ETV Bharat / bharat

ಅರೆ, ಇದೆಂಥಾ ಹುಚ್ಚಾಟ? ಜೀವಂತ ಹಾವು ತಿಂದು ‘ಇದುವೇ ಕೊರೊನಾ ರೋಗಕ್ಕೆ ಔಷಧಿ’ ಎನ್ನುವುದೇ?

author img

By

Published : May 28, 2021, 11:24 AM IST

ತಮಿಳುನಾಡಿನ ರೈತನೊಬ್ಬ ಜೀವಂತ ಹಾವು ತಿಂದು ‘ಇದುವೇ ಕೊರೊನಾ ರೋಗಕ್ಕೆ ಔಷಧಿ’ ಎಂದಿದ್ದಾನೆ.

Farmer eats a snake, Farmer eats a snake in Madurai, Madurai news, Madurai crime news, corona medicine, ಜೀವಂತ ಹಾವು ತಿಂದ ರೈತ, ಮದುರೈದಲ್ಲಿ ಜೀವಂತ ಹಾವು ತಿಂದ ರೈತ, ಮದುರೈ ಸುದ್ದಿ, ಮದುರೈ ಅಪರಾಧ ಸುದ್ದಿ, ಕೊರೊನಾ ಔಷಧಿ,
ಜೀವಂತ ಹಾವು ತಿಂದು ‘ಇದುವೇ ಕೊರೊನಾ ಔಷಧಿ’ ಎಂದ ರೈತ

ಮಧುರೈ(ತಮಿಳುನಾಡು): ಸಾಂಕ್ರಾಮಿಕ ರೋಗ ಕೊರೊನಾದಿಂದ ವಿಶ್ವಾದ್ಯಂತ ಕೋಟ್ಯಂತರ ಜನರು ಬಳಲುತ್ತಿದ್ದಾರೆ. ಈಗಾಗಲೇ ಮಾರಕ ರೋಗಕ್ಕೆ ಔಷಧ ಕಂಡುಹಿಡಿದಿದ್ದು, ವಿಶ್ವದೆಲ್ಲೆಡೆ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದೆ. ಹೀಗಿರುವಾಗ ಇಲ್ಲೊಬ್ಬ ರೈತ ಜೀವಂತ ಹಾವು ತಿಂದು ‘ಇದುವೇ ಕೊರೊನಾ ಔಷಧಿ’ ಎಂದು ಹೇಳುತ್ತಾ ಹುಚ್ಚಾಟ ನಡೆಸಿದ್ದಾನೆ.

ವೈರಲ್ ವಿಡಿಯೋ

ಮಧುರೈ ಜಿಲ್ಲೆಯ ಪೆರುಮಾಲ್ಪಟ್ಟಿ ಗ್ರಾಮದ ರೈತನೊಬ್ಬ ಜೀವಂತ ಹಾವೊಂದನ್ನು ಕೈಯಲ್ಲಿ ಹಿಡಿದು ಬಾಯಿಯಿಂದ ಕಚ್ಚಿ ತಿಂದಿದ್ದಾನೆ. ಬಳಿಕ ಇದು ಕೊರೊನಾಗೆ ಅಪರೂಪದ ಔಷಧಿಯಾಗಿದೆ ಎಂದು ಹೇಳುತ್ತಾನೆ.

ಈತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಈ ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದು, ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Black fungus: ಸಾವಿರ ಗಡಿಯತ್ತ ಕಪ್ಪು ಶಿಲೀಂಧ್ರ ಪ್ರಕರಣ... ರಾಜ್ಯದಲ್ಲಿ ಔಷಧಿ ಕೊರತೆ

ಮಧುರೈ(ತಮಿಳುನಾಡು): ಸಾಂಕ್ರಾಮಿಕ ರೋಗ ಕೊರೊನಾದಿಂದ ವಿಶ್ವಾದ್ಯಂತ ಕೋಟ್ಯಂತರ ಜನರು ಬಳಲುತ್ತಿದ್ದಾರೆ. ಈಗಾಗಲೇ ಮಾರಕ ರೋಗಕ್ಕೆ ಔಷಧ ಕಂಡುಹಿಡಿದಿದ್ದು, ವಿಶ್ವದೆಲ್ಲೆಡೆ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದೆ. ಹೀಗಿರುವಾಗ ಇಲ್ಲೊಬ್ಬ ರೈತ ಜೀವಂತ ಹಾವು ತಿಂದು ‘ಇದುವೇ ಕೊರೊನಾ ಔಷಧಿ’ ಎಂದು ಹೇಳುತ್ತಾ ಹುಚ್ಚಾಟ ನಡೆಸಿದ್ದಾನೆ.

ವೈರಲ್ ವಿಡಿಯೋ

ಮಧುರೈ ಜಿಲ್ಲೆಯ ಪೆರುಮಾಲ್ಪಟ್ಟಿ ಗ್ರಾಮದ ರೈತನೊಬ್ಬ ಜೀವಂತ ಹಾವೊಂದನ್ನು ಕೈಯಲ್ಲಿ ಹಿಡಿದು ಬಾಯಿಯಿಂದ ಕಚ್ಚಿ ತಿಂದಿದ್ದಾನೆ. ಬಳಿಕ ಇದು ಕೊರೊನಾಗೆ ಅಪರೂಪದ ಔಷಧಿಯಾಗಿದೆ ಎಂದು ಹೇಳುತ್ತಾನೆ.

ಈತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಈ ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದು, ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Black fungus: ಸಾವಿರ ಗಡಿಯತ್ತ ಕಪ್ಪು ಶಿಲೀಂಧ್ರ ಪ್ರಕರಣ... ರಾಜ್ಯದಲ್ಲಿ ಔಷಧಿ ಕೊರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.