ETV Bharat / bharat

ಗೋಧಿ, ಭತ್ತ ಹೆಚ್ಚು ಬೆಳೆಯುವ ರೈತರು ಪೆಟ್ರೋಲ್​, ಡೀಸೆಲ್​ ತಯಾರಿಸಬಹುದು: ನಿತಿನ್​ ಗಡ್ಕರಿ

author img

By

Published : Sep 13, 2021, 9:37 PM IST

ಗೋಧಿ, ಭತ್ತ ಹೆಚ್ಚಾಗಿ ಬೆಳೆಯುವ ಮೂಲಕ ರೈತರು ಇನ್ಮುಂದೆ ಖುದ್ದಾಗಿ ಪೆಟ್ರೋಲ್​, ಡೀಸೆಲ್​ ತಯಾರಿಸಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

Nitin Gadkari
Nitin Gadkari

ಜೈಪುರ್​(ರಾಜಸ್ಥಾನ): ರಾಜಸ್ಥಾನ ವಿಧಾನಸಭೆಯಲ್ಲಿ ಕಾಮಲ್​ವೆಲ್ತ್​ ಸಂಸದೀಯ ಸಂಘ ಆಯೋಜನೆ ಮಾಡಿದ್ದ ಸೆಮಿನಾರ್​ನಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ, ಶೀಘ್ರದಲ್ಲೇ ಕೇಂದ್ರದಿಂದ ಫ್ಲೆಕ್ಸ್​ ಎಂಜಿನ್​ ಪಾಲಿಸಿ ಜಾರಿಗೆ ತರಲಾಗುವುದು ಎಂದರು.

ಗೋಧಿ ಮತ್ತು ಭತ್ತ ಉತ್ಪಾದನೆ ಮಾಡುವುದರ ಜೊತೆಗೆ ರೈತರು ಇನ್ಮುಂದೆ ಪೆಟ್ರೋಲ್​ ಮತ್ತು ಡೀಸೆಲ್​ ಕೂಡ ತಯಾರು ಮಾಡಬಹುದು ಎಂದು ತಿಳಿಸಿರುವ ಕೇಂದ್ರ ಸಚಿವರು, ಗೋಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್​​ ಉತ್ಪಾದನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ: ಅಣ್ಣ-ತಮ್ಮ ದುರ್ಮರಣ, ಮೂವರ ರಕ್ಷಣೆ

ಕೇಂದ್ರ ಸರ್ಕಾರದಿಂದ ಫ್ಲೆಕ್ಸ್ ಎಂಜಿನಿ ಪಾಲಿಸಿ ಜಾರಿಯಾಗುವುದರಿಂದ ಚಾಲಕರು ತಮ್ಮ ವಾಹನಗಳಿಗೆ ಪೆಟ್ರೋಲ್​ ಅಥವಾ ಶೇ. 100ರಷ್ಟು ಎಥೆನಾಲ್​ ಇಂಧನ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ಅಮೆರಿಕ, ಬ್ರೆಜಿಲ್ ಮತ್ತು ಕೆನಡಾದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂಬ ಮಾಹಿತಿ ಹಂಚಿಕೊಂಡರು.

ರಾಜಸ್ಥಾನ, ಕರ್ನಾಟಕ, ಗುಜರಾತ್​, ತೆಲಂಗಾಣ, ಛತ್ತೀಸ್​ಗಢ, ಒಡಿಶಾ ಮತ್ತು ಜಾರ್ಖಂಡ್​​ ಸೇರಿದಂತೆ ಹಲವು ರಾಜ್ಯಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದರೆ ಇನ್ಮುಂದೆ ಶೇ. 50ರಷ್ಟು ಸೂಪರ್​ ನೀರಾವರಿ ವ್ಯವಸ್ಥೆಯಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ರೈತರು ಹೆಚ್ಚಿನ ಬೆಳೆ ಬೆಳೆಯಬಹುದು ಎಂದರು.

ಜೈಪುರ್​(ರಾಜಸ್ಥಾನ): ರಾಜಸ್ಥಾನ ವಿಧಾನಸಭೆಯಲ್ಲಿ ಕಾಮಲ್​ವೆಲ್ತ್​ ಸಂಸದೀಯ ಸಂಘ ಆಯೋಜನೆ ಮಾಡಿದ್ದ ಸೆಮಿನಾರ್​ನಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ, ಶೀಘ್ರದಲ್ಲೇ ಕೇಂದ್ರದಿಂದ ಫ್ಲೆಕ್ಸ್​ ಎಂಜಿನ್​ ಪಾಲಿಸಿ ಜಾರಿಗೆ ತರಲಾಗುವುದು ಎಂದರು.

ಗೋಧಿ ಮತ್ತು ಭತ್ತ ಉತ್ಪಾದನೆ ಮಾಡುವುದರ ಜೊತೆಗೆ ರೈತರು ಇನ್ಮುಂದೆ ಪೆಟ್ರೋಲ್​ ಮತ್ತು ಡೀಸೆಲ್​ ಕೂಡ ತಯಾರು ಮಾಡಬಹುದು ಎಂದು ತಿಳಿಸಿರುವ ಕೇಂದ್ರ ಸಚಿವರು, ಗೋಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್​​ ಉತ್ಪಾದನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ: ಅಣ್ಣ-ತಮ್ಮ ದುರ್ಮರಣ, ಮೂವರ ರಕ್ಷಣೆ

ಕೇಂದ್ರ ಸರ್ಕಾರದಿಂದ ಫ್ಲೆಕ್ಸ್ ಎಂಜಿನಿ ಪಾಲಿಸಿ ಜಾರಿಯಾಗುವುದರಿಂದ ಚಾಲಕರು ತಮ್ಮ ವಾಹನಗಳಿಗೆ ಪೆಟ್ರೋಲ್​ ಅಥವಾ ಶೇ. 100ರಷ್ಟು ಎಥೆನಾಲ್​ ಇಂಧನ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ಅಮೆರಿಕ, ಬ್ರೆಜಿಲ್ ಮತ್ತು ಕೆನಡಾದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂಬ ಮಾಹಿತಿ ಹಂಚಿಕೊಂಡರು.

ರಾಜಸ್ಥಾನ, ಕರ್ನಾಟಕ, ಗುಜರಾತ್​, ತೆಲಂಗಾಣ, ಛತ್ತೀಸ್​ಗಢ, ಒಡಿಶಾ ಮತ್ತು ಜಾರ್ಖಂಡ್​​ ಸೇರಿದಂತೆ ಹಲವು ರಾಜ್ಯಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದರೆ ಇನ್ಮುಂದೆ ಶೇ. 50ರಷ್ಟು ಸೂಪರ್​ ನೀರಾವರಿ ವ್ಯವಸ್ಥೆಯಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ರೈತರು ಹೆಚ್ಚಿನ ಬೆಳೆ ಬೆಳೆಯಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.