ETV Bharat / bharat

ಹೊತ್ತಿ ಉರಿದ ಕಾರಿನಲ್ಲೇ ಸುಟ್ಟು ಹೋದ ಚಾಲಕ.. ವ್ಯರ್ಥವಾದ ಸ್ಥಳೀಯರ ಶ್ರಮ! ವಿಡಿಯೋ... - ಜಮ್​ಶೆಡ್​ಪುರ ಕಾರು ಬೆಂಕಿ,

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಕಾರಿನಿಂದ ಹೊರ ಬಾರದಾಗದೇ ಅಲ್ಲೇ ಸುಟ್ಟು ಕರಕಲವಾಗಿರುವ ಘಟನೆ ಜಾರ್ಖಂಡ್​ನ ಜಮ್​ಶೆಡ್​ಪುರದಲ್ಲಿ ನಡೆದಿದೆ.

Driver died in car fire incident, Driver died in car fire incident at jamshedpur, Jamshedpur car fire, Jamshedpur car fire news, ಹೊತ್ತಿ ಉರಿದ ಕಾರಿನಲ್ಲಿ ಚಾಲಕ ಸಾವು, ಜಮ್​ಶೆಡ್​ಪುರ ಹೊತ್ತಿ ಉರಿದ ಕಾರಿನಲ್ಲಿ ಚಾಲಕ ಸಾವು, ಜಮ್​ಶೆಡ್​ಪುರ ಕಾರು ಬೆಂಕಿ, ಜಮ್​ಶೆಡ್​ಪುರ ಕಾರು ಬೆಂಕಿ ಸುದ್ದಿ,
ಹೊತ್ತಿ ಉರಿದ ಕಾರಿನಲ್ಲೇ ಸುಟ್ಟು ಹೋದ ಚಾಲಕ
author img

By

Published : Feb 17, 2021, 12:16 PM IST

ಜಮ್​ಶೆಡ್​ಪುರ: ಸಾವು ಯಾವ ರೂಪದಲ್ಲಿ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಾವು ಬಂದಾಗ ನಮ್ಮ ಜೀವನವೂ ಅಲ್ಲಿಗೆ ಮುಕ್ತಾಯವಾಗುತ್ತೆ. ಇಂತಹದೊಂದು ಘಟನೆ ಸೋನಾರಿಯಲ್ಲಿ ಸಂಭವಿಸಿದೆ.

ಹೊತ್ತಿ ಉರಿದ ಕಾರಿನಲ್ಲೇ ಸುಟ್ಟು ಹೋದ ಚಾಲಕ

ಹೌದು, ಚಲಿಸುವ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದಾನೆ. ಮಂಗಳವಾರ ತಡರಾತ್ರಿ ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡು-ನೋಡುತ್ತಿದ್ದಂತೆ ಬೆಂಕಿ ಇಡೀ ವಾಹನಕ್ಕೆ ಆವರಿಸಿತು. ಅದರಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಲ್ಲಿಯೇ ಸಿಲುಕಿಕೊಂಡಿದ್ದನು.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ರಕ್ಷಾಣ ಕಾರ್ಯಕ್ಕೆ ಮುಂದಾದರು. ಸ್ಥಳೀಯರು ತಮ್ಮ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದ್ರೂ ಪ್ರಯೋಜನವಾಗಲಿಲ್ಲ. ವ್ಯಕ್ತಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ಅಲ್ಲೇ ಸುಟ್ಟು ಕರಕಲವಾಗಿದ್ದಾನೆ. ಬೆಂಕಿ ನಂದಿಸಿದ ನಂತರ ಚಾಲಕನನ್ನು ಕಾರಿನಿಂದ ಹೊರ ತೆಗೆದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು. ಮೃತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಷ್ಟು ದೇಹ ಸುಟ್ಟು ಕರಕಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಎಂಜಿಎಂ ಆಸ್ಪತ್ರೆಗೆ ರವಾನಿಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಮ್​ಶೆಡ್​ಪುರ: ಸಾವು ಯಾವ ರೂಪದಲ್ಲಿ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಾವು ಬಂದಾಗ ನಮ್ಮ ಜೀವನವೂ ಅಲ್ಲಿಗೆ ಮುಕ್ತಾಯವಾಗುತ್ತೆ. ಇಂತಹದೊಂದು ಘಟನೆ ಸೋನಾರಿಯಲ್ಲಿ ಸಂಭವಿಸಿದೆ.

ಹೊತ್ತಿ ಉರಿದ ಕಾರಿನಲ್ಲೇ ಸುಟ್ಟು ಹೋದ ಚಾಲಕ

ಹೌದು, ಚಲಿಸುವ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದಾನೆ. ಮಂಗಳವಾರ ತಡರಾತ್ರಿ ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡು-ನೋಡುತ್ತಿದ್ದಂತೆ ಬೆಂಕಿ ಇಡೀ ವಾಹನಕ್ಕೆ ಆವರಿಸಿತು. ಅದರಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಲ್ಲಿಯೇ ಸಿಲುಕಿಕೊಂಡಿದ್ದನು.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ರಕ್ಷಾಣ ಕಾರ್ಯಕ್ಕೆ ಮುಂದಾದರು. ಸ್ಥಳೀಯರು ತಮ್ಮ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದ್ರೂ ಪ್ರಯೋಜನವಾಗಲಿಲ್ಲ. ವ್ಯಕ್ತಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ಅಲ್ಲೇ ಸುಟ್ಟು ಕರಕಲವಾಗಿದ್ದಾನೆ. ಬೆಂಕಿ ನಂದಿಸಿದ ನಂತರ ಚಾಲಕನನ್ನು ಕಾರಿನಿಂದ ಹೊರ ತೆಗೆದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು. ಮೃತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಷ್ಟು ದೇಹ ಸುಟ್ಟು ಕರಕಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಎಂಜಿಎಂ ಆಸ್ಪತ್ರೆಗೆ ರವಾನಿಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.