿತು. ನಾವು ಪರಿಕರ ರೂಪಿಸಲು ಆರಂಭಿಸಿದೆವು. ಆಗ, ಸೂರ್ಯನನ್ನು ವರ್ಷದ 365 ದಿನಗಳ ನಿರಂತರ ಅಧ್ಯಯನ ಮಾಡಲು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಪಗ್ರಹ ಇರಿಸುವುದು ಸೂಕ್ತ ಎಂಬ ಆಲೋಚನೆ ಬಂದಿತ್ತು.

ಆದರೆ, ಗ್ರಹಣವಿದ್ದಾಗ ಸೂರ್ಯನ ಅಧ್ಯಯನ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಂತದಲ್ಲಿ ಧ್ರುವಕಕ್ಷೆಗೆ ಬದಲಾಗಿ ಎಲ್‌ 1ನಲ್ಲಿ ಉಪಗ್ರಹ ಇರಿಸುವುದು ಸೂಕ್ತವೆಂದು ರಾವ್ ಸಲಹೆ ನೀಡಿದ್ದರು ಎಂದು ಜಗದೇವ್‌ ಸಿಂಗ್ ತಿಳಿಸಿದರು. ಆ ನಂತರವು ವಿಇಎಲ್‌ಸಿ ಪರಿಕರದೊಂದಿಗೆ ಇನ್ನೂ 6 ಪರಿಕರಗಳನ್ನು ಎಲ್‌ 1 ಸೇರಲಿರುವ ಆದಿತ್ಯ ಉಪಗ್ರಹದಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು. ಹೀಗಾಗಿ, ಉಪಗ್ರಹ ಮತ್ತು ಯೋಜನೆಯ ಗಾತ್ರ ವಿಸ್ತಾರಗೊಂಡಿತು ಎಂದರು.

ಸೂರ್ಯನ ವರ್ಣಗೋಳ, ಪರಿಭ್ರಮಣ ವಲಯ, ಸೂರ್ಯಮಂಡಲ, ಬಿಸಿಯಾಗುವ ಸಮಸ್ಯೆ ಸೇರಿದಂತೆ ಇತರ ಹಲವು ಅಂಶಗಳನ್ನು ಅಧ್ಯಯನ ಮಾಡುವ ರಾವ್ ಅವರ ಆಸಕ್ತಿ ಸೇರಿದಂತೆ ಹಲವು ವೈಜ್ಞಾನಿಕ ಅಂಶಗಳು ಇದರಲ್ಲಿವೆ. ಇಂದು ಅವರ ಕನಸು ನನಸಾಗಿದೆ. ಆದರೆ ಈ ಯೋಜನೆಗೆ ಸಾಕ್ಷಿಯಾಗಲು ಅವರು ಇಲ್ಲದಿರುವುದು ದುರದೃಷ್ಟ ಎಂದು ಇಸ್ರೋ ವಿಷಾದಿಸಿದೆ.

ರಾವ್ 1984ರಿಂದ 1994ರವರೆಗೂ ಇಸ್ರೋ ಅಧ್ಯಕ್ಷರಾಗಿದ್ದರು. 2017ರಲ್ಲಿ 85ನೇ ವಯಸ್ಸಿನಲ್ಲಿ ನಿಧನರಾದರು. ಅದೇ ವರ್ಷ ಕೇಂದ್ರ ಸರ್ಕಾರ ಅವರಿಗೆ 'ಪದ್ಮವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

ಯು.ಆರ್‌.ರಾವ್‌ ಬಗ್ಗೆ ಒಂದಿಷ್ಟು..: 1932 ಮಾರ್ಚ್‌ 10ರಂದು ಉಡುಪಿ ಜಿಲ್ಲೆಯ ಅದಮಾರು ಎಂಬಲ್ಲಿ ಜನಿಸಿದರು. 10 ವರ್ಷಗಳ ಕಾಲ ಇಸ್ರೊ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಹೊಸ ದಿಕ್ಕು ತೋರಿಸಿದರು. ಆರ್ಯಭಟ ಉಪಗ್ರಹದಿಂದ ಮಂಗಳಯಾನದವರೆಗೆ ರಾವ್‌ ಸಲಹೆ, ಪರಿಶ್ರಮ ಹಾಗೂ ಮಾರ್ಗದರ್ಶನವಿದೆ. ಸೋಲುಗಳಿಗೆ ಬೆನ್ನು ತೋರಿಸದ ದಿಟ್ಟ ವ್ಯಕ್ತಿತ್ವ ಹೊಂದಿದ್ದ ರಾವ್‌ ಅವರು ಅನೇಕ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3, ಆದಿತ್ಯ-ಎಲ್1 ಯಶಸ್ಸಿನ ಬಳಿಕ ಇಸ್ರೋದ ಮುಂದಿನ ಯೋಜನೆ ಏನು?: ಇಲ್ಲಿದೆ ಮಾಹಿತಿ

ಬೆಂಗಳೂರು: ಸೂರ್ಯನ ಅಧ್ಯಯನದ ಆದಿತ್ಯ-ಎಲ್‌ 1 ಯೋಜನೆಯ ಆರಂಭಿಕ ಹಂತಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳುವಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಹಾಗೂ 'ಉಪಗ್ರಹ ಪಿತಾಮಹ' ಎಂದೇ ಖ್ಯಾತರಾಗಿದ್ದ ದಿ.ಪ್ರೊ.ಯು.ಆರ್.ರಾವ್‌ ಅವರ ಪಾತ್ರ ಹಿರಿದು ಎಂದು ಇಸ್ರೋ ಹೇಳಿದೆ. 'ಆದಿತ್ಯ-ಎಲ್ 1 ಯು.ಆರ್‌.ರಾವ್‌ ಕನಸಿನ ಯೋಜನೆ'. ರಾವ್ ಅವರು ಈ ಯೋಜನೆಯನ್ನು ಸಮಕಾಲೀನ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿಸಲು ವಿಶೇಷ ಒತ್ತು ನೀಡಿದ್ದರು. ನೌಕೆಯನ್ನು ಕಕ್ಷೆಗೆ ಸೇರಿಸುವುದೂ ಸೇರಿ ಒಟ್ಟು ಗುರಿ ಸಾಧನೆಗೆ ಯೋಜನೆ ರೂಪಿಸಿದ್ದರು. 'ಭಾರತದಿಂದ ಲಗ್ರಾಂಜಿಯನ್‌ ಪಾಯಿಂಟ್‌ಗೆ ಸೇರಿಸುವ ಮೊದಲ ಯೋಜನೆ ಆದಿತ್ಯ-ಎಲ್ 1 ಆಗಿದೆ. ಯು.ಆರ್‌.ರಾವ್ ಅವರಿಗೆ ಧನ್ಯವಾದಗಳು' ಎಂದು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ‌ಕೃತಜ್ಞತಾ ಸಂದೇಶ ಪ್ರಕಟಿಸಿದೆ.

ಆದಿತ್ಯ-ಎಲ್1 ಯಶಸ್ವಿ ಉಡಾವಣೆಯ ನಂತರ ನಿನ್ನೆ (ಶನಿವಾರ) ಮಾತನಾಡಿದ ಯೋಜನೆಯ ನಿರ್ದೇಶಕಿ ನಿಗರ್ ಶಾಜಿ, ಯು.ಆರ್.ರಾವ್ ಕೊಡುಗೆಯನ್ನು ಉಲ್ಲೇಖಿಸಿದರು. ಈ ಯೋಜನೆಯ ಬೀಜ ಬಿತ್ತಿದ್ದ ರಾವ್‌ ಅವರನ್ನು ಸ್ಮರಿಸುವೆ ಎಂದು ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ (ಐಐಎ) ಪ್ರೊ.ಜಗ್‌ದೇವ್ ಸಿಂಗ್ , ಯೋಜನೆಯ ಆರಂಭಿಕ ದಿನಗಳಲ್ಲಿ ಯು.ಆರ್​ ರಾವ್‌ ಅವರ ಸೇವೆಯನ್ನು ನೆನಪಿಸಿಕೊಂಡರು. ಆದಿತ್ಯ ಎಲ್‌-1ನಲ್ಲಿ ಅಳವಡಿಸಿರುವ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್‌ಸಿ) ಪರಿಕರವನ್ನು ಐಐಎ ಅಭಿವೃದ್ಧಿಪಡಿಸಿದೆ. ಇಸ್ರೋ ಮೊದಲು ನಮಗೆ 50 ಸೆಂ.ಮೀ. ಸಣ್ಣ ವೇದಿಕೆ ಒದಗಿಸಿತು. ನಾವು ಪರಿಕರ ರೂಪಿಸಲು ಆರಂಭಿಸಿದೆವು. ಆಗ, ಸೂರ್ಯನನ್ನು ವರ್ಷದ 365 ದಿನಗಳ ನಿರಂತರ ಅಧ್ಯಯನ ಮಾಡಲು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಪಗ್ರಹ ಇರಿಸುವುದು ಸೂಕ್ತ ಎಂಬ ಆಲೋಚನೆ ಬಂದಿತ್ತು.

ಆದರೆ, ಗ್ರಹಣವಿದ್ದಾಗ ಸೂರ್ಯನ ಅಧ್ಯಯನ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಂತದಲ್ಲಿ ಧ್ರುವಕಕ್ಷೆಗೆ ಬದಲಾಗಿ ಎಲ್‌ 1ನಲ್ಲಿ ಉಪಗ್ರಹ ಇರಿಸುವುದು ಸೂಕ್ತವೆಂದು ರಾವ್ ಸಲಹೆ ನೀಡಿದ್ದರು ಎಂದು ಜಗದೇವ್‌ ಸಿಂಗ್ ತಿಳಿಸಿದರು. ಆ ನಂತರವು ವಿಇಎಲ್‌ಸಿ ಪರಿಕರದೊಂದಿಗೆ ಇನ್ನೂ 6 ಪರಿಕರಗಳನ್ನು ಎಲ್‌ 1 ಸೇರಲಿರುವ ಆದಿತ್ಯ ಉಪಗ್ರಹದಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು. ಹೀಗಾಗಿ, ಉಪಗ್ರಹ ಮತ್ತು ಯೋಜನೆಯ ಗಾತ್ರ ವಿಸ್ತಾರಗೊಂಡಿತು ಎಂದರು.

ಸೂರ್ಯನ ವರ್ಣಗೋಳ, ಪರಿಭ್ರಮಣ ವಲಯ, ಸೂರ್ಯಮಂಡಲ, ಬಿಸಿಯಾಗುವ ಸಮಸ್ಯೆ ಸೇರಿದಂತೆ ಇತರ ಹಲವು ಅಂಶಗಳನ್ನು ಅಧ್ಯಯನ ಮಾಡುವ ರಾವ್ ಅವರ ಆಸಕ್ತಿ ಸೇರಿದಂತೆ ಹಲವು ವೈಜ್ಞಾನಿಕ ಅಂಶಗಳು ಇದರಲ್ಲಿವೆ. ಇಂದು ಅವರ ಕನಸು ನನಸಾಗಿದೆ. ಆದರೆ ಈ ಯೋಜನೆಗೆ ಸಾಕ್ಷಿಯಾಗಲು ಅವರು ಇಲ್ಲದಿರುವುದು ದುರದೃಷ್ಟ ಎಂದು ಇಸ್ರೋ ವಿಷಾದಿಸಿದೆ.

ರಾವ್ 1984ರಿಂದ 1994ರವರೆಗೂ ಇಸ್ರೋ ಅಧ್ಯಕ್ಷರಾಗಿದ್ದರು. 2017ರಲ್ಲಿ 85ನೇ ವಯಸ್ಸಿನಲ್ಲಿ ನಿಧನರಾದರು. ಅದೇ ವರ್ಷ ಕೇಂದ್ರ ಸರ್ಕಾರ ಅವರಿಗೆ 'ಪದ್ಮವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

ಯು.ಆರ್‌.ರಾವ್‌ ಬಗ್ಗೆ ಒಂದಿಷ್ಟು..: 1932 ಮಾರ್ಚ್‌ 10ರಂದು ಉಡುಪಿ ಜಿಲ್ಲೆಯ ಅದಮಾರು ಎಂಬಲ್ಲಿ ಜನಿಸಿದರು. 10 ವರ್ಷಗಳ ಕಾಲ ಇಸ್ರೊ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಹೊಸ ದಿಕ್ಕು ತೋರಿಸಿದರು. ಆರ್ಯಭಟ ಉಪಗ್ರಹದಿಂದ ಮಂಗಳಯಾನದವರೆಗೆ ರಾವ್‌ ಸಲಹೆ, ಪರಿಶ್ರಮ ಹಾಗೂ ಮಾರ್ಗದರ್ಶನವಿದೆ. ಸೋಲುಗಳಿಗೆ ಬೆನ್ನು ತೋರಿಸದ ದಿಟ್ಟ ವ್ಯಕ್ತಿತ್ವ ಹೊಂದಿದ್ದ ರಾವ್‌ ಅವರು ಅನೇಕ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3, ಆದಿತ್ಯ-ಎಲ್1 ಯಶಸ್ಸಿನ ಬಳಿಕ ಇಸ್ರೋದ ಮುಂದಿನ ಯೋಜನೆ ಏನು?: ಇಲ್ಲಿದೆ ಮಾಹಿತಿ

Last Updated : Sep 3, 2023, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.