ನವದೆಹಲಿ: ಇಂದು ಡಿಜಿಟಲ್ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಟ್ಯಾಂಕರ್ ಇಲ್ಲದಿರುವುದರಿಂದ ಆಮ್ಲಜನಕವನ್ನು ಸ್ವೀಕರಿಸುವಲ್ಲಿ ನಮಗೆ ತೊಂದರೆ ಇದೆ ಎಂದು ಅವರು ಹೇಳಿದರು. ಈ ಕೊರತೆಯನ್ನು ನೀಗಿಸಲು ದೆಹಲಿ ಸರ್ಕಾರ ಬ್ಯಾಂಕಾಕ್ನಿಂದ 18 ಟ್ಯಾಂಕರ್ಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಕೇಜ್ರಿವಾಲ್ ತಿಳಿಸಿದರು.
ಇದಕ್ಕಾಗಿ ವಾಯುಪಡೆಯ ನೆರವು ನೀಡುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರದೊಂದಿಗೆ ಮಾತುಕತೆ ನಡೆಯುತ್ತಿದ್ದು, ಮಾತುಕತೆ ಯಶಸ್ವಿಯಾಗಲಿದೆ ಮತ್ತು ಶೀಘ್ರದಲ್ಲೇ 18 ಟ್ಯಾಂಕರ್ಗಳು ಬರಲಿವೆ. ಇದು ಆಮ್ಲಜನಕದ ಸಾಗಣೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಸಿಎಂ ಹೇಳಿದರು.