ETV Bharat / bharat

ಆಮ್ಲಜನಕ, ರೆಮಿಡಿಸಿವರ್ ಕೊರತೆ: ಮಧ್ಯಪ್ರದೇಶದಲ್ಲಿ 6 ಸೋಂಕಿತರು ಸಾವು

author img

By

Published : Apr 20, 2021, 10:12 AM IST

ಕೋವಿಡ್ ಪರಿಸ್ಥಿತಿ ಚಿಂತಾಜನಕವಾಗಿರುವ ನಡುವೆ ಅವ್ಯವಸ್ಥೆಗಳ ವಿರುದ್ಧಕೇಳಿ ಬರುತ್ತಿರುವ ಮುಜುಗರ ತಪ್ಪಿಸಲು ಸರ್ಕಾರಗಳು ಸರ್ಕಸ್ ಮಾಡ್ತಿವೆ. ಆದರೆ, ಮಧ್ಯಪ್ರದೇಶದ ಭೋಪಾಲ್​ನಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟಿರುವುದು ಹದೆಗೆಟ್ಟ ಪರಿಸ್ಥಿತಿ ಮತ್ತು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ.

Covid patients died at Bhopal Hospital
ಭೋಪಾಲ್​ನಲ್ಲಿ ಕೋವಿಡ್ ಸೋಂಕಿತರು ಸಾವು

ಭೋಪಾಲ್ (ಮಧ್ಯಪ್ರದೇಶ): ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ, ಲಸಿಕೆಯೂ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆಯೇ ಭೋಪಾಲ್​ನಲ್ಲಿ ಆಮ್ಲಜನಕ, ರೆಮಿಡಿಸಿವರ್ ಔಷಧ​ ಕೊರತೆಯಿಂದ ವಕೀಲೆ ಸೇರಿದಂತೆ ಆರು ಜನ ಕೋವಿಡ್​ ಸೋಂಕಿತರು ಮೃತಪಟ್ಟಿದ್ದಾರೆ.

ಭೋಪಾಲ್​ನ ಪೀಪಲ್ಸ್ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಕೋವಿಡ್​ ರೋಗಿಗಳಿಗೆ ಆಕ್ಸಿಜನ್​ ಕೊರತೆಯುಂಟಾಗಿದೆ. ಈ ವೇಳೆ ಆಮ್ಲಜನಕ ಪೂರೈಸುವಂತೆ ರೋಗಿಗಳ ಸಂಬಂಧಿಕರು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಮ್ಲಜನಕದ ವ್ಯವಸ್ಥೆ ಮಾಡುವಷ್ಟರಲ್ಲಿ ಐವರು ಸೋಂಕಿತರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉತ್ತರಪ್ರದೇಶ ಇಕ್ಕಟ್ಟಿಗೆ ದೂಡಿದ ಕೊರೊನಾ:ಆಕ್ಸಿಜನ್​ ಪೂರೈಸಲು ಯೋಗಿ ಸರ್ಕಾರದ ಹರಸಾಹಸ

ಆದರೆ, ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದನ್ನು ಪೀಪಲ್ಸ್ ಆಸ್ಪತ್ರೆ ತಳ್ಳಿ ಹಾಕಿದೆ. ಈ ಕುರಿತು ಆಸ್ಪತ್ರೆಯ ಡೀನ್ ಡಾ. ಅನಿಲ್ ದೀಕ್ಷಿತ್ ಲಿಖಿತ ಮಾಹಿತಿ ನೀಡಿದ್ದು, ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಮ್ಲಜನಕದ ಕೊರತೆ ಉಂಟಾಗಿತ್ತು. ಆದರೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಐವರು ಮೃತಪಟ್ಟಿದ್ದಾರೆ ಎಂಬುವುದನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ.

ರೆಮ್​ಡೆಸ್ವಿರ್ ಸಿಗದೆ ವಕೀಲೆ ಸಾವು:

ನಗರದ ಇನ್ನೊಂದು ಆಸ್ಪತ್ರೆಯಲ್ಲಿ ರೆಮಿಡಿಸಿವರ್ ಚುಚ್ಚುಮದ್ದು ಸಿಗದೆ ಕೋವಿಡ್ ಸೋಂಕಿತ ವಕೀಲೆ ಮೃತಪಟ್ಟಿದ್ದಾರೆ. ತನ್ನ ಸಹೋದರಿಗೆ ಈ ಔಷಧ​ ಒದಗಿಸಿಕೊಡುವಂತೆ ಮೃತಳ ತಂಗಿ ಆಸ್ಪತ್ರೆ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ಕೋರಿದ್ದರು. ಆದರೆ, ಮೂರು ದಿನಗಳ ಕಾಲ ಅಲೆದಾಡಿದರೂ ಅವರಿಗೆ ರೆಮಿಡಿಸಿವರ್​ ಲಭ್ಯವಾಗಿರಲಿಲ್ಲ. ಕೊನೆಗೆ ಸೋಂಕಿತೆ ಮೃತಪಟ್ಟಿದ್ದಾರೆ.

ಭೋಪಾಲ್ (ಮಧ್ಯಪ್ರದೇಶ): ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ, ಲಸಿಕೆಯೂ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆಯೇ ಭೋಪಾಲ್​ನಲ್ಲಿ ಆಮ್ಲಜನಕ, ರೆಮಿಡಿಸಿವರ್ ಔಷಧ​ ಕೊರತೆಯಿಂದ ವಕೀಲೆ ಸೇರಿದಂತೆ ಆರು ಜನ ಕೋವಿಡ್​ ಸೋಂಕಿತರು ಮೃತಪಟ್ಟಿದ್ದಾರೆ.

ಭೋಪಾಲ್​ನ ಪೀಪಲ್ಸ್ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಕೋವಿಡ್​ ರೋಗಿಗಳಿಗೆ ಆಕ್ಸಿಜನ್​ ಕೊರತೆಯುಂಟಾಗಿದೆ. ಈ ವೇಳೆ ಆಮ್ಲಜನಕ ಪೂರೈಸುವಂತೆ ರೋಗಿಗಳ ಸಂಬಂಧಿಕರು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಮ್ಲಜನಕದ ವ್ಯವಸ್ಥೆ ಮಾಡುವಷ್ಟರಲ್ಲಿ ಐವರು ಸೋಂಕಿತರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉತ್ತರಪ್ರದೇಶ ಇಕ್ಕಟ್ಟಿಗೆ ದೂಡಿದ ಕೊರೊನಾ:ಆಕ್ಸಿಜನ್​ ಪೂರೈಸಲು ಯೋಗಿ ಸರ್ಕಾರದ ಹರಸಾಹಸ

ಆದರೆ, ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದನ್ನು ಪೀಪಲ್ಸ್ ಆಸ್ಪತ್ರೆ ತಳ್ಳಿ ಹಾಕಿದೆ. ಈ ಕುರಿತು ಆಸ್ಪತ್ರೆಯ ಡೀನ್ ಡಾ. ಅನಿಲ್ ದೀಕ್ಷಿತ್ ಲಿಖಿತ ಮಾಹಿತಿ ನೀಡಿದ್ದು, ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಮ್ಲಜನಕದ ಕೊರತೆ ಉಂಟಾಗಿತ್ತು. ಆದರೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಐವರು ಮೃತಪಟ್ಟಿದ್ದಾರೆ ಎಂಬುವುದನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ.

ರೆಮ್​ಡೆಸ್ವಿರ್ ಸಿಗದೆ ವಕೀಲೆ ಸಾವು:

ನಗರದ ಇನ್ನೊಂದು ಆಸ್ಪತ್ರೆಯಲ್ಲಿ ರೆಮಿಡಿಸಿವರ್ ಚುಚ್ಚುಮದ್ದು ಸಿಗದೆ ಕೋವಿಡ್ ಸೋಂಕಿತ ವಕೀಲೆ ಮೃತಪಟ್ಟಿದ್ದಾರೆ. ತನ್ನ ಸಹೋದರಿಗೆ ಈ ಔಷಧ​ ಒದಗಿಸಿಕೊಡುವಂತೆ ಮೃತಳ ತಂಗಿ ಆಸ್ಪತ್ರೆ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ಕೋರಿದ್ದರು. ಆದರೆ, ಮೂರು ದಿನಗಳ ಕಾಲ ಅಲೆದಾಡಿದರೂ ಅವರಿಗೆ ರೆಮಿಡಿಸಿವರ್​ ಲಭ್ಯವಾಗಿರಲಿಲ್ಲ. ಕೊನೆಗೆ ಸೋಂಕಿತೆ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.