ETV Bharat / bharat

ಟ್ರಕ್‌ಗೆ ಬಸ್ ಡಿಕ್ಕಿ, ಚಾಲಕ ಸಾವು.. 35 ಮಂದಿಗೆ ಗಾಯ.. ವಿಡಿಯೋ

author img

By

Published : Dec 12, 2022, 5:16 PM IST

Updated : Dec 12, 2022, 6:06 PM IST

ಬಿಹಾರದ ಕೈಮೂರ್‌ನಲ್ಲಿ ಮಣ್ಣು ತುಂಬಿದ ಟ್ರಕ್‌ಗೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, 35 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಿಹಾರದ ಕೈಮೂರ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ
ಬಿಹಾರದ ಕೈಮೂರ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ
ಬಿಹಾರದ ಕೈಮೂರ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ

ಕೈಮೂರ್ (ಬಿಹಾರ): ಬಿಹಾರದ ಕೈಮೂರ್‌ನಲ್ಲಿ ಮಣ್ಣು ತುಂಬಿದ ಟ್ರಕ್‌ಗೆ ಪ್ರವಾಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು 35 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ ಕನಿಷ್ಠ 55 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ ಗಾಯಾಳುಗಳನ್ನು ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು.

ಬಸ್​ ಬಂಗಾಳದಿಂದ ಆಗ್ರಾಕ್ಕೆ ಹೋಗುತ್ತಿತ್ತು ಮತ್ತು ಅಯೋಧ್ಯಾದಲ್ಲಿ ರಾತ್ರಿ ನಿಲುಗಡೆಗೆ ನಿಗದಿಯಾಗಿತ್ತು. 'ಗುರು ನಾನಕ್ ಬಸೇರಾ ಢಾಬಾ ಬಳಿ ಕೆಲವು ನಿಮಿಷಗಳ ಕಾಲ ಬಸ್ ನಿಲ್ಲಿಸಿತು ಮತ್ತು ನಂತರ ತನ್ನ ಗಮ್ಯಸ್ಥಾನದ ಕಡೆಗೆ ಹೊರಟಿತ್ತು. ಹೀಗೆ ಹೊರಟ ನಿಮಿಷಗಳ ತರುವಾಯ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ' ಎಂದು ಗಾಯಗೊಂಡ ಪ್ರಯಾಣಿಕ ಅನಿತಾ ದಾಸ್ ವಿವರಿಸಿದ್ದಾರೆ.

ರಸ್ತೆಯ ರಾಂಗ್ ಸೈಡ್‌ನಲ್ಲಿ ಚಲಿಸುತ್ತಿದ್ದ ಬಸ್ ತಿರುವಿನಲ್ಲಿ ವೇಗವಾಗಿ ಹೋಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಚಾಲಕ ಮೃತಪಟ್ಟಿದ್ದಾನೆ. ಎನ್‌ಹೆಚ್‌ಎಐನ ಒಟ್ಟು 12 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಆರ್‌ಟಿಒ ಉದ್ಯೋಗಿ ರಾಮೇಶ್ವರ್ ರಾಮ್ ಹೇಳಿದ್ದಾರೆ.

ಓದಿ: ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ: ದಂಪತಿ ಸೇರಿ ಐವರು ದುರ್ಮರಣ

ಬಿಹಾರದ ಕೈಮೂರ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ

ಕೈಮೂರ್ (ಬಿಹಾರ): ಬಿಹಾರದ ಕೈಮೂರ್‌ನಲ್ಲಿ ಮಣ್ಣು ತುಂಬಿದ ಟ್ರಕ್‌ಗೆ ಪ್ರವಾಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು 35 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ ಕನಿಷ್ಠ 55 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ ಗಾಯಾಳುಗಳನ್ನು ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು.

ಬಸ್​ ಬಂಗಾಳದಿಂದ ಆಗ್ರಾಕ್ಕೆ ಹೋಗುತ್ತಿತ್ತು ಮತ್ತು ಅಯೋಧ್ಯಾದಲ್ಲಿ ರಾತ್ರಿ ನಿಲುಗಡೆಗೆ ನಿಗದಿಯಾಗಿತ್ತು. 'ಗುರು ನಾನಕ್ ಬಸೇರಾ ಢಾಬಾ ಬಳಿ ಕೆಲವು ನಿಮಿಷಗಳ ಕಾಲ ಬಸ್ ನಿಲ್ಲಿಸಿತು ಮತ್ತು ನಂತರ ತನ್ನ ಗಮ್ಯಸ್ಥಾನದ ಕಡೆಗೆ ಹೊರಟಿತ್ತು. ಹೀಗೆ ಹೊರಟ ನಿಮಿಷಗಳ ತರುವಾಯ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ' ಎಂದು ಗಾಯಗೊಂಡ ಪ್ರಯಾಣಿಕ ಅನಿತಾ ದಾಸ್ ವಿವರಿಸಿದ್ದಾರೆ.

ರಸ್ತೆಯ ರಾಂಗ್ ಸೈಡ್‌ನಲ್ಲಿ ಚಲಿಸುತ್ತಿದ್ದ ಬಸ್ ತಿರುವಿನಲ್ಲಿ ವೇಗವಾಗಿ ಹೋಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಚಾಲಕ ಮೃತಪಟ್ಟಿದ್ದಾನೆ. ಎನ್‌ಹೆಚ್‌ಎಐನ ಒಟ್ಟು 12 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಆರ್‌ಟಿಒ ಉದ್ಯೋಗಿ ರಾಮೇಶ್ವರ್ ರಾಮ್ ಹೇಳಿದ್ದಾರೆ.

ಓದಿ: ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ: ದಂಪತಿ ಸೇರಿ ಐವರು ದುರ್ಮರಣ

Last Updated : Dec 12, 2022, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.