ETV Bharat / bharat

ಉಪ ಚುನಾವಣೆಯಲ್ಲಿ 4 ಕ್ಷೇತ್ರ ಗೆದ್ದ ಬಿಜೆಪಿ: ಆರ್​ಜೆ​ಡಿ, ಟಿಆರ್​ಎಸ್​, ಠಾಕ್ರೆ ಬಣಕ್ಕೂ ಗೆಲುವಿನ ಸಿಹಿ

author img

By

Published : Nov 6, 2022, 3:32 PM IST

Updated : Nov 6, 2022, 7:37 PM IST

ದೇಶದ ವಿವಿಧೆಡೆ ನಡೆದ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ದಾಖಲಿಸಿದೆ. ಬಿಹಾರ, ಹರಿಯಾಣ, ಉತ್ತರ ಪ್ರದೇಶ, ಒಡಿಶಾದಲ್ಲಿ ಕಮಲ ಪಕ್ಷ ಕಮಾಲ್​ ಮಾಡಿತು.

bypolls-results-2022-bjp-wins-three-seats
ಉಪ ಚುನಾವಣೆ ಗುದ್ದಾಟದಲ್ಲಿ 'ಕಮಲ' ಕಮಾಲ್

ನವದೆಹಲಿ: ದೇಶದ ಆರು ರಾಜ್ಯದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ನೇರ ಹಣಾಹಣಿ ಎಂದೇ ಬಣ್ಣಿಸಲಾದ ಈ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆರ್​ಜೆಡಿ ಮತ್ತು ಶಿವಸೇನೆ, ಟಿಆರ್​ಎಸ್​ಗೆ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲುವು ಸಿಕ್ಕಿದೆ.

ಬಿಹಾರ:  ಆರ್​ಜೆಡಿಯ ನೀಲಂ ದೇವಿ
ಬಿಹಾರ: ಆರ್​ಜೆಡಿಯ ನೀಲಂ ದೇವಿ

ಆರ್​ಜೆ​ಡಿ, ಬಿಜೆಪಿಗೆ ತಲಾ 1 ಬಿ'ಹಾರ': ಜೆಡಿಯು ಮತ್ತು ಆರ್​ಜೆಡಿ ಮೈತ್ರಿ ಸರ್ಕಾರ ರಚನೆಯ ಬಿಹಾರದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್​ಜೆಡಿ ತಲಾ ಒಂದೊಂದು ಸ್ಥಾನ ಗೆದ್ದಿವೆ. ಮೋಕಮಾ ಕ್ಷೇತ್ರವನ್ನು ಆರ್​ಜೆಡಿ ಮರುವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ. ಬಿಜೆಪಿ ಅಭ್ಯರ್ಥಿ ಸೋನಂ ದೇವಿಯನ್ನು ಆರ್​ಜೆಡಿಯ ನೀಲಂ ದೇವಿ 16 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಸೋನಂ 63,003 ಮತಗಳನ್ನು ಪಡೆದರೆ, ನೀಲಂ 79,744 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಗೆಲುವಿನ ನಗೆ ಬೀರಿದ್ದಾರೆ.

ಬಿಹಾರ: ಬಿಜೆಪಿಯ ಸುಕುಮಾ ದೇವಿ
ಬಿಹಾರ: ಬಿಜೆಪಿಯ ಸುಕುಮಾ ದೇವಿ

ಇತ್ತ, ಗೋಪಾಲ್​ ಗಂಜ್​ ಕ್ಷೇತ್ರದಲ್ಲಿ ಬಿಜೆಪಿಯ ಸುಕುಮಾ ದೇವಿ ಜಯಭೇರಿ ಬಾರಿಸಿದ್ದಾರೆ. ಆರ್​ಜೆಡಿ ಅಭ್ಯರ್ಥಿ ಮೋಹನ್​​ ಪ್ರಸಾದ್ ಗುಪ್ತಾ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಸುಮಾ 70,053 ಮತಗಳನ್ನು ಗಳಿಸಿದ್ದರೆ, ಆರ್​ಜೆಡಿಯ ಗುಪ್ತಾ 68,259 ಮತಗಳನ್ನು ಪಡೆದರು.

ಹರಿಯಾಣ: ಬಿಜೆಪಿಯ ಭವ್ಯ ಬಿಷ್ಣೋಯಿ
ಹರಿಯಾಣ: ಬಿಜೆಪಿಯ ಭವ್ಯ ಬಿಷ್ಣೋಯಿ

ಹರಿಯಾಣದಲ್ಲಿ ಬಿಜೆಪಿಗೆ ಗೆಲುವು: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿದೆ. ಆದಂಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜೈ ಪ್ರಕಾಶ್ ಸೋಲು ಅನುಭವಿಸಿದ್ದು, ಬಿಜೆಪಿಯ ಭವ್ಯಾ ಬಿಷ್ಣೋಯಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್​ನ ಜೈಪ್ರಕಾಶ್ 51,752 ಮತಗಳನ್ನು ಪಡೆದಿದ್ದು, ಭವ್ಯಾ ಬಿಷ್ಣೋಯಿ 67,492 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ.

ಮಹಾರಾಷ್ಟ್ರ: ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ
ಮಹಾರಾಷ್ಟ್ರ: ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ

ಮಹಾರಾಷ್ಟ್ರದಲ್ಲಿ ಉದ್ಧವ್​ ಬಣಕ್ಕೆ ಜೈ: ಇತ್ತೀಚೆಗೆ ರಾಜಕೀಯ ಬಿಕ್ಕಟ್ಟಿನಿಂದ ಸಾಕಷ್ಟು ಸುದ್ದಿಯಾಗಿದ್ದ ಮಹಾರಾಷ್ಟ್ರದಲ್ಲಿ ಮತದಾರರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆಯ ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ 66,550 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೇರೆ ಯಾವುದೇ ಅಭ್ಯರ್ಥಿ ಕಠಿಣ 2 ಸಾವಿರ ಮತಗಳನ್ನೂ ಪಡೆಯಲು ಸಾಧ್ಯವಾಗಿಲ್ಲ.

ಒಡಿಶಾ: ಬಿಜೆಪಿಯ ಸೂರ್ಯಬಂಶಿ ಸೂರಜ್​
ಒಡಿಶಾ: ಬಿಜೆಪಿಯ ಸೂರ್ಯಬಂಶಿ ಸೂರಜ್​

ಒಡಿಶಾದಲ್ಲಿ ಬಿಜೆಡಿಗೆ ಶಾಕ್​: ಬಿಡಿಶಾದಲ್ಲೂ ಅಚ್ಚರಿ ಫಲಿತಾಂಶ ಬರುತ್ತಿದೆ. ಧಮ್​ನಗರ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿಗೆ ಮತದಾರರು ಶಾಕ್​ ನೀಡಿದ್ದಾರೆ. ಬಿಜೆಪಿಯ ಸೂರ್ಯಬಂಶಿ ಸೂರಜ್​ 80,351 ಮತ ಪಡೆದು, 9,881 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಡಿಯ ಅಬಂತಿ ದಾಸ್​ 70,470 ಮತ ಪಡೆದಿದ್ದಾರೆ.

ತೆಲಂಗಾಣ: ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ
ತೆಲಂಗಾಣ: ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ

ತೆಲಂಗಾಣದಲ್ಲಿ ನೇರಾ-ನೇರ ಪೈಪೋಟಿ: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್​​ಎಸ್​ ಮತ್ತು ಬಿಜೆಪಿ ನಡುವೆ ನೇರಾ-ನೇರ ಪೈಪೋಟಿ ಏರ್ಪಟ್ಟಿತ್ತು. ಮುನುಗೋಡು ಕ್ಷೇತ್ರದಲ್ಲಿ ಒಟ್ಟಾರೆ 48 ಅಭ್ಯರ್ಥಿಗಳು ಕಣದಲ್ಲಿದ್ದರು. ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ಹಾಗೂ ಬಿಜೆಪಿಯ ಅಭ್ಯರ್ಥಿ ಕೆ.ರಾಜ್​ಗೋಪಾಲ್​ ರೆಡ್ಡಿ ನಡುವೆ ಗೆಲುವಿಗಾಗಿ ಹೋರಾಟ ನಡೆದಿತ್ತು. ಕೊನೆಗೆ ಟಿಆರ್​ಎಸ್​ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದೆ.

ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿ ಅಮನ್​ ಗಿರಿ
ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿ ಅಮನ್​ ಗಿರಿ

ಉತ್ತರ ಪ್ರದೇಶದಲ್ಲಿ ಕಮಲಕ್ಕೆ ಜಯ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಅಂದಿದ್ದಾರೆ. ಗೋಲ ಗೋಕರ್ಣನಾಥ್ ಕ್ಷೇತ್ರದಲ್ಲಿ ಕಮಲ ಪಕ್ಷದ ಅಭ್ಯರ್ಥಿ ಅಮನ್​ ಗಿರಿ 1.24 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವ ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದ ವಿನಯ್ ತಿವಾರಿ 90 ಸಾವಿರ ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ತಾಯಿ, ಸಹೋದರಿ ಸೇರಿ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದ 15 ವರ್ಷದ ಬಾಲಕ!

ನವದೆಹಲಿ: ದೇಶದ ಆರು ರಾಜ್ಯದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ನೇರ ಹಣಾಹಣಿ ಎಂದೇ ಬಣ್ಣಿಸಲಾದ ಈ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆರ್​ಜೆಡಿ ಮತ್ತು ಶಿವಸೇನೆ, ಟಿಆರ್​ಎಸ್​ಗೆ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲುವು ಸಿಕ್ಕಿದೆ.

ಬಿಹಾರ:  ಆರ್​ಜೆಡಿಯ ನೀಲಂ ದೇವಿ
ಬಿಹಾರ: ಆರ್​ಜೆಡಿಯ ನೀಲಂ ದೇವಿ

ಆರ್​ಜೆ​ಡಿ, ಬಿಜೆಪಿಗೆ ತಲಾ 1 ಬಿ'ಹಾರ': ಜೆಡಿಯು ಮತ್ತು ಆರ್​ಜೆಡಿ ಮೈತ್ರಿ ಸರ್ಕಾರ ರಚನೆಯ ಬಿಹಾರದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್​ಜೆಡಿ ತಲಾ ಒಂದೊಂದು ಸ್ಥಾನ ಗೆದ್ದಿವೆ. ಮೋಕಮಾ ಕ್ಷೇತ್ರವನ್ನು ಆರ್​ಜೆಡಿ ಮರುವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ. ಬಿಜೆಪಿ ಅಭ್ಯರ್ಥಿ ಸೋನಂ ದೇವಿಯನ್ನು ಆರ್​ಜೆಡಿಯ ನೀಲಂ ದೇವಿ 16 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಸೋನಂ 63,003 ಮತಗಳನ್ನು ಪಡೆದರೆ, ನೀಲಂ 79,744 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಗೆಲುವಿನ ನಗೆ ಬೀರಿದ್ದಾರೆ.

ಬಿಹಾರ: ಬಿಜೆಪಿಯ ಸುಕುಮಾ ದೇವಿ
ಬಿಹಾರ: ಬಿಜೆಪಿಯ ಸುಕುಮಾ ದೇವಿ

ಇತ್ತ, ಗೋಪಾಲ್​ ಗಂಜ್​ ಕ್ಷೇತ್ರದಲ್ಲಿ ಬಿಜೆಪಿಯ ಸುಕುಮಾ ದೇವಿ ಜಯಭೇರಿ ಬಾರಿಸಿದ್ದಾರೆ. ಆರ್​ಜೆಡಿ ಅಭ್ಯರ್ಥಿ ಮೋಹನ್​​ ಪ್ರಸಾದ್ ಗುಪ್ತಾ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಸುಮಾ 70,053 ಮತಗಳನ್ನು ಗಳಿಸಿದ್ದರೆ, ಆರ್​ಜೆಡಿಯ ಗುಪ್ತಾ 68,259 ಮತಗಳನ್ನು ಪಡೆದರು.

ಹರಿಯಾಣ: ಬಿಜೆಪಿಯ ಭವ್ಯ ಬಿಷ್ಣೋಯಿ
ಹರಿಯಾಣ: ಬಿಜೆಪಿಯ ಭವ್ಯ ಬಿಷ್ಣೋಯಿ

ಹರಿಯಾಣದಲ್ಲಿ ಬಿಜೆಪಿಗೆ ಗೆಲುವು: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿದೆ. ಆದಂಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜೈ ಪ್ರಕಾಶ್ ಸೋಲು ಅನುಭವಿಸಿದ್ದು, ಬಿಜೆಪಿಯ ಭವ್ಯಾ ಬಿಷ್ಣೋಯಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್​ನ ಜೈಪ್ರಕಾಶ್ 51,752 ಮತಗಳನ್ನು ಪಡೆದಿದ್ದು, ಭವ್ಯಾ ಬಿಷ್ಣೋಯಿ 67,492 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ.

ಮಹಾರಾಷ್ಟ್ರ: ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ
ಮಹಾರಾಷ್ಟ್ರ: ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ

ಮಹಾರಾಷ್ಟ್ರದಲ್ಲಿ ಉದ್ಧವ್​ ಬಣಕ್ಕೆ ಜೈ: ಇತ್ತೀಚೆಗೆ ರಾಜಕೀಯ ಬಿಕ್ಕಟ್ಟಿನಿಂದ ಸಾಕಷ್ಟು ಸುದ್ದಿಯಾಗಿದ್ದ ಮಹಾರಾಷ್ಟ್ರದಲ್ಲಿ ಮತದಾರರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆಯ ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ರಮೇಶ್ ಲಟ್ಕೆ 66,550 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೇರೆ ಯಾವುದೇ ಅಭ್ಯರ್ಥಿ ಕಠಿಣ 2 ಸಾವಿರ ಮತಗಳನ್ನೂ ಪಡೆಯಲು ಸಾಧ್ಯವಾಗಿಲ್ಲ.

ಒಡಿಶಾ: ಬಿಜೆಪಿಯ ಸೂರ್ಯಬಂಶಿ ಸೂರಜ್​
ಒಡಿಶಾ: ಬಿಜೆಪಿಯ ಸೂರ್ಯಬಂಶಿ ಸೂರಜ್​

ಒಡಿಶಾದಲ್ಲಿ ಬಿಜೆಡಿಗೆ ಶಾಕ್​: ಬಿಡಿಶಾದಲ್ಲೂ ಅಚ್ಚರಿ ಫಲಿತಾಂಶ ಬರುತ್ತಿದೆ. ಧಮ್​ನಗರ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿಗೆ ಮತದಾರರು ಶಾಕ್​ ನೀಡಿದ್ದಾರೆ. ಬಿಜೆಪಿಯ ಸೂರ್ಯಬಂಶಿ ಸೂರಜ್​ 80,351 ಮತ ಪಡೆದು, 9,881 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಡಿಯ ಅಬಂತಿ ದಾಸ್​ 70,470 ಮತ ಪಡೆದಿದ್ದಾರೆ.

ತೆಲಂಗಾಣ: ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ
ತೆಲಂಗಾಣ: ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ

ತೆಲಂಗಾಣದಲ್ಲಿ ನೇರಾ-ನೇರ ಪೈಪೋಟಿ: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್​​ಎಸ್​ ಮತ್ತು ಬಿಜೆಪಿ ನಡುವೆ ನೇರಾ-ನೇರ ಪೈಪೋಟಿ ಏರ್ಪಟ್ಟಿತ್ತು. ಮುನುಗೋಡು ಕ್ಷೇತ್ರದಲ್ಲಿ ಒಟ್ಟಾರೆ 48 ಅಭ್ಯರ್ಥಿಗಳು ಕಣದಲ್ಲಿದ್ದರು. ಟಿಆರ್​ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ಹಾಗೂ ಬಿಜೆಪಿಯ ಅಭ್ಯರ್ಥಿ ಕೆ.ರಾಜ್​ಗೋಪಾಲ್​ ರೆಡ್ಡಿ ನಡುವೆ ಗೆಲುವಿಗಾಗಿ ಹೋರಾಟ ನಡೆದಿತ್ತು. ಕೊನೆಗೆ ಟಿಆರ್​ಎಸ್​ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದೆ.

ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿ ಅಮನ್​ ಗಿರಿ
ಉತ್ತರ ಪ್ರದೇಶ: ಬಿಜೆಪಿ ಅಭ್ಯರ್ಥಿ ಅಮನ್​ ಗಿರಿ

ಉತ್ತರ ಪ್ರದೇಶದಲ್ಲಿ ಕಮಲಕ್ಕೆ ಜಯ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಅಂದಿದ್ದಾರೆ. ಗೋಲ ಗೋಕರ್ಣನಾಥ್ ಕ್ಷೇತ್ರದಲ್ಲಿ ಕಮಲ ಪಕ್ಷದ ಅಭ್ಯರ್ಥಿ ಅಮನ್​ ಗಿರಿ 1.24 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವ ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದ ವಿನಯ್ ತಿವಾರಿ 90 ಸಾವಿರ ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ತಾಯಿ, ಸಹೋದರಿ ಸೇರಿ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದ 15 ವರ್ಷದ ಬಾಲಕ!

Last Updated : Nov 6, 2022, 7:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.