ನವದೆಹಲಿ: ಮೀಟೂ ಪ್ರಕರಣದಲ್ಲಿ ಸತತ ಎರಡು ವರ್ಷದಿಂದ ನಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಮತ್ತು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧದ ಮಾನನಷ್ಟ ಪ್ರಕರಣದ ತೀರ್ಪನ್ನು ಫೆ.17ಕ್ಕೆ ಕಾಯ್ದಿರಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ.
ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವಿಂದ್ರ ಕುಮಾರ್ ಈ ಪ್ರಕರಣದ ತೀರ್ಪನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಫೆ.1ರಂದು ಅಕ್ಬರ್ ಹಾಗೂ ರಮಣಿ ಹೇಳಿಕೆ ದಾಖಲಿಸಿದ್ದ ಕೋರ್ಟ್ ತೀರ್ಪಿನ ದಿನಾಂಕ ಪ್ರಕಟಿಸುವುದಾಗಿ ತಿಳಿಸಿತ್ತು.