ಮುಂಬೈ: ಕೋವಿಡ್ ಎರಡನೇ ಅಲೆ ನಡುವೆ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುತ್ತಿರುವುದಕ್ಕೆ ಬಿಟೌನ್ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ನಟ-ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿ "ನದಿಗಳಲ್ಲಿ ತೇಲುತ್ತಿರುವ ಮತ್ತು ದಡದಲ್ಲಿ ಕೊಳೆತ ಶವಗಳ ಸುದ್ದಿ ಹೃದಯ ವಿದ್ರಾವಕವಾಗಿದೆ. ವೈರಸ್ ಅನ್ನು ಒಂದು ದಿನ ಸೋಲಿಸಲಾಗುವುದು. ಆದರೆ ವ್ಯವಸ್ಥೆಯಲ್ಲಿನ ಈ ವೈಫಲ್ಯಗಳಿಗೆ ಹೊಣೆಗಾರಿಕೆ ಇರಬೇಕು. ಅಲ್ಲಿಯವರೆಗೆ, ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗಲ್ಲ ಎಂದಿದ್ದಾರೆ.
ನಟಿ-ನಿರ್ಮಾಪಕಿ ಪೂಜಾ ಭಟ್ ನೀವು ಮಿಠಾಯಿ ಮಾಡಬಹುದು. ಆದರೆ ನೀವು ಮೃತ ದೇಹಗಳನ್ನು ಹೇಗೆ ಮರೆಮಾಚುತ್ತೀರಿ. ಇದು ಮುಂದಿನ ತಲೆಮಾರುಗಳವರೆಗೆ ನಮ್ಮನ್ನು ಕಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಹಾಸ್ಯನಟ ಜಾವೇದ್ ಜಾಫೆರಿ ಇದು ದುರಂತ ಮತ್ತು ಭಯಾನಕ ಎಂದಿದ್ದಾರೆ.