ದಮೋ (ಮಧ್ಯಪ್ರದೇಶ): ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಮಿಷನರಿಗೆ ಸಂಬಂಧಿಸಿದ 10 ಜನರ ಮೇಲೆ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ ಅಧ್ಯಕ್ಷರಾದ ಪ್ರಿಯಾಂಕ್ ಕನೊಂಗೊ ದೂರು ದಾಖಲಿಸಿದ್ದಾರೆ. ಮಧ್ಯ ಪ್ರದೇಶದ ದಮೊಹಕ್ಕೆ ಅವರು ನಿನ್ನೆ ರಾತ್ರಿ (ಭಾನುವಾರ ರಾತ್ರಿ) ದಿಢೀರ್ ಭೇಟಿ ನೀಡಿದ್ದು, ಈ ವೇಳೆ ಈ ಘಟನೆ ನಡೆದಿದೆ.
ಇಲ್ಲಿನ ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿದ್ದ ಮಕ್ಕಳ ಅನಾಥಾಶ್ರಮಕ್ಕೆ ಕಾನೊಂಗೊ ದಿಢೀರ್ ಭೇಟಿ ನೀಡಿದ್ದಾರೆ. ತಮ್ಮ ಈ ಭೇಟಿ ಕುರಿತು ಅವರು ಕೇವಲ ಅಧಿಕಾರಿಗಳಿಗೆ ಮಾತ್ರ ಮಾಹಿತಿ ನೀಡಿದ್ದಾರೆ.
ಎಫ್ಐಆರ್ ಪ್ರಕಾರ, ಜಿಲ್ಲೆಯ ಕಟ್ನಿ ಬೈಪಾಸ್ ಬಳಿಯಿರುವ ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿರುವ ಮಕ್ಕಳ ಅನಾಥಾಶ್ರಮಕ್ಕೆ ಮಧ್ಯಪ್ರದೇಶ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಓಂಕಾರ್ ಸಿಂಗ್ ಮರ್ಕಾಮ್ ಭೇಟಿ ನೀಡಿದ್ದಾರೆ. ಅವರು ಗೇಟ್ ಹೊರಗೆ ಸಾಕಷ್ಟು ಹೊತ್ತು ಕಾದ ಬಳಿಕ ಅನಾಥಾಶ್ರಮದ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಈ ವೇಳೆ ಉನ್ನತ ಅಧಿಕಾರಿಗಳು ಅವರ ಜೊತೆ ಇದ್ದರೂ ಅವರಿಗೆ ಗೇಟ್ ತೆರೆಯಲು ನಿರಾಕರಿಸಿ, ಕಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮತಾಂತರ ಆರೋಪ: ಈ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯಲ್ಲಿ ಮಕ್ಕಳ ಮತಾಂತರ ಕಾರ್ಯ ನಡೆದಿದೆ. ದಿಂದೊರಿ ಜಿಲ್ಲೆಯಿಂದ ಕರೆ ತರಲಾಗಿದ್ದ ಮಗುವನ್ನು ಅವರು ಪಾದ್ರಿಯಾಗಿ ಮಾಡಲು ತರಬೇತಿ ನೀಡಲಾಗಿದೆ ಎಂದು ಕನೊಂಗೊ ಆಪಾದಿಸಿದ್ದಾರೆ. ಈ ಬೆನ್ನಲ್ಲೆ ಕನೊಂಗೊ ದೆಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಈ ದೂರು ಸಲ್ಲಿಸಲು ಕೂಡ ಸಾಕಷ್ಟು ಕಾಯಬೇಕಾಯಿತು ಎಂದಿದ್ದಾರೆ.
ಈ ಅನಿರೀಕ್ಷಿತ ಭೇಟಿಗೆ ಮುನ್ನ ಮತ್ಯಾರೂ ಅಲ್ಲದೇ ಇಲಾಖೆಯ ಜನರೇ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಯನ್ನು ನಾನೇ ಹಿಡಿದಿದ್ದೇನೆ. ಇದು ಮಕ್ಕಳ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ ಆಗಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಎಫ್ಐಆರ್ ಮಾಡಲಾಗಿದ್ದು, ಪೊಲೀಸರಿಗೆ ತಿಳಿಸಲಾಗಿದೆ. ಇಲ್ಲಿನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೇಜವಬ್ದಾರಿಯಿಂದ ಇದ್ದು, ಇಲ್ಲಿನ ಸ್ಥಳೀಯ ಅಧಿಕಾರಿಗಳು ಕೂಡ ಕ್ಲಿಷ್ಟಕರವಾಗಿದ್ದಾರೆ.
ದೂರು ದಾಖಲು ಎಸ್ಪಿ ಸ್ಪಷ್ಟನೆ: ಪ್ರಕರಣ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್ ಸಿಂಗ್, ಆಯೋಗದ ಅಧ್ಯಕ್ಷರು, ಮತಾಂತರದ ದೂರು ದಾಖಲಿಸಿದ್ದಾರೆ. ಕ್ರಿಶ್ಚಿಯನ್ ಮಿಷನರಿಯ 10 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 370, ಸೆಕ್ಷನ್ 42 ಮತ್ತು 75, ಬಾಲ ನ್ಯಾಯ ಕಾಯಿದೆ 2015 ಮತ್ತು ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಸೆಕ್ಷನ್ 3 ಮತ್ತು 5ರ ಅನುಸಾರ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ತನಿಖೆ ನಡೆಸಲಾಗುವುದು ಎಂದರು.
ಆರೋಪ ನಿರಾಕರಿಸಿದ ಹಾಸ್ಟೆಲ್ ಪ್ರಿನ್ಸಿಪಾಲ್: ಘಟನೆ ಕುರಿತು ಮಾತನಾಡಿರುವ ಹಾಸ್ಟೆಲ್ ಪ್ರಿನ್ಸಿಪಾಲ್ ಟ್ರಿಜ್ ಮಿಸ್, ಮತಾಂತರದ ಈ ಆರೋಪದಲ್ಲಿ ಉರುಳಿಲ್ಲ. ಈ ಹಾಸ್ಟೆಲ್ನಲ್ಲಿ ಯಾವುದೇ ಮಗುವಿಗೂ ಕಟ್ಟುಪಾಡಗಳಿಲ್ಲ. ಹಿಂದು, ಮುಸ್ಲಿಂ ಸೇರಿದಂತೆ ಆಯಾ ಧರ್ಮಕ್ಕೆ ಸಂಬಂಧಿಸಿದ ಮಕ್ಕಳು ಅವರ ಧರ್ಮ ಅನುಸಾರವೇ ಪ್ರಾರ್ಥನೆ ಮಾಡುತ್ತಾರೆ. ಭಾನುವಾರ ಆದ ಕಾರಣ ಮಕ್ಕಳು ಹೊರ ಹೋಗಬಾರದು ಎಂಬ ಕಾರಣದಿಂದ ಹಾಗೂ ಭದ್ರತೆ ಹಿನ್ನಲೆ ಗೇಟ್ ತೆಗೆಯಲು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆಯ ಹತ್ಯೆಯ ಬಗ್ಗೆ ಕೇಳಿ ಪ್ರಿಯಾಂಕಾ ಅತ್ತಿದ್ದರು: ಬಿಡುಗಡೆಯಾದ ಅಪರಾಧಿ ನಳಿನಿ