ETV Bharat / bharat

ಗಂಗೂಬಾಯಿ ಕಥಿಯಾವಾಡಿ ಚಿತ್ರದ ವಿರುದ್ಧದ 2 ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

author img

By

Published : Feb 23, 2022, 5:31 PM IST

'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಟ್ರೇಲರ್‌ನಲ್ಲಿರುವ ದೃಶ್ಯವು ಈಶಾನ್ಯ ಜನರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಗೂಬಾಯಿ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ..

Bombay High Court dismisses two petitions against the film 'Gangubai Kathiawadi
ಗಂಗೂಬಾಯಿ ಕಥಿಯಾವಾಡಿ ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ

ಮುಂಬೈ : 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್, ಚಿತ್ರದ ವಿರುದ್ಧದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿದೆ. 55 ಇತರ ಕಾಮಾಟಿಪುರ ನಿವಾಸಿಗಳ ಪರವಾಗಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚಲನಚಿತ್ರದಿಂದಾಗಿ, ಆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು "ವೇಶ್ಯೆ ಎಂದು ಕರೆಯಲಾಗುವುದು" ಮತ್ತು "ಕುಟುಂಬಗಳು ಕಡಿಮೆ ಘನತೆಯಿಂದ ಬದುಕಬೇಕಾಗುತ್ತದೆ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಕೂಡ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ್ದರು. ಈ ಕಥೆ ಕಥಿಯಾವಾಡಿ ಸಮುದಾಯ ಅಥವಾ ಯಾವುದೇ ಮಹಿಳೆಯನ್ನು ಕೆಟ್ಟದಾಗಿ ತೋರಿಸಲು ಉದ್ದೇಶಿಸಿಲ್ಲ.

ಆ ಸಮುದಾಯವು ಗಂಗೂಬಾಯಿ ಕಥಿಯಾವಾಡಿ ಎಂದು ಸಂಬಂಧಿಸಿರಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಕೃತಿಯು ಕಾಮಾಟಿಪುರದ ಸಂಪೂರ್ಣ ಪ್ರದೇಶವನ್ನು ಕೆಂಪು ದೀಪದ ಪ್ರದೇಶ ಎಂದು ಸೂಚಿಸುವುದಿಲ್ಲ ಎಂದು ಚಿತ್ರ ನಿರ್ಮಾಪಕರು ಸ್ಪಷ್ಟಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಎರಡು ಅರ್ಜಿಗಳಷ್ಟೇ ಅಲ್ಲ, ಟ್ರೇಲರ್‌ನಲ್ಲಿರುವ ದೃಶ್ಯವು ಈಶಾನ್ಯ ಜನರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಗೂಬಾಯಿ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಫೆ.25ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ಗಂಗೂಬಾಯಿ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಗಂಗೂಬಾಯಿ ಅವರ ಮೊಮ್ಮಗಳು ಭಾರತಿ ಆರೋಪ ಮಾಡಿದ್ದಾರೆ. ಅಲ್ಲದೇ ಹಣದಾಸೆಗೆ ಚಿತ್ರದಲ್ಲಿ ಸತ್ಯ ಮರೆಮಾಚಿ ನಮ್ಮ ತಾಯಿಯ ತೇಜೋವಧೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಬಿಡುಗಡೆಗೆ ಅಪಸ್ವರ! ಕಾರಣ?


ಮುಂಬೈ : 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್, ಚಿತ್ರದ ವಿರುದ್ಧದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿದೆ. 55 ಇತರ ಕಾಮಾಟಿಪುರ ನಿವಾಸಿಗಳ ಪರವಾಗಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚಲನಚಿತ್ರದಿಂದಾಗಿ, ಆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು "ವೇಶ್ಯೆ ಎಂದು ಕರೆಯಲಾಗುವುದು" ಮತ್ತು "ಕುಟುಂಬಗಳು ಕಡಿಮೆ ಘನತೆಯಿಂದ ಬದುಕಬೇಕಾಗುತ್ತದೆ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಕೂಡ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ್ದರು. ಈ ಕಥೆ ಕಥಿಯಾವಾಡಿ ಸಮುದಾಯ ಅಥವಾ ಯಾವುದೇ ಮಹಿಳೆಯನ್ನು ಕೆಟ್ಟದಾಗಿ ತೋರಿಸಲು ಉದ್ದೇಶಿಸಿಲ್ಲ.

ಆ ಸಮುದಾಯವು ಗಂಗೂಬಾಯಿ ಕಥಿಯಾವಾಡಿ ಎಂದು ಸಂಬಂಧಿಸಿರಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಕೃತಿಯು ಕಾಮಾಟಿಪುರದ ಸಂಪೂರ್ಣ ಪ್ರದೇಶವನ್ನು ಕೆಂಪು ದೀಪದ ಪ್ರದೇಶ ಎಂದು ಸೂಚಿಸುವುದಿಲ್ಲ ಎಂದು ಚಿತ್ರ ನಿರ್ಮಾಪಕರು ಸ್ಪಷ್ಟಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಎರಡು ಅರ್ಜಿಗಳಷ್ಟೇ ಅಲ್ಲ, ಟ್ರೇಲರ್‌ನಲ್ಲಿರುವ ದೃಶ್ಯವು ಈಶಾನ್ಯ ಜನರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಗೂಬಾಯಿ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಫೆ.25ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ಗಂಗೂಬಾಯಿ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಗಂಗೂಬಾಯಿ ಅವರ ಮೊಮ್ಮಗಳು ಭಾರತಿ ಆರೋಪ ಮಾಡಿದ್ದಾರೆ. ಅಲ್ಲದೇ ಹಣದಾಸೆಗೆ ಚಿತ್ರದಲ್ಲಿ ಸತ್ಯ ಮರೆಮಾಚಿ ನಮ್ಮ ತಾಯಿಯ ತೇಜೋವಧೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಬಿಡುಗಡೆಗೆ ಅಪಸ್ವರ! ಕಾರಣ?


For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.