ETV Bharat / bharat

ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ 3 ಕೋಟಿ ಮೌಲ್ಯದ ಚಿನ್ನಾಭರಣ​​ ಸಮರ್ಪಣೆ

author img

By

Published : Dec 10, 2021, 11:43 PM IST

ತಿರುಮಲ ವೆಂಕಟೇಶ್ವರ ದೇವರಿಗೆ ಭಕ್ತರೊಬ್ಬರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಸಮರ್ಪಣೆ ಮಾಡಿದ್ದಾರೆ.

devotee donates jewelery to venkateswara swamy
ತಿರುಪತಿ ತಿಮ್ಮಪ್ಪನಿಗೆ ಚಿನ್ನಾಭರಣ​​ ಸಮರ್ಪಣೆ

ತಿರುಪತಿ/ಆಂಧ್ರಪ್ರದೇಶ : ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು 3 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ. ಹರಕೆಯಾಗಿ ತಿಮ್ಮಪ್ಪನ ಅಂಗೈಗಳನ್ನು ಅಲಂಕರಿಸಲು ರತ್ನಖಚಿತ ಚಿನ್ನದ ಕೈಗವಸುಗಳನ್ನು ನೀಡಿದ್ದಾರೆ.

ಈ ಚಿನ್ನದ ಕೈಗವಸುಗಳು ಸುಮಾರು 5 ಕೆ.ಜಿ ತೂಕವಿದ್ದು, ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ. ತಿರಮಲದಲ್ಲೇ ನೆಲೆಸಿರುವ ಕುಟುಂಬವು ಈ ಚಿನ್ನಾಭರಣಗಳನ್ನು ನೀಡಿದೆ ಎನ್ನಲಾಗಿದ್ದು, ಭಕ್ತರು ಯಾರೆಂಬುದನ್ನು ಗೌಪ್ಯವಾಗಿಡಲಾಗಿದೆ. ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಆಭರಣಗಳನ್ನು ಟಿಟಿಡಿಗೆ ಹಸ್ತಾಂತರಿಸಲಾಯಿತು.

ಕೆಲ ದಿನಗಳ ಹಿಂದೆ ತಮಿಳುನಾಡಿನ ಭಕ್ತರೊಬ್ಬರು ಬಾಲಾಜಿ ದೇವಸ್ಥಾನಕ್ಕೆ ಸುಮಾರು 3.5 ಕೆಜಿ ತೂಕದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಶಂಖ ಮತ್ತು ಚಕ್ರಗಳನ್ನು ಕೊಡುಗೆಯಾಗಿ ನೀಡಿದ್ದರು.

ಇದನ್ನೂ ಓದಿ: ಎಚ್ಚರ.. ಎಚ್ಚರ.. ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ!

ತಿರುಪತಿ/ಆಂಧ್ರಪ್ರದೇಶ : ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು 3 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ. ಹರಕೆಯಾಗಿ ತಿಮ್ಮಪ್ಪನ ಅಂಗೈಗಳನ್ನು ಅಲಂಕರಿಸಲು ರತ್ನಖಚಿತ ಚಿನ್ನದ ಕೈಗವಸುಗಳನ್ನು ನೀಡಿದ್ದಾರೆ.

ಈ ಚಿನ್ನದ ಕೈಗವಸುಗಳು ಸುಮಾರು 5 ಕೆ.ಜಿ ತೂಕವಿದ್ದು, ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ. ತಿರಮಲದಲ್ಲೇ ನೆಲೆಸಿರುವ ಕುಟುಂಬವು ಈ ಚಿನ್ನಾಭರಣಗಳನ್ನು ನೀಡಿದೆ ಎನ್ನಲಾಗಿದ್ದು, ಭಕ್ತರು ಯಾರೆಂಬುದನ್ನು ಗೌಪ್ಯವಾಗಿಡಲಾಗಿದೆ. ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಆಭರಣಗಳನ್ನು ಟಿಟಿಡಿಗೆ ಹಸ್ತಾಂತರಿಸಲಾಯಿತು.

ಕೆಲ ದಿನಗಳ ಹಿಂದೆ ತಮಿಳುನಾಡಿನ ಭಕ್ತರೊಬ್ಬರು ಬಾಲಾಜಿ ದೇವಸ್ಥಾನಕ್ಕೆ ಸುಮಾರು 3.5 ಕೆಜಿ ತೂಕದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಶಂಖ ಮತ್ತು ಚಕ್ರಗಳನ್ನು ಕೊಡುಗೆಯಾಗಿ ನೀಡಿದ್ದರು.

ಇದನ್ನೂ ಓದಿ: ಎಚ್ಚರ.. ಎಚ್ಚರ.. ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.