ETV Bharat / bharat

ಭಾರತ-ಚೀನಾ ಗಡಿ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಪ್ರಶ್ನಿಸಿದ ಪಿ. ಚಿದಂಬರಂ

ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಚಿದಂಬರಂ, ಪೂರ್ವ ಲಡಾಖ್‌ನ ಬಿಸಿನೀರಿನ ಬುಗ್ಗೆಗಳ ಕುರಿತು ಚೀನಾ ಏನನ್ನಾದರೂ ಒಪ್ಪಿಕೊಂಡಿದೆಯೇ, ಬಫರ್ ವಲಯಗಳ ರಚನೆಯಿಂದಾಗಿ ಭಾರತೀಯ ಸೇನೆಯು ಗಸ್ತು ತಿರುಗುತ್ತಿದ್ದ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ನಿಲ್ಲಿಸಿದೆಯೇ ಎಂದು ಪ್ರಶ್ನಿಸಿದರು.

author img

By

Published : Dec 19, 2022, 7:53 PM IST

ಭಾರತ-ಚೀನಾ ಗಡಿ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಪ್ರಶ್ನಿಸಿದ ಪಿ. ಚಿದಂಬರಂ
Chidambaram asked the government about the state of India China border

ನವದೆಹಲಿ: ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಭೇಟಿಯ ಸಮಯದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆಯೇ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಚಿದಂಬರಂ, ಪೂರ್ವ ಲಡಾಖ್‌ನ ಬಿಸಿನೀರಿನ ಬುಗ್ಗೆಗಳ ಕುರಿತು ಚೀನಾ ಏನನ್ನಾದರೂ ಒಪ್ಪಿಕೊಂಡಿದೆಯೇ, ಬಫರ್ ವಲಯಗಳ ರಚನೆಯಿಂದಾಗಿ ಭಾರತೀಯ ಸೇನೆಯು ಗಸ್ತು ತಿರುಗುತ್ತಿದ್ದ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ನಿಲ್ಲಿಸಿದೆಯೇ ಮತ್ತು ಡೋಕ್ಲಾಮ್ ಜಂಕ್ಷನ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಘರ್ಷಣೆಯ ಅಂಶಗಳನ್ನು ಚರ್ಚಿಸಲು ಚೀನಾ ಒಪ್ಪಿಕೊಂಡಿದೆಯೇ ಎಂದು ಅವರು ಕೇಳಿದರು.

ದೇಶದ ಈಶಾನ್ಯ ಭಾಗದ ಆಯಕಟ್ಟಿನ ರಸ್ತೆಗಳಿಗೆ ರಕ್ಷಣಾ ಬಂಡವಾಳ ವೆಚ್ಚಕ್ಕಾಗಿ ಸರ್ಕಾರವು 500 ಕೋಟಿ ರೂಪಾಯಿ ಕೋರಿದ ಚರ್ಚೆಯ ಸಂದರ್ಭದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಈ ವಿಚಾರಗಳನ್ನು ಎತ್ತಿದ್ದು ಗಮನಾರ್ಹ.

ಇವು ಈಶಾನ್ಯದಲ್ಲಿ ಆಯಕಟ್ಟಿನ ಮತ್ತು ಗಡಿ ರಸ್ತೆಗಳಾಗಿವೆ. ಉತ್ತರ ಮತ್ತು ಪೂರ್ವ ಗಡಿಯಲ್ಲಿ ಯಾರಿಗೆ ಬೆದರಿಕೆ ಇದೆ ಎಂಬುದು ನಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಚಿದಂಬರಂ, ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ದಾದ್ಯಂತ ಚೀನಾ ಮೂಲಸೌಕರ್ಯ ನಿರ್ಮಾಣದ ವಿವರಗಳನ್ನು ತಿಳಿಯಲು ಪ್ರಯತ್ನಿಸಿದರು.

ಚೀನಾದವರು ರಸ್ತೆ, ಸೇತುವೆ, ವಸಾಹತು, ಹೆಲಿಪ್ಯಾಡ್‌ಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ನಿರ್ಮಿಸಿದ್ದಾರೆಂಬುದು ನಮಗೆ ತಿಳಿದಿದೆ. ಚೀನಾ ನಿರ್ಮಿಸುತ್ತಿರುವ ಬೃಹತ್ ಮೂಲಸೌಕರ್ಯ ಯಾವುದು.. ನೀವು ನಿರ್ಮಿಸುತ್ತಿರುವ ಹೊಂದಾಣಿಕೆಯ ಮೂಲಸೌಕರ್ಯ ಯಾವುದು ಎಂಬುದನ್ನು ನಾನು ನಿಮಗೆ ಹೇಳಲು ಬಯಸುವುದಿಲ್ಲ ಎಂದರು.

ಇದನ್ನೂ ಓದಿ: ಪರಸ್ಪರ ಕೈಕುಲುಕಿದ ಚೀನಾ ಅಧ್ಯಕ್ಷ, ಪ್ರಧಾನಿ ಮೋದಿ: ವಿಡಿಯೋ

ನವದೆಹಲಿ: ನವೆಂಬರ್‌ನಲ್ಲಿ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಭೇಟಿಯ ಸಮಯದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆಯೇ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಚಿದಂಬರಂ, ಪೂರ್ವ ಲಡಾಖ್‌ನ ಬಿಸಿನೀರಿನ ಬುಗ್ಗೆಗಳ ಕುರಿತು ಚೀನಾ ಏನನ್ನಾದರೂ ಒಪ್ಪಿಕೊಂಡಿದೆಯೇ, ಬಫರ್ ವಲಯಗಳ ರಚನೆಯಿಂದಾಗಿ ಭಾರತೀಯ ಸೇನೆಯು ಗಸ್ತು ತಿರುಗುತ್ತಿದ್ದ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ನಿಲ್ಲಿಸಿದೆಯೇ ಮತ್ತು ಡೋಕ್ಲಾಮ್ ಜಂಕ್ಷನ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಘರ್ಷಣೆಯ ಅಂಶಗಳನ್ನು ಚರ್ಚಿಸಲು ಚೀನಾ ಒಪ್ಪಿಕೊಂಡಿದೆಯೇ ಎಂದು ಅವರು ಕೇಳಿದರು.

ದೇಶದ ಈಶಾನ್ಯ ಭಾಗದ ಆಯಕಟ್ಟಿನ ರಸ್ತೆಗಳಿಗೆ ರಕ್ಷಣಾ ಬಂಡವಾಳ ವೆಚ್ಚಕ್ಕಾಗಿ ಸರ್ಕಾರವು 500 ಕೋಟಿ ರೂಪಾಯಿ ಕೋರಿದ ಚರ್ಚೆಯ ಸಂದರ್ಭದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಈ ವಿಚಾರಗಳನ್ನು ಎತ್ತಿದ್ದು ಗಮನಾರ್ಹ.

ಇವು ಈಶಾನ್ಯದಲ್ಲಿ ಆಯಕಟ್ಟಿನ ಮತ್ತು ಗಡಿ ರಸ್ತೆಗಳಾಗಿವೆ. ಉತ್ತರ ಮತ್ತು ಪೂರ್ವ ಗಡಿಯಲ್ಲಿ ಯಾರಿಗೆ ಬೆದರಿಕೆ ಇದೆ ಎಂಬುದು ನಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಚಿದಂಬರಂ, ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ದಾದ್ಯಂತ ಚೀನಾ ಮೂಲಸೌಕರ್ಯ ನಿರ್ಮಾಣದ ವಿವರಗಳನ್ನು ತಿಳಿಯಲು ಪ್ರಯತ್ನಿಸಿದರು.

ಚೀನಾದವರು ರಸ್ತೆ, ಸೇತುವೆ, ವಸಾಹತು, ಹೆಲಿಪ್ಯಾಡ್‌ಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ನಿರ್ಮಿಸಿದ್ದಾರೆಂಬುದು ನಮಗೆ ತಿಳಿದಿದೆ. ಚೀನಾ ನಿರ್ಮಿಸುತ್ತಿರುವ ಬೃಹತ್ ಮೂಲಸೌಕರ್ಯ ಯಾವುದು.. ನೀವು ನಿರ್ಮಿಸುತ್ತಿರುವ ಹೊಂದಾಣಿಕೆಯ ಮೂಲಸೌಕರ್ಯ ಯಾವುದು ಎಂಬುದನ್ನು ನಾನು ನಿಮಗೆ ಹೇಳಲು ಬಯಸುವುದಿಲ್ಲ ಎಂದರು.

ಇದನ್ನೂ ಓದಿ: ಪರಸ್ಪರ ಕೈಕುಲುಕಿದ ಚೀನಾ ಅಧ್ಯಕ್ಷ, ಪ್ರಧಾನಿ ಮೋದಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.