ETV Bharat / bharat

ಐಟಿಐ ಓದಿ, ಐಪಿಎಸ್​ ಅಧಿಕಾರಿ ಎಂದು 50 ಜನರಿಗೆ ಪಂಗನಾಮ! - ಈಟಿವಿ ಭಾರತ್​ ಕನ್ನಡ

ಆರೋಪಿ ಗೌತಮ್​ ಐಐಟಿ ಖಾನ್ಪುರ್​ನಿಂದ ಪಾಸ್​ ಆಗಿರುವುದಾಗಿ ನಂಬಿಸಿದ್ದಾರೆ. ಅಲ್ಲದೇ, ತಾವು 2021ನೇ ಯುಪಿ ಕೇಡರ್​ ಐಪಿಎಸ್​ ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ.

ಐಟಿಐ ಓದಿ ಐಪಿಎಸ್​ ಅಧಿಕಾರಿಯಂದು ಮಹಿಳೆಗೆ ವಂಚನೆ; ಆರೋಪಿ ಬಂಧನ
cheating-on-a-woman-as-an-ips-officer-accused-arrested
author img

By

Published : Dec 19, 2022, 5:02 PM IST

ನವದೆಹಲಿ: ಟೀ ಮಾರಾಟಗಾರನೊಬ್ಬ ತಾನು ಐಪಿಎಸ್​ ಅಧಿಕಾರಿ ಮತ್ತು ಐಐಟಿ ಪದವೀಧರ ಎಂದು ಸುಮಾರು 50 ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಗ್ವಾಲಿಯರ್​ ನಿವಾಸಿ ವಿಕಾಸ್​ ಗೌತಮ್​ ಬಂಧಿತ ಆರೋಪಿ.

ಈ ಸಂಬಂಧ ಮಹಿಳೆ ಕಳೆದೆರಡು ದಿನದ ಹಿಂದೆ ಅಂದರೆ ಡಿ. 17ರಂದು ದೂರು ದಾಖಲಿಸಿದ್ದರು. ಆ ಬಳಿಕ ಸೈಬರ್​ ಪೊಲೀಸ್​ ಠಾಣೆಯ ಎಸಿಪಿ ಅರಣ್​ ಕುಮಾರ್​ ಚೌದರಿ, ಎಸ್​ಎಚ್​ಒ ಸಂದೀಪ್​ ಪನ್ವಾರ್​ ಮತ್ತು ಇನ್ಸ್​ಪೆಕ್ಟರ್​ ಮುಖೇಶ್​ ಕುಮಾರ್​ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸಿದೆ.

ಪ್ರಕರಣ ಕುರಿತು ಮಾತನಾಡಿರುವ ಡಿಸಿಪಿ ಸಿಂಗ್​, ಆರೋಪಿ ಗೌತಮ್​ ತಾನು ಐಐಟಿ ಖಾನ್ಪುರ್​ನಿಂದ ಪಾಸ್​ ಆಗಿರುವುದಾಗಿ ನಂಬಿಸಿದ್ದಾರೆ. ಅಲ್ಲದೇ, ತಾವು 2021ನೇ ಯುಪಿ ಕೇಡರ್​ ಐಪಿಎಸ್​ ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈತನ ಆನ್​ಲೈನ್​ ಪ್ರೊಫೈಲ್​​ನಲ್ಲಿ ಐಪಿಎಸ್​ ವಿಕಾಸ್​ ಯಾದವ್​ ಎಂದು ಕೂಡ ಬಿಂಬಿಸಿಕೊಂಡಿದ್ದಾರೆ. ಪೊಲೀಸ್​ ತನಿಖೆ ವೇಳೆ ಗೌತಮ್​ ಗ್ವಾಲಿಯರ್​ನಲ್ಲಿ ಐಟಿಐ ಕೋರ್ಸ್​ ಮಾಡಿದ್ದ ಎಂದು ಗೊತ್ತಾಗಿದೆ.

ಆತ ದೆಹಲಿಗೆ ಬಂದು ಮುಖರ್ಜಿ ನಗರದಲ್ಲಿ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ರೆಸ್ಟೋರೆಂಟ್​ಗೆ ಬಂದ ಸಿವಿಲ್​ ಸರ್ವೀಸ್​ಗೆ ತಯಾರಾಗುತ್ತಿದ್ದ ಅಭ್ಯರ್ಥಿಗಳನ್ನು ಗಮನಿಸಿ, ಮೋಸ ಮಾಡಲು ಯೋಜನೆ ರೂಪಿಸಿದ್ದ. ಹೀಗೆ ಸುಮಾರು 50 ಜನರಿಗೆ 14 ಲಕ್ಷ ರೂ ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ

ನವದೆಹಲಿ: ಟೀ ಮಾರಾಟಗಾರನೊಬ್ಬ ತಾನು ಐಪಿಎಸ್​ ಅಧಿಕಾರಿ ಮತ್ತು ಐಐಟಿ ಪದವೀಧರ ಎಂದು ಸುಮಾರು 50 ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಗ್ವಾಲಿಯರ್​ ನಿವಾಸಿ ವಿಕಾಸ್​ ಗೌತಮ್​ ಬಂಧಿತ ಆರೋಪಿ.

ಈ ಸಂಬಂಧ ಮಹಿಳೆ ಕಳೆದೆರಡು ದಿನದ ಹಿಂದೆ ಅಂದರೆ ಡಿ. 17ರಂದು ದೂರು ದಾಖಲಿಸಿದ್ದರು. ಆ ಬಳಿಕ ಸೈಬರ್​ ಪೊಲೀಸ್​ ಠಾಣೆಯ ಎಸಿಪಿ ಅರಣ್​ ಕುಮಾರ್​ ಚೌದರಿ, ಎಸ್​ಎಚ್​ಒ ಸಂದೀಪ್​ ಪನ್ವಾರ್​ ಮತ್ತು ಇನ್ಸ್​ಪೆಕ್ಟರ್​ ಮುಖೇಶ್​ ಕುಮಾರ್​ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸಿದೆ.

ಪ್ರಕರಣ ಕುರಿತು ಮಾತನಾಡಿರುವ ಡಿಸಿಪಿ ಸಿಂಗ್​, ಆರೋಪಿ ಗೌತಮ್​ ತಾನು ಐಐಟಿ ಖಾನ್ಪುರ್​ನಿಂದ ಪಾಸ್​ ಆಗಿರುವುದಾಗಿ ನಂಬಿಸಿದ್ದಾರೆ. ಅಲ್ಲದೇ, ತಾವು 2021ನೇ ಯುಪಿ ಕೇಡರ್​ ಐಪಿಎಸ್​ ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈತನ ಆನ್​ಲೈನ್​ ಪ್ರೊಫೈಲ್​​ನಲ್ಲಿ ಐಪಿಎಸ್​ ವಿಕಾಸ್​ ಯಾದವ್​ ಎಂದು ಕೂಡ ಬಿಂಬಿಸಿಕೊಂಡಿದ್ದಾರೆ. ಪೊಲೀಸ್​ ತನಿಖೆ ವೇಳೆ ಗೌತಮ್​ ಗ್ವಾಲಿಯರ್​ನಲ್ಲಿ ಐಟಿಐ ಕೋರ್ಸ್​ ಮಾಡಿದ್ದ ಎಂದು ಗೊತ್ತಾಗಿದೆ.

ಆತ ದೆಹಲಿಗೆ ಬಂದು ಮುಖರ್ಜಿ ನಗರದಲ್ಲಿ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ರೆಸ್ಟೋರೆಂಟ್​ಗೆ ಬಂದ ಸಿವಿಲ್​ ಸರ್ವೀಸ್​ಗೆ ತಯಾರಾಗುತ್ತಿದ್ದ ಅಭ್ಯರ್ಥಿಗಳನ್ನು ಗಮನಿಸಿ, ಮೋಸ ಮಾಡಲು ಯೋಜನೆ ರೂಪಿಸಿದ್ದ. ಹೀಗೆ ಸುಮಾರು 50 ಜನರಿಗೆ 14 ಲಕ್ಷ ರೂ ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.