ETV Bharat / bharat

ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ - ದೆಹಲಿ ಪೊಲೀಸರ ಕಾರ್ಯಾಚರಣೆ

ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಅಗ್ನಿಶಾಮಕ ಸಿಲಿಂಡರ್ ಮಾರಿ ವಂಚಿಸಲೆತ್ನಿಸಿ, ಸಿಕ್ಕಿಬಿದ್ದಿದ್ದಾರೆ.

Delhi Police arrests two for selling fire extinguisher instead of oxygen cylinder
ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ
author img

By

Published : Apr 29, 2021, 8:39 PM IST

ನವದೆಹಲಿ: ಆಮ್ಲಜನಕ ಸಿಲಿಂಡರ್​ಗಳೆಂದು ನಂಬಿಸಿ, ಅಗ್ನಿಶಾಮಕ ಸಿಲಿಂಡರ್​​ಗಳನ್ನು ಮಹಿಳೆಯೊಬ್ಬಳಿಗೆ ಮಾರಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಮಹಿಳೆಯಾದ ಗೀತಾ ಅರೋರಾ ಎಂಬಾಕೆಯ ಸಂಬಂಧಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆ ಆಮ್ಲಜನಕ ಸಿಲಿಂಡರ್​​ಗಾಗಿ ಹುಡುಕಾಡುತ್ತಿದ್ದ ವೇಳೆ ಆರೋಪಿಗಳಿಬ್ಬರು ಅಗ್ನಿಶಾಮಕ ಸಿಲಿಂಡರ್​ಗಳನ್ನೇ ಆಮ್ಲಜನಕ ಸಿಲಿಂಡರ್​ಗಳೆಂದು ಮಾರಿದ್ದರು.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಕೆಲವು ಸಮಯದ ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಉತ್ತಮ್ ನಗರ್ ಪೊಲೀಸ್ ಮತ್ತು ಡಿಪಾರ್ಟ್​ಮೆಂಟ್ ಆಫ್ ವರ್ಕ್​ಫೋರ್ಸ್​ ಡೆವೆಲಪ್​​ಮೆಂಟ್​ನ ವಿಶೇಷ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಕರೆ ಮಾಹಿತಿ ಆಧರಿಸಿ, ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ. ಇದರ ಜೊತೆಗೆ 5 ಅಗ್ನಿಶಾಮಕ ಸಿಲಿಂಡರ್​ಗಳನ್ನು ಜಪ್ತಿ ಮಾಡಲಾಗಿದೆ.

ನವದೆಹಲಿ: ಆಮ್ಲಜನಕ ಸಿಲಿಂಡರ್​ಗಳೆಂದು ನಂಬಿಸಿ, ಅಗ್ನಿಶಾಮಕ ಸಿಲಿಂಡರ್​​ಗಳನ್ನು ಮಹಿಳೆಯೊಬ್ಬಳಿಗೆ ಮಾರಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಮಹಿಳೆಯಾದ ಗೀತಾ ಅರೋರಾ ಎಂಬಾಕೆಯ ಸಂಬಂಧಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆ ಆಮ್ಲಜನಕ ಸಿಲಿಂಡರ್​​ಗಾಗಿ ಹುಡುಕಾಡುತ್ತಿದ್ದ ವೇಳೆ ಆರೋಪಿಗಳಿಬ್ಬರು ಅಗ್ನಿಶಾಮಕ ಸಿಲಿಂಡರ್​ಗಳನ್ನೇ ಆಮ್ಲಜನಕ ಸಿಲಿಂಡರ್​ಗಳೆಂದು ಮಾರಿದ್ದರು.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಕೆಲವು ಸಮಯದ ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಉತ್ತಮ್ ನಗರ್ ಪೊಲೀಸ್ ಮತ್ತು ಡಿಪಾರ್ಟ್​ಮೆಂಟ್ ಆಫ್ ವರ್ಕ್​ಫೋರ್ಸ್​ ಡೆವೆಲಪ್​​ಮೆಂಟ್​ನ ವಿಶೇಷ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಕರೆ ಮಾಹಿತಿ ಆಧರಿಸಿ, ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ. ಇದರ ಜೊತೆಗೆ 5 ಅಗ್ನಿಶಾಮಕ ಸಿಲಿಂಡರ್​ಗಳನ್ನು ಜಪ್ತಿ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.