ETV Bharat / bharat

ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಎಂಟ್ರಿ​.. ವರನ ಎದುರೇ ವಧುವಿಗೆ 'ಸಿಂಧೂರ' ಹಚ್ಚಿದ ಲವರ್​​

author img

By

Published : Jul 7, 2022, 9:44 PM IST

ಮದುವೆ ಮಂಟಪಕ್ಕೆ ನುಗ್ಗಿರುವ ಯುವಕನೊಬ್ಬ ವರನ ಎದುರೇ ವಧುವಿಗೆ 'ಸಿಂಧೂರ' ಹಚ್ಚಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ.

Boyfriend Put Sindoor On Bride
Boyfriend Put Sindoor On Bride

ನಳಂದಾ (ಬಿಹಾರ): ಬಿಹಾರದ ನಳಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಮಾರಂಭ ನೋಡುಗರನ್ನ ಬೆಚ್ಚಿ ಬೀಳಿಸಿದೆ. ಸಂಬಂಧಿಕರು ಹಾಗೂ ವರನ ಸಮ್ಮುಖದಲ್ಲೇ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿ(ವಧು) ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಜನರು ದಿಗ್ಬ್ರಮೆಗೊಂಡಿದ್ದಾರೆ.

ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಎಂಟ್ರಿ

ಕಳೆದ ಒಂದು ವರ್ಷದಿಂದ ಯುವಕ - ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಒಂದು ದಿನ ಯುವತಿ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ, ಹುಡುಗಿಯ ಮದುವೆ ನಿಶ್ಚಯ ಮಾಡಿದ್ದಾರೆ. ಮದುವೆ ಹಿಂದಿನ ದಿನ ಭಾಯ್​​ಫ್ರೆಂಡ್​​ಗೆ ಫೋನ್ ಮಾಡಿರುವ ಯುವತಿ 'ನಾಳೆ ನನ್ನ ಮದುವೆ... ನೀನು ಅಲ್ಲಿಗೆ ಬಂದು ನನ್ನ ಹಣೆಗೆ ಸಿಂಧೂರ ಹಚ್ಚು' ಎಂದು ಹೇಳಿದ್ದಾಳೆ.

ವಧುವಿನ ಬೇಡಿಕೆಯಂತೆ ಸಿಂಧೂರ ಹಂಚಿದ ಯುವಕ: ಇನ್ನೇನು ಕೆಲ ನಿಮಿಷಗಳಲ್ಲಿ ತಾಳಿ ಕಟ್ಟುವ ಸಮಾರಂಭ ನಡೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಭಾಯ್​ಫ್ರೆಂಡ್ ಎಂಟ್ರಿ ನೀಡಿದ್ದಾನೆ. ಈ ವೇಳೆ ವಧುವಿನ ಬೇಡಿಕೆಯಂತೆ ಆಕೆಯ ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಯುವತಿ ಸಂಬಂಧಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ನಡೆದ ಬೆನ್ನಲ್ಲೇ ವರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು: ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮುಖೇಶ್​​ನನ್ನ ಜನರಿಂದ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಿಹಾರದ ಷರೀಫ್​ ಸದರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಈ ವೇಳೆ ಯುವತಿ ಮಾತನಾಡಿದ್ದು, ನಾವು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ವಿಷಯ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ನನ್ನ ಮದುವೆ ಬೇರೆಡೆ ನಿಶ್ಚಯಿಸಿದ್ದಾರೆ ಎಂದಿದ್ದಾಳೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಹುಡುಗಿಯನ್ನ ಮದುವೆ ಮಾಡಿಕೊಳ್ಳಲು ಯುವಕ ಹಿಂದೇಟು ಹಾಕಿದ್ದಾನೆ. ಹೀಗಾಗಿ, ಮದುವೆ ಮುರಿದು ಬಿದ್ದಿದೆ.

ಇದನ್ನು ಓದಿ:ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು! ವರದಕ್ಷಿಣೆಗೋಸ್ಕರ ನವ ವಿವಾಹಿತೆ ಕೊಲೆ; ಗಂಗಾ ನದಿಯಲ್ಲಿ ಮೃತದೇಹ ಪತ್ತೆ

ನಳಂದಾ (ಬಿಹಾರ): ಬಿಹಾರದ ನಳಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಮಾರಂಭ ನೋಡುಗರನ್ನ ಬೆಚ್ಚಿ ಬೀಳಿಸಿದೆ. ಸಂಬಂಧಿಕರು ಹಾಗೂ ವರನ ಸಮ್ಮುಖದಲ್ಲೇ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿ(ವಧು) ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಜನರು ದಿಗ್ಬ್ರಮೆಗೊಂಡಿದ್ದಾರೆ.

ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಎಂಟ್ರಿ

ಕಳೆದ ಒಂದು ವರ್ಷದಿಂದ ಯುವಕ - ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಒಂದು ದಿನ ಯುವತಿ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ, ಹುಡುಗಿಯ ಮದುವೆ ನಿಶ್ಚಯ ಮಾಡಿದ್ದಾರೆ. ಮದುವೆ ಹಿಂದಿನ ದಿನ ಭಾಯ್​​ಫ್ರೆಂಡ್​​ಗೆ ಫೋನ್ ಮಾಡಿರುವ ಯುವತಿ 'ನಾಳೆ ನನ್ನ ಮದುವೆ... ನೀನು ಅಲ್ಲಿಗೆ ಬಂದು ನನ್ನ ಹಣೆಗೆ ಸಿಂಧೂರ ಹಚ್ಚು' ಎಂದು ಹೇಳಿದ್ದಾಳೆ.

ವಧುವಿನ ಬೇಡಿಕೆಯಂತೆ ಸಿಂಧೂರ ಹಂಚಿದ ಯುವಕ: ಇನ್ನೇನು ಕೆಲ ನಿಮಿಷಗಳಲ್ಲಿ ತಾಳಿ ಕಟ್ಟುವ ಸಮಾರಂಭ ನಡೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಭಾಯ್​ಫ್ರೆಂಡ್ ಎಂಟ್ರಿ ನೀಡಿದ್ದಾನೆ. ಈ ವೇಳೆ ವಧುವಿನ ಬೇಡಿಕೆಯಂತೆ ಆಕೆಯ ಹಣೆಗೆ ಸಿಂಧೂರ ಹಚ್ಚಿದ್ದಾನೆ. ಇದನ್ನ ನೋಡಿರುವ ಯುವತಿ ಸಂಬಂಧಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ನಡೆದ ಬೆನ್ನಲ್ಲೇ ವರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು: ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮುಖೇಶ್​​ನನ್ನ ಜನರಿಂದ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಿಹಾರದ ಷರೀಫ್​ ಸದರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಈ ವೇಳೆ ಯುವತಿ ಮಾತನಾಡಿದ್ದು, ನಾವು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ವಿಷಯ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ನನ್ನ ಮದುವೆ ಬೇರೆಡೆ ನಿಶ್ಚಯಿಸಿದ್ದಾರೆ ಎಂದಿದ್ದಾಳೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಹುಡುಗಿಯನ್ನ ಮದುವೆ ಮಾಡಿಕೊಳ್ಳಲು ಯುವಕ ಹಿಂದೇಟು ಹಾಕಿದ್ದಾನೆ. ಹೀಗಾಗಿ, ಮದುವೆ ಮುರಿದು ಬಿದ್ದಿದೆ.

ಇದನ್ನು ಓದಿ:ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು! ವರದಕ್ಷಿಣೆಗೋಸ್ಕರ ನವ ವಿವಾಹಿತೆ ಕೊಲೆ; ಗಂಗಾ ನದಿಯಲ್ಲಿ ಮೃತದೇಹ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.