ETV Bharat / bharat

'ದಿ ಕಾಶ್ಮೀರ್​ ಫೈಲ್ಸ್'​ ಚಿತ್ರಕ್ಕೆ ಮಾಜಿ ಸಿಎಂ ಫಾರೂಖ್​ ಅಬ್ದುಲ್ಲಾ ಆಕ್ಷೇಪ.. ಸತ್ಯಶೋಧನಾ ಸಮಿತಿ ರಚನೆಗೆ ಒತ್ತಾಯ

author img

By

Published : Mar 22, 2022, 7:49 PM IST

ಅಂದು ನಡೆದ ದುರಂತದ ಬಗ್ಗೆ ನನಗೂ ವಿಷಾದವಿದೆ. ಆದರೆ, ದಿ ಕಾಶ್ಮೀರ ಫೈಲ್ಸ್​ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಿದ್ದಾಗಿದೆ. ಅಂದಿನ ಘಟನೆಗೆ ಜನಾಂಗೀಯ ಭಾವನೆ ಹೊಂದಿದ್ದ ರಾಜಕೀಯ ಪಕ್ಷ, ಸಂಘಟನೆಗಳ ಕೈವಾಡದಿಂದ ನಡೆದಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ..

farooq-abdullah
ಫಾರೂಖ್​ ಅಬ್ದುಲ್ಲಾ

ನವದೆಹಲಿ : ಕಾಶ್ಮೀರಿ ಪಂಡಿತರ ಹತ್ಯಾಕಾಂಡ ನಡೆದ ಕುರಿತು ನಿರ್ಮಿಸಲಾದ ದಿ ಕಾಶ್ಮೀರ ಫೈಲ್ಸ್​ ಸಿನಿಮಾದ ಬಗ್ಗೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಆಕ್ಷೇಪಿಸಿದ್ದಾರೆ. ಅಲ್ಲದೇ, ಸಿನಿಮಾಗೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಿದ್ದರ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿರುವ ದಿ ಕಾಶ್ಮೀರ ಫೈಲ್ಸ್​ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಬೇಕು ಎಂದು ಕರೆ ನೀಡಲಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರಗಳು ಸಿನಿಮಾ ಪ್ರದರ್ಶನಕ್ಕೆ ತೆರವಿಗೆ ವಿನಾಯಿತಿ ನೀಡಿವೆ. ಇದು ಜನರಲ್ಲಿ ದ್ವೇಷ ಭಾವನೆ ಮೂಡಿಸುವ ಉದ್ದೇಶ ಎಂದು ಆರೋಪಿಸಿದ್ದಾರೆ.

ಅಂದು ನಡೆದ ದುರಂತದ ಬಗ್ಗೆ ನನಗೂ ವಿಷಾದವಿದೆ. ಆದರೆ, ದಿ ಕಾಶ್ಮೀರ ಫೈಲ್ಸ್​ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಿದ್ದಾಗಿದೆ. ಅಂದಿನ ಘಟನೆಗೆ ಜನಾಂಗೀಯ ಭಾವನೆ ಹೊಂದಿದ್ದ ರಾಜಕೀಯ ಪಕ್ಷ, ಸಂಘಟನೆಗಳ ಕೈವಾಡದಿಂದ ನಡೆದಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಜರ್ಮನಿಯಲ್ಲಿ ಹಿಟ್ಲರ್​ ಮತ್ತು ಗೊಬೆಲ್ಸ್​ ಸೃಷ್ಟಿಸಿದ ಜನಾಂಗೀಯ ವಾದದಂತೆ ಭಾರತದಲ್ಲೂ ಅದು ತಲೆ ಎತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರತಿಯೊಬ್ಬರೂ ಸಿನಿಮಾವನ್ನು ವೀಕ್ಷಿಸಲು ಪ್ರೇರೇಪಣೆ ನೀಡಲಾಗುತ್ತಿದೆ. ಸಿನಿಮಾದಲ್ಲಿ ನಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಹತ್ಯಾಕಾಂಡಕ್ಕೆ ನಾನು ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರಿಗೆ ಮಾತ್ರವಲ್ಲದೇ, ಸಿಖ್ಖರು ಮತ್ತು ಮುಸ್ಲಿಮರಿಗೂ ಏನಾಯಿತು ಎಂಬುದರ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಓದಿ: ಸಿಎಂ ಉದ್ಧವ್​ ಠಾಕ್ರೆ ಬಾವನಿಗೆ ಸೇರಿದ 11 ಫ್ಲಾಟ್​​ಗಳಿಗೆ ಬೀಗ ಜಡಿದ ಇಡಿ

ನವದೆಹಲಿ : ಕಾಶ್ಮೀರಿ ಪಂಡಿತರ ಹತ್ಯಾಕಾಂಡ ನಡೆದ ಕುರಿತು ನಿರ್ಮಿಸಲಾದ ದಿ ಕಾಶ್ಮೀರ ಫೈಲ್ಸ್​ ಸಿನಿಮಾದ ಬಗ್ಗೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಆಕ್ಷೇಪಿಸಿದ್ದಾರೆ. ಅಲ್ಲದೇ, ಸಿನಿಮಾಗೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಿದ್ದರ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿರುವ ದಿ ಕಾಶ್ಮೀರ ಫೈಲ್ಸ್​ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಬೇಕು ಎಂದು ಕರೆ ನೀಡಲಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರಗಳು ಸಿನಿಮಾ ಪ್ರದರ್ಶನಕ್ಕೆ ತೆರವಿಗೆ ವಿನಾಯಿತಿ ನೀಡಿವೆ. ಇದು ಜನರಲ್ಲಿ ದ್ವೇಷ ಭಾವನೆ ಮೂಡಿಸುವ ಉದ್ದೇಶ ಎಂದು ಆರೋಪಿಸಿದ್ದಾರೆ.

ಅಂದು ನಡೆದ ದುರಂತದ ಬಗ್ಗೆ ನನಗೂ ವಿಷಾದವಿದೆ. ಆದರೆ, ದಿ ಕಾಶ್ಮೀರ ಫೈಲ್ಸ್​ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಿದ್ದಾಗಿದೆ. ಅಂದಿನ ಘಟನೆಗೆ ಜನಾಂಗೀಯ ಭಾವನೆ ಹೊಂದಿದ್ದ ರಾಜಕೀಯ ಪಕ್ಷ, ಸಂಘಟನೆಗಳ ಕೈವಾಡದಿಂದ ನಡೆದಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಜರ್ಮನಿಯಲ್ಲಿ ಹಿಟ್ಲರ್​ ಮತ್ತು ಗೊಬೆಲ್ಸ್​ ಸೃಷ್ಟಿಸಿದ ಜನಾಂಗೀಯ ವಾದದಂತೆ ಭಾರತದಲ್ಲೂ ಅದು ತಲೆ ಎತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರತಿಯೊಬ್ಬರೂ ಸಿನಿಮಾವನ್ನು ವೀಕ್ಷಿಸಲು ಪ್ರೇರೇಪಣೆ ನೀಡಲಾಗುತ್ತಿದೆ. ಸಿನಿಮಾದಲ್ಲಿ ನಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಹತ್ಯಾಕಾಂಡಕ್ಕೆ ನಾನು ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರಿಗೆ ಮಾತ್ರವಲ್ಲದೇ, ಸಿಖ್ಖರು ಮತ್ತು ಮುಸ್ಲಿಮರಿಗೂ ಏನಾಯಿತು ಎಂಬುದರ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಓದಿ: ಸಿಎಂ ಉದ್ಧವ್​ ಠಾಕ್ರೆ ಬಾವನಿಗೆ ಸೇರಿದ 11 ಫ್ಲಾಟ್​​ಗಳಿಗೆ ಬೀಗ ಜಡಿದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.