ETV Bharat / bharat

ಐಐಟಿ ಖರಗ್‌ಪುರ ವಿದ್ಯಾರ್ಥಿಯ ಸಾವು ಪ್ರಕರಣ: ಎರಡನೇ ಬಾರಿ ಶವಪರೀಕ್ಷೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ

ಐಐಟಿ ಖರಗ್‌ಪುರ ವಿದ್ಯಾರ್ಥಿಯ ಸಾವಿನ ಪ್ರಕರಣ- ಎರಡನೇ ಬಾರಿ ಶವಪರೀಕ್ಷೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ- ಜೂನ್ 30ಕ್ಕೆ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಮುಂದೂಡಿಕೆ.

author img

By

Published : Apr 25, 2023, 3:57 PM IST

Updated : Apr 25, 2023, 4:40 PM IST

Calcutta High Court
ಕೋಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐಐಟಿ ಖರಗ್‌ಪುರ ವಿದ್ಯಾರ್ಥಿಯ ನಿಗೂಢ ಸಾವಿನಲ್ಲಿ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ವಿದ್ಯಾರ್ಥಿ ಸಾವಿನ ಕುರಿತು ಹೈಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ನಿವೃತ್ತ ವೈದ್ಯ ಅಜಯ್ ಗುಪ್ತಾ ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ವಿದ್ಯಾರ್ಥಿಯ ತಲೆಯ ಹಿಂಭಾಗಕ್ಕೆ ಭಾರವಾದ ಪೆಟ್ಟು ಬಿದ್ದಿದೆ. ಆದರೆ, ಪೊಲೀಸರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆದಿರಬಹುದು. ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರು ಫೈಜಾನ್ ಅಹ್ಮದ್ ಅವರ ದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗಾಗಿ ನಡೆಸಲು ಆದೇಶಿಸಿದರು.

ಜೂನ್ 30ಕ್ಕೆ ಹೆಚ್ಚಿನ ವಿಚಾರಣೆಗೆ ಮುಂದೂಡಿಕೆ: ತನಿಖಾಧಿಕಾರಿ ಮೃತದೇಹವನ್ನು ಹೊಸದಾಗಿ ಮರಣೋತ್ತರ ಪರೀಕ್ಷೆಗಾಗಿ ಕೋಲ್ಕತ್ತಾಗೆ ತರಲಿದ್ದಾರೆ. ವೇಳೆ ಡಾ. ಗುಪ್ತಾ ಮತ್ತು ಹಿಂದಿನ ಪರೀಕ್ಷಕರು ಹಾಜರಿರುತ್ತಾರೆ. ಕಾಲೇಜ್ ಸ್ಟ್ರೀಟ್‌ನಲ್ಲಿರುವ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ವ್ಯವಸ್ಥೆ ಮಾಡುವುದು ರಾಜ್ಯದ ಜವಾಬ್ದಾರಿ. ಇದನ್ನು ಒಂದು ತಿಂಗಳೊಳಗೆ ಮಾಡಬೇಕು. ಪ್ರಕರಣವನ್ನು ಜೂನ್ 30ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಲಾಗಿದೆ.

ವಕೀಲ ಸಂದೀಪ್ ಭಟ್ಟಾಚಾರ್ಯ ಹೇಳಿದ್ದೇನು?: ಡಾ.ಅಜಯ್ ಗುಪ್ತಾ ಅವರ ಪರ ವಕೀಲ ಸಂದೀಪ್ ಭಟ್ಟಾಚಾರ್ಯ ಮಾತನಾಡಿ, "2022ರ ನವೆಂಬರ್ 21ರಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವರದಿಯ ಪ್ರಕಾರ, ಕೆಲವು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ "ಎಂಪ್ಲುರಾರ್" ಎಂಬ ಔಷಧವೂ ಪತ್ತೆಯಾಗಿದೆ. ಈ ಔಷಧಿಯನ್ನು ಮಾಂಸವನ್ನು ಕೊಳೆಯದಂತೆ ತಡೆಯಲು ಬಳಸಲಾಗುತ್ತದೆ. ಮತ್ತು ವಿಷವಾಗಿ ಬಳಸಲಾಗುತ್ತದೆ. ಡಾ.ಗುಪ್ತಾ ಅವರಿಗೆ ಮತ್ತೊಮ್ಮೆ ಶವಪರೀಕ್ಷೆ ನಡೆಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಹಿಂದಿನ ಮರಣೋತ್ತರ ಪರೀಕ್ಷೆಯ ವರದಿಯು ಸಾವು ಹೇಗೆ ಸಂಭವಿಸಬಹುದೆಂಬುದನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದು ಸಂಭವಿಸಬಾರದು. ಹೆಮಟೋಮಾ ಬರಿಗಣ್ಣಿಗೆ ಗೋಚರಿಸುತ್ತದೆ. ಆದರೆ, ಮರಣೋತ್ತರ ಪರೀಕ್ಷೆಯ ವೈದ್ಯರ ವರದಿಯು ಅದನ್ನು ಉಲ್ಲೇಖಿಸಿಲ್ಲ.

ದೋಷಪೂರಿತ ಮರಣೋತ್ತರ ಪರೀಕ್ಷೆ: ದೋಷಪೂರಿತ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಇದರಿಂದ ನ್ಯಾಯಾಧೀಶರು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆಯಲು ಆದೇಶಿಸಿದರು. ಇದಕ್ಕೂ ಮೊದಲು ಫೆಬ್ರವರಿ 20ರಂದು, ಐಐಟಿ ಖರಗ್‌ಪುರದ ವಿದ್ಯಾರ್ಥಿ ಫೈಜಾನ್ ಅಹ್ಮದ್ ಸಾವಿನ ಶವಪರೀಕ್ಷೆ ವರದಿಯ ಕುರಿತು ಹೊಸ ಅಭಿಪ್ರಾಯವನ್ನು ಪಡೆಯಲು ನಿವೃತ್ತ ವಿಧಿವಿಜ್ಞಾನ ತಜ್ಞ ಎ.ಕೆ. ಗುಪ್ತಾ ಅವರನ್ನು ನ್ಯಾಯಮೂರ್ತಿ ನೇಮಿಸಿದರು. ಖಿನ್ನತೆಯಿಂದ ಫೈಜಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ. ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ನ್ಯಾಯಾಧೀಶರು, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಎರಡನೇ ಅಭಿಪ್ರಾಯ ನೀಡುವಂತೆ ವೈದ್ಯ ಎ.ಕೆ.ಗುಪ್ತಾ ಅವರಿಗೆ ಆದೇಶಿಸಿದರು. ಆ ಅಭಿಪ್ರಾಯಕ್ಕೆ ಸಂಬಂಧಿಸಿದ ವರದಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಏಳು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಆರೋಪ: ಕಳೆದ ವರ್ಷ ಅಕ್ಟೋಬರ್ 14ರಂದು ಐಐಟಿ ಖರಗ್‌ಪುರದ ಲಾಲಾ ಲಜಪತ್ ರಾಯ್ ಹಾಲ್‌ನಲ್ಲಿರುವ ಕೊಠಡಿಯಿಂದ ಫೈಜಾನ್ ಅಹ್ಮದ್ ಅವರ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಖರಗ್‌ಪುರ ಐಐಟಿಯ ಸತ್ಯಶೋಧನಾ ಸಮಿತಿಯು ಈ ಸಾವಿನಲ್ಲಿ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ. ಈ ಘಟನೆ ಹಿನ್ನೆಲೆ ಏಳು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಆರೋಪ ಕೇಳಿಬಂದಿದೆ ಎಂದು ವಕೀಲ ಸಂದೀಪ್ ಭಟ್ಟಾಚಾರ್ಯ ಹೇಳಿದರು.

ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕರು, ಕೆಲವು ವಿದ್ಯಾರ್ಥಿಗಳು ಮತ್ತು ಪೊಲೀಸರ ಪಾತ್ರವಿದೆ ಎಂದು ರಾಜ್ಯವು ನ್ಯಾಯಾಲಯಕ್ಕೆ ತಿಳಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ರ‍್ಯಾಗಿಂಗ್ ಘಟನೆ ನಡೆದಿತ್ತು. ಅದನ್ನು ಅನುಸರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: "ಕುಸ್ತಿಪಟುಗಳ ಆರೋಪ ಗಂಭೀರ"; ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐಐಟಿ ಖರಗ್‌ಪುರ ವಿದ್ಯಾರ್ಥಿಯ ನಿಗೂಢ ಸಾವಿನಲ್ಲಿ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ವಿದ್ಯಾರ್ಥಿ ಸಾವಿನ ಕುರಿತು ಹೈಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ನಿವೃತ್ತ ವೈದ್ಯ ಅಜಯ್ ಗುಪ್ತಾ ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ವಿದ್ಯಾರ್ಥಿಯ ತಲೆಯ ಹಿಂಭಾಗಕ್ಕೆ ಭಾರವಾದ ಪೆಟ್ಟು ಬಿದ್ದಿದೆ. ಆದರೆ, ಪೊಲೀಸರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆದಿರಬಹುದು. ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರು ಫೈಜಾನ್ ಅಹ್ಮದ್ ಅವರ ದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗಾಗಿ ನಡೆಸಲು ಆದೇಶಿಸಿದರು.

ಜೂನ್ 30ಕ್ಕೆ ಹೆಚ್ಚಿನ ವಿಚಾರಣೆಗೆ ಮುಂದೂಡಿಕೆ: ತನಿಖಾಧಿಕಾರಿ ಮೃತದೇಹವನ್ನು ಹೊಸದಾಗಿ ಮರಣೋತ್ತರ ಪರೀಕ್ಷೆಗಾಗಿ ಕೋಲ್ಕತ್ತಾಗೆ ತರಲಿದ್ದಾರೆ. ವೇಳೆ ಡಾ. ಗುಪ್ತಾ ಮತ್ತು ಹಿಂದಿನ ಪರೀಕ್ಷಕರು ಹಾಜರಿರುತ್ತಾರೆ. ಕಾಲೇಜ್ ಸ್ಟ್ರೀಟ್‌ನಲ್ಲಿರುವ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ವ್ಯವಸ್ಥೆ ಮಾಡುವುದು ರಾಜ್ಯದ ಜವಾಬ್ದಾರಿ. ಇದನ್ನು ಒಂದು ತಿಂಗಳೊಳಗೆ ಮಾಡಬೇಕು. ಪ್ರಕರಣವನ್ನು ಜೂನ್ 30ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಲಾಗಿದೆ.

ವಕೀಲ ಸಂದೀಪ್ ಭಟ್ಟಾಚಾರ್ಯ ಹೇಳಿದ್ದೇನು?: ಡಾ.ಅಜಯ್ ಗುಪ್ತಾ ಅವರ ಪರ ವಕೀಲ ಸಂದೀಪ್ ಭಟ್ಟಾಚಾರ್ಯ ಮಾತನಾಡಿ, "2022ರ ನವೆಂಬರ್ 21ರಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವರದಿಯ ಪ್ರಕಾರ, ಕೆಲವು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ "ಎಂಪ್ಲುರಾರ್" ಎಂಬ ಔಷಧವೂ ಪತ್ತೆಯಾಗಿದೆ. ಈ ಔಷಧಿಯನ್ನು ಮಾಂಸವನ್ನು ಕೊಳೆಯದಂತೆ ತಡೆಯಲು ಬಳಸಲಾಗುತ್ತದೆ. ಮತ್ತು ವಿಷವಾಗಿ ಬಳಸಲಾಗುತ್ತದೆ. ಡಾ.ಗುಪ್ತಾ ಅವರಿಗೆ ಮತ್ತೊಮ್ಮೆ ಶವಪರೀಕ್ಷೆ ನಡೆಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಹಿಂದಿನ ಮರಣೋತ್ತರ ಪರೀಕ್ಷೆಯ ವರದಿಯು ಸಾವು ಹೇಗೆ ಸಂಭವಿಸಬಹುದೆಂಬುದನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದು ಸಂಭವಿಸಬಾರದು. ಹೆಮಟೋಮಾ ಬರಿಗಣ್ಣಿಗೆ ಗೋಚರಿಸುತ್ತದೆ. ಆದರೆ, ಮರಣೋತ್ತರ ಪರೀಕ್ಷೆಯ ವೈದ್ಯರ ವರದಿಯು ಅದನ್ನು ಉಲ್ಲೇಖಿಸಿಲ್ಲ.

ದೋಷಪೂರಿತ ಮರಣೋತ್ತರ ಪರೀಕ್ಷೆ: ದೋಷಪೂರಿತ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಇದರಿಂದ ನ್ಯಾಯಾಧೀಶರು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆಯಲು ಆದೇಶಿಸಿದರು. ಇದಕ್ಕೂ ಮೊದಲು ಫೆಬ್ರವರಿ 20ರಂದು, ಐಐಟಿ ಖರಗ್‌ಪುರದ ವಿದ್ಯಾರ್ಥಿ ಫೈಜಾನ್ ಅಹ್ಮದ್ ಸಾವಿನ ಶವಪರೀಕ್ಷೆ ವರದಿಯ ಕುರಿತು ಹೊಸ ಅಭಿಪ್ರಾಯವನ್ನು ಪಡೆಯಲು ನಿವೃತ್ತ ವಿಧಿವಿಜ್ಞಾನ ತಜ್ಞ ಎ.ಕೆ. ಗುಪ್ತಾ ಅವರನ್ನು ನ್ಯಾಯಮೂರ್ತಿ ನೇಮಿಸಿದರು. ಖಿನ್ನತೆಯಿಂದ ಫೈಜಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ. ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ನ್ಯಾಯಾಧೀಶರು, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಎರಡನೇ ಅಭಿಪ್ರಾಯ ನೀಡುವಂತೆ ವೈದ್ಯ ಎ.ಕೆ.ಗುಪ್ತಾ ಅವರಿಗೆ ಆದೇಶಿಸಿದರು. ಆ ಅಭಿಪ್ರಾಯಕ್ಕೆ ಸಂಬಂಧಿಸಿದ ವರದಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಏಳು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಆರೋಪ: ಕಳೆದ ವರ್ಷ ಅಕ್ಟೋಬರ್ 14ರಂದು ಐಐಟಿ ಖರಗ್‌ಪುರದ ಲಾಲಾ ಲಜಪತ್ ರಾಯ್ ಹಾಲ್‌ನಲ್ಲಿರುವ ಕೊಠಡಿಯಿಂದ ಫೈಜಾನ್ ಅಹ್ಮದ್ ಅವರ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಖರಗ್‌ಪುರ ಐಐಟಿಯ ಸತ್ಯಶೋಧನಾ ಸಮಿತಿಯು ಈ ಸಾವಿನಲ್ಲಿ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ. ಈ ಘಟನೆ ಹಿನ್ನೆಲೆ ಏಳು ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಆರೋಪ ಕೇಳಿಬಂದಿದೆ ಎಂದು ವಕೀಲ ಸಂದೀಪ್ ಭಟ್ಟಾಚಾರ್ಯ ಹೇಳಿದರು.

ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕರು, ಕೆಲವು ವಿದ್ಯಾರ್ಥಿಗಳು ಮತ್ತು ಪೊಲೀಸರ ಪಾತ್ರವಿದೆ ಎಂದು ರಾಜ್ಯವು ನ್ಯಾಯಾಲಯಕ್ಕೆ ತಿಳಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ರ‍್ಯಾಗಿಂಗ್ ಘಟನೆ ನಡೆದಿತ್ತು. ಅದನ್ನು ಅನುಸರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: "ಕುಸ್ತಿಪಟುಗಳ ಆರೋಪ ಗಂಭೀರ"; ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್

Last Updated : Apr 25, 2023, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.