ETV Bharat / bharat

ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ

ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಅಗ್ನಿಶಾಮಕ ಸಿಲಿಂಡರ್ ಮಾರಿ ವಂಚಿಸಲೆತ್ನಿಸಿ, ಸಿಕ್ಕಿಬಿದ್ದಿದ್ದಾರೆ.

author img

By

Published : Apr 29, 2021, 8:39 PM IST

Delhi Police arrests two for selling fire extinguisher instead of oxygen cylinder
ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ

ನವದೆಹಲಿ: ಆಮ್ಲಜನಕ ಸಿಲಿಂಡರ್​ಗಳೆಂದು ನಂಬಿಸಿ, ಅಗ್ನಿಶಾಮಕ ಸಿಲಿಂಡರ್​​ಗಳನ್ನು ಮಹಿಳೆಯೊಬ್ಬಳಿಗೆ ಮಾರಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಮಹಿಳೆಯಾದ ಗೀತಾ ಅರೋರಾ ಎಂಬಾಕೆಯ ಸಂಬಂಧಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆ ಆಮ್ಲಜನಕ ಸಿಲಿಂಡರ್​​ಗಾಗಿ ಹುಡುಕಾಡುತ್ತಿದ್ದ ವೇಳೆ ಆರೋಪಿಗಳಿಬ್ಬರು ಅಗ್ನಿಶಾಮಕ ಸಿಲಿಂಡರ್​ಗಳನ್ನೇ ಆಮ್ಲಜನಕ ಸಿಲಿಂಡರ್​ಗಳೆಂದು ಮಾರಿದ್ದರು.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಕೆಲವು ಸಮಯದ ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಉತ್ತಮ್ ನಗರ್ ಪೊಲೀಸ್ ಮತ್ತು ಡಿಪಾರ್ಟ್​ಮೆಂಟ್ ಆಫ್ ವರ್ಕ್​ಫೋರ್ಸ್​ ಡೆವೆಲಪ್​​ಮೆಂಟ್​ನ ವಿಶೇಷ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಕರೆ ಮಾಹಿತಿ ಆಧರಿಸಿ, ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ. ಇದರ ಜೊತೆಗೆ 5 ಅಗ್ನಿಶಾಮಕ ಸಿಲಿಂಡರ್​ಗಳನ್ನು ಜಪ್ತಿ ಮಾಡಲಾಗಿದೆ.

ನವದೆಹಲಿ: ಆಮ್ಲಜನಕ ಸಿಲಿಂಡರ್​ಗಳೆಂದು ನಂಬಿಸಿ, ಅಗ್ನಿಶಾಮಕ ಸಿಲಿಂಡರ್​​ಗಳನ್ನು ಮಹಿಳೆಯೊಬ್ಬಳಿಗೆ ಮಾರಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಮಹಿಳೆಯಾದ ಗೀತಾ ಅರೋರಾ ಎಂಬಾಕೆಯ ಸಂಬಂಧಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆ ಆಮ್ಲಜನಕ ಸಿಲಿಂಡರ್​​ಗಾಗಿ ಹುಡುಕಾಡುತ್ತಿದ್ದ ವೇಳೆ ಆರೋಪಿಗಳಿಬ್ಬರು ಅಗ್ನಿಶಾಮಕ ಸಿಲಿಂಡರ್​ಗಳನ್ನೇ ಆಮ್ಲಜನಕ ಸಿಲಿಂಡರ್​ಗಳೆಂದು ಮಾರಿದ್ದರು.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಕೆಲವು ಸಮಯದ ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಉತ್ತಮ್ ನಗರ್ ಪೊಲೀಸ್ ಮತ್ತು ಡಿಪಾರ್ಟ್​ಮೆಂಟ್ ಆಫ್ ವರ್ಕ್​ಫೋರ್ಸ್​ ಡೆವೆಲಪ್​​ಮೆಂಟ್​ನ ವಿಶೇಷ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಕರೆ ಮಾಹಿತಿ ಆಧರಿಸಿ, ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ. ಇದರ ಜೊತೆಗೆ 5 ಅಗ್ನಿಶಾಮಕ ಸಿಲಿಂಡರ್​ಗಳನ್ನು ಜಪ್ತಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.