ETV Bharat / bharat

ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ಕರ್ನಾಟಕ ಸೇರಿ 4 ರಾಜ್ಯಗಳಿಗೆ ಕೇಂದ್ರದ ಸೂಚನೆ

author img

By

Published : May 18, 2022, 9:46 PM IST

ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳು ಆರ್‌ಸಿಆರ್ ಮೋಡ್‌ನ ಅಡಿಯಲ್ಲಿ ನೀಡಲಾಗುವ ಸಂಪೂರ್ಣ ಕಲ್ಲಿದ್ದಲು ಸ್ಟಾಕ್‌ಗಳನ್ನು ನಿರ್ಮಿಸುವುದನ್ನು ತ್ವರಿತವಾಗಿ ತೆಗೆದುಹಾಕಬಹುದು ಎಂದು ಕೇಂದ್ರ ವಿದ್ಯುತ್ ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ಮಳೆಗಾಲದಲ್ಲಿ ವಿದ್ಯುತ್​ ಬೇಡಿಕೆ ಹೆಚ್ಚಾಗುವುದರಿಂದ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳುವಂತೆ ನಾಲ್ಕು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕಲ್ಲಿದ್ದಲು
ಕಲ್ಲಿದ್ದಲು

ನವದೆಹಲಿ: ಮುಂಬರುವ ಮುಂಗಾರು ಹಂಗಾಮಿನಲ್ಲಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದಕ್ಕೆ ತಕ್ಕಂತೆ ಕಲ್ಲಿದ್ದಲು ಪೂರೈಸಬೇಕಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಸಂಬಂಧ ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದೆ.

ಕಲ್ಲಿದ್ದಲು ಆಧಾರಿತ ಉತ್ಪಾದನೆ ಹೆಚ್ಚಾಗಿದೆ ಮತ್ತು ವಿದ್ಯುತ್ ಸ್ಥಾವರಗಳ ಒಟ್ಟು ಕಲ್ಲಿದ್ದಲು ಬಳಕೆ ಕೂಡ ಹೆಚ್ಚಾಗಿದೆ. ಮಳೆಗಾಲದಲ್ಲಿ ಅಗತ್ಯ ಕಲ್ಲಿದ್ದಲನ್ನು ಪೂರೈಸಬೇಕಾಗಿದೆ. ಹಾಗಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಉತ್ಪಾದನಾ ಕಂಪನಿಗಳಿಗೆ ಹೇಳಬಹುದು ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಕಲ್ಲಿದ್ದಲು ಆಮದಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ ಅಥವಾ ಪೂರ್ಣಗೊಳ್ಳದಿರುವುದಕ್ಕೆ ವಿದ್ಯುತ್ ಸಚಿವರು ಕಳವಳ ವ್ಯಕ್ತಪಡಿಸಿದರು.

ಅಧಿಕಾರಿಗಳ ಪ್ರಕಾರ, 2018-19ರಲ್ಲಿ ಒಟ್ಟು 21.4 ಮಿಲಿಯನ್ ಟನ್ ಕಲ್ಲಿದ್ದಲನ್ನು ಮಿಶ್ರಣಕ್ಕಾಗಿ ಆಮದು ಮಾಡಿಕೊಳ್ಳಲಾಗಿದೆ. 2019-20 ರಲ್ಲಿ, ಮಿಶ್ರಣಕ್ಕಾಗಿ ಒಟ್ಟು ಆಮದು 23.8 ಮಿಲಿಯನ್ ಟನ್‌ಗಳಾಗಿದ್ದರೆ, 2021-22 ರಲ್ಲಿ ಇದು ಕೇವಲ 8.3 ಮಿಲಿಯನ್ ಟನ್‌ಗಳಷ್ಟಿತ್ತು. ಇದು ಕಲ್ಲಿದ್ದಲಿನ ಲಭ್ಯತೆಯ ಒತ್ತಡಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಮಿಶ್ರಣ ಉದ್ದೇಶಗಳಿಗಾಗಿ ಕಲ್ಲಿದ್ದಲನ್ನು ಅಗತ್ಯದ ಶೇ. 10 ರಷ್ಟು ಆಮದು ಮಾಡಿಕೊಳ್ಳುವಂತೆ ವಿದ್ಯುತ್ ಸಚಿವಾಲಯವು ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಈ ಹಿಂದೆ ಸಲಹೆ ನೀಡಿತ್ತು. ಮೇ 31 ರೊಳಗೆ ಆರ್ಡರ್‌ಗಳನ್ನು ನೀಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಯಿತು. ಇದರಿಂದಾಗಿ ಜೂನ್ 30 ರೊಳಗೆ ಶೇ. 50 ರಷ್ಟು ಪ್ರಮಾಣವನ್ನು ತಲುಪಿಸಲಾಗುವುದು. ಶೇಕಡಾ 40 ರಷ್ಟನ್ನು ಆಗಸ್ಟ್ 31 ಮತ್ತು ಉಳಿದ ಶೇಕಡಾ 10 ಅಕ್ಟೋಬರ್ 31 ರೊಳಗೆ ತಲುಪಲಿದೆ.

ಇದನ್ನೂಓದಿ: ಭಾರತದಲ್ಲಿ ಮಾಲಿನ್ಯದಿಂದ 23 ಲಕ್ಷ ಮಂದಿ ಸಾವು.. ವಿಶ್ವದಲ್ಲಿಯೇ ಅತ್ಯಧಿಕ: ಅಧ್ಯಯನ

ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳು ಆರ್‌ಸಿಆರ್ ಮೋಡ್‌ನ ಅಡಿಯಲ್ಲಿ ನೀಡಲಾಗುವ ಸಂಪೂರ್ಣ ಕಲ್ಲಿದ್ದಲು ಸ್ಟಾಕ್‌ಗಳನ್ನು ನಿರ್ಮಿಸುವುದನ್ನು ತ್ವರಿತವಾಗಿ ತೆಗೆದುಹಾಕಬಹುದು ಎಂದು ಕೇಂದ್ರ ವಿದ್ಯುತ್ ಸಚಿವರು ಸಿಎಂಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಒಂದೇ ವೇಳೆ ಇದರಲ್ಲಿ ವಿಫಲವಾದಲ್ಲಿ, ಕೊರತೆಯನ್ನು ತುಂಬಲು ಹೆಚ್ಚುವರಿ ದೇಶಿಯ ಕಲ್ಲಿದ್ದಲು ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಸದ್ಯದ ಸ್ಥಿತಿ ಮುಂದುವರಿದರೆ ಮಳೆಗಾಲದಲ್ಲಿ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿ ಅಲ್ಲಿನ ವಿದ್ಯುತ್ ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸಚಿವರು ರಾಜ್ಯಗಳಿಗೆ ಎಚ್ಚರಿಕೆ ನೀಡಿದರು. ಅಂತಹ ಪರಿಸ್ಥಿತಿಯಲ್ಲಿ, ಆರ್‌ಸಿಆರ್ ಹಂಚಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅದನ್ನು ಇತರ ಅಗತ್ಯವಿರುವ ರಾಜ್ಯ ಉತ್ಪಾದನಾ ಕಂಪನಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಪತ್ರದ ಮೂಲಕ ಸಚಿವರು ವಿವರಿಸಿದ್ದಾರೆ.

ನವದೆಹಲಿ: ಮುಂಬರುವ ಮುಂಗಾರು ಹಂಗಾಮಿನಲ್ಲಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದಕ್ಕೆ ತಕ್ಕಂತೆ ಕಲ್ಲಿದ್ದಲು ಪೂರೈಸಬೇಕಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಸಂಬಂಧ ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದೆ.

ಕಲ್ಲಿದ್ದಲು ಆಧಾರಿತ ಉತ್ಪಾದನೆ ಹೆಚ್ಚಾಗಿದೆ ಮತ್ತು ವಿದ್ಯುತ್ ಸ್ಥಾವರಗಳ ಒಟ್ಟು ಕಲ್ಲಿದ್ದಲು ಬಳಕೆ ಕೂಡ ಹೆಚ್ಚಾಗಿದೆ. ಮಳೆಗಾಲದಲ್ಲಿ ಅಗತ್ಯ ಕಲ್ಲಿದ್ದಲನ್ನು ಪೂರೈಸಬೇಕಾಗಿದೆ. ಹಾಗಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಉತ್ಪಾದನಾ ಕಂಪನಿಗಳಿಗೆ ಹೇಳಬಹುದು ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಕಲ್ಲಿದ್ದಲು ಆಮದಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ ಅಥವಾ ಪೂರ್ಣಗೊಳ್ಳದಿರುವುದಕ್ಕೆ ವಿದ್ಯುತ್ ಸಚಿವರು ಕಳವಳ ವ್ಯಕ್ತಪಡಿಸಿದರು.

ಅಧಿಕಾರಿಗಳ ಪ್ರಕಾರ, 2018-19ರಲ್ಲಿ ಒಟ್ಟು 21.4 ಮಿಲಿಯನ್ ಟನ್ ಕಲ್ಲಿದ್ದಲನ್ನು ಮಿಶ್ರಣಕ್ಕಾಗಿ ಆಮದು ಮಾಡಿಕೊಳ್ಳಲಾಗಿದೆ. 2019-20 ರಲ್ಲಿ, ಮಿಶ್ರಣಕ್ಕಾಗಿ ಒಟ್ಟು ಆಮದು 23.8 ಮಿಲಿಯನ್ ಟನ್‌ಗಳಾಗಿದ್ದರೆ, 2021-22 ರಲ್ಲಿ ಇದು ಕೇವಲ 8.3 ಮಿಲಿಯನ್ ಟನ್‌ಗಳಷ್ಟಿತ್ತು. ಇದು ಕಲ್ಲಿದ್ದಲಿನ ಲಭ್ಯತೆಯ ಒತ್ತಡಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಮಿಶ್ರಣ ಉದ್ದೇಶಗಳಿಗಾಗಿ ಕಲ್ಲಿದ್ದಲನ್ನು ಅಗತ್ಯದ ಶೇ. 10 ರಷ್ಟು ಆಮದು ಮಾಡಿಕೊಳ್ಳುವಂತೆ ವಿದ್ಯುತ್ ಸಚಿವಾಲಯವು ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಈ ಹಿಂದೆ ಸಲಹೆ ನೀಡಿತ್ತು. ಮೇ 31 ರೊಳಗೆ ಆರ್ಡರ್‌ಗಳನ್ನು ನೀಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಯಿತು. ಇದರಿಂದಾಗಿ ಜೂನ್ 30 ರೊಳಗೆ ಶೇ. 50 ರಷ್ಟು ಪ್ರಮಾಣವನ್ನು ತಲುಪಿಸಲಾಗುವುದು. ಶೇಕಡಾ 40 ರಷ್ಟನ್ನು ಆಗಸ್ಟ್ 31 ಮತ್ತು ಉಳಿದ ಶೇಕಡಾ 10 ಅಕ್ಟೋಬರ್ 31 ರೊಳಗೆ ತಲುಪಲಿದೆ.

ಇದನ್ನೂಓದಿ: ಭಾರತದಲ್ಲಿ ಮಾಲಿನ್ಯದಿಂದ 23 ಲಕ್ಷ ಮಂದಿ ಸಾವು.. ವಿಶ್ವದಲ್ಲಿಯೇ ಅತ್ಯಧಿಕ: ಅಧ್ಯಯನ

ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳು ಆರ್‌ಸಿಆರ್ ಮೋಡ್‌ನ ಅಡಿಯಲ್ಲಿ ನೀಡಲಾಗುವ ಸಂಪೂರ್ಣ ಕಲ್ಲಿದ್ದಲು ಸ್ಟಾಕ್‌ಗಳನ್ನು ನಿರ್ಮಿಸುವುದನ್ನು ತ್ವರಿತವಾಗಿ ತೆಗೆದುಹಾಕಬಹುದು ಎಂದು ಕೇಂದ್ರ ವಿದ್ಯುತ್ ಸಚಿವರು ಸಿಎಂಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಒಂದೇ ವೇಳೆ ಇದರಲ್ಲಿ ವಿಫಲವಾದಲ್ಲಿ, ಕೊರತೆಯನ್ನು ತುಂಬಲು ಹೆಚ್ಚುವರಿ ದೇಶಿಯ ಕಲ್ಲಿದ್ದಲು ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಸದ್ಯದ ಸ್ಥಿತಿ ಮುಂದುವರಿದರೆ ಮಳೆಗಾಲದಲ್ಲಿ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿ ಅಲ್ಲಿನ ವಿದ್ಯುತ್ ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸಚಿವರು ರಾಜ್ಯಗಳಿಗೆ ಎಚ್ಚರಿಕೆ ನೀಡಿದರು. ಅಂತಹ ಪರಿಸ್ಥಿತಿಯಲ್ಲಿ, ಆರ್‌ಸಿಆರ್ ಹಂಚಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅದನ್ನು ಇತರ ಅಗತ್ಯವಿರುವ ರಾಜ್ಯ ಉತ್ಪಾದನಾ ಕಂಪನಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಪತ್ರದ ಮೂಲಕ ಸಚಿವರು ವಿವರಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.