ಶ್ರೀಕಾಕುಳಂ(ಆಂಧ್ರಪ್ರದೇಶ ) : ಶ್ರೀಕಾಕುಳಂ ಜಿಲ್ಲೆಯ ಕೊರಸವಾಡ ಗ್ರಾಮದಲ್ಲಿ ದುರಂತವೊಂದು ನಡೆದಿದೆ. ಸಾಲಬಾಧೆ ತಾಳಲಾರದೇ ವ್ಯಕ್ತಿಯೊಬ್ಬ ಕೂಲ್ ಡ್ರಿಂಕ್ಸ್ನಲ್ಲಿ ಕೀಟನಾಶಕ ಸೇರಿಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೆಂಕಟರಮಣ ಮೃತ ದುರ್ದೈವಿ.
ಈತ ಸೆಪ್ಟೆಂಬರ್ 30 ರಂದು ಸಂಜೆ ವೇಳೆ ಕೂಲ್ ಡ್ರಿಂಕ್ಸ್ನಲ್ಲಿ ಕೀಟನಾಶಕ ಸೇರಿಸಿಕೊಂಡು ಕುಡಿದಿದ್ದಾನೆ. ಈತನನ್ನು ಕುಟುಂಬ ಸದಸ್ಯರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಕಾಕುಳಂ ರಿಮ್ಸ್ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಶುಕ್ರವಾರ ಮೃತಪಟ್ಟಿದ್ದ.
ಆದರೆ, ದುರಂತವೇನೆಂದರೆ ಇವನು ಕೂಲ್ ಡ್ರಿಂಕ್ಸ್ನಲ್ಲಿ ಕ್ರಿಮಿನಾಶಕ ಮಿಕ್ಸ್ ಮಾಡಿದ್ದನ್ನು ಅರಿಯದ ಈತನ ಇಬ್ಬರು ಮಕ್ಕಳಾದ ನಿಹಾಲ್ (3), ಯಾಮಿನಿ (5) ಕೂಲ್ ಡ್ರೀಂಕ್ಸ್ ಎಂದು ಸೇವಿಸಿದ್ದಾರೆ. ತಕ್ಷಣ ಆ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.