ETV Bharat / bharat

'ಬ್ರಾಹ್ಮಣ, ಬನಿಯಾ ಸಮುದಾಯ ನನ್ನ ಜೇಬಿನಲ್ಲಿದ್ದಾರೆ': ಮುರಳೀಧರ್‌ ರಾವ್‌ ವಿವಾದ

author img

By

Published : Nov 9, 2021, 3:17 PM IST

ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲೇ ಇದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶದ ಬಿಜೆಪಿ ಪಕ್ಷದ ಉಸ್ತುವಾರಿ ಪಿ.ಮುರಳೀಧರ್‌ ರಾವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

BJP Leader Says "Brahmins, Baniyas In Pocket", Apologise, Says Congress
'ಬ್ರಾಹ್ಮಣ, ಬನಿಯಾದವರು ನನ್ನ ಜೇಬಿನಲ್ಲೇ ಇದ್ದಾರೆ'- ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್‌ ರಾವ್‌ ವಿವಾದ

ಭೋಪಾಲ್(ಮಧ್ಯಪ್ರದೇಶ): ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‌ ರಾವ್‌ ಅವರು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

  • मीडिया ने सवाल किया तो भाजपा प्रदेश प्रभारी कह रहे है कि तो फिर आप चला लो पार्टी….
    सत्ता का कितना अहंकार… pic.twitter.com/BcvgSeoG74

    — Narendra Saluja (@NarendraSaluja) November 8, 2021 " class="align-text-top noRightClick twitterSection" data=" ">

ರಾವ್‌ ಅವರ ಹೇಳಿಕೆ ಮಧ್ಯಪ್ರದೇಶದಲ್ಲಿ ವಾಗ್ವಾದಕ್ಕೆ ಕಾರಣವಾಗಿದ್ದು, ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. ಇದೇ ವೇಳೆ, ಆಡಳಿತ ಪಕ್ಷ ಈ ಎರಡು ಸಮುದಾಯಗಳ ಮೇಲೆ ಹಕ್ಕು ಸಾಧಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಮಧ್ಯಪ್ರದೇಶ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿರುವ ರಾವ್‌, ಭೋಪಾಲ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ವಿಭಾಗಗಳಲ್ಲೂ ಕಾಂಗ್ರೆಸ್‌ ದ್ರೋಹ ಮಾಡಿರುವುದಲ್ಲದೇ, ವಿಭಜಿಸಿದೆ. ಪರಿಶಿಷ್ಟ ಪಂಗಡದವರು ಹಿಂದುಳಿದಿದ್ದರೆ ಏಕೈಕ ಕಾರಣ ಕಾಂಗ್ರೆಸ್ ಎಂದು ದೂರಿದ್ದಾರೆ.

ಬಿಜೆಪಿಯು ಅಭಿವೃದ್ಧಿಯ ಅಂಚಿನಲ್ಲಿರುವ ಸಮುದಾಯಗಳ ಮೇಲೆ ತನ್ನ ಗುರಿ ಕೇಂದ್ರೀಕರಿಸಿದೆ. ಇದು ವೋಟ್ ಬ್ಯಾಂಕ್‌ಗಾಗಿ ಅಲ್ಲ, ಆದರೆ ಹಿಂದುಳಿದಿರುವಿಕೆ, ಉದ್ಯೋಗ ಹಾಗೂ ಶಿಕ್ಷಣದ ಕೊರತೆಯನ್ನು ನೀಗಿಸುವುದು ಎಂದು ಪ್ರತಿಪಾದಿಸಿದ್ದಾರೆ.

ಬ್ರಾಹ್ಮಣರು ಇದ್ದಾಗ ನೀವು ನಮ್ಮನ್ನು ಬ್ರಾಹ್ಮಣರ ಪಕ್ಷ ಎಂದು ಕರೆದಿದ್ದೀರಿ, ಬನಿಯಾಗಳು ಇದ್ದಾಗ ನೀವು ನಮ್ಮನ್ನು ಬನಿಯಾ ಪಾರ್ಟಿ ಎಂದು ಕರೆದಿದ್ದೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಮುರಳೀಧರ್‌ ರಾವ್‌ ಉತ್ತರಿಸಿದರು.

ಭೋಪಾಲ್(ಮಧ್ಯಪ್ರದೇಶ): ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‌ ರಾವ್‌ ಅವರು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

  • मीडिया ने सवाल किया तो भाजपा प्रदेश प्रभारी कह रहे है कि तो फिर आप चला लो पार्टी….
    सत्ता का कितना अहंकार… pic.twitter.com/BcvgSeoG74

    — Narendra Saluja (@NarendraSaluja) November 8, 2021 " class="align-text-top noRightClick twitterSection" data=" ">

ರಾವ್‌ ಅವರ ಹೇಳಿಕೆ ಮಧ್ಯಪ್ರದೇಶದಲ್ಲಿ ವಾಗ್ವಾದಕ್ಕೆ ಕಾರಣವಾಗಿದ್ದು, ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. ಇದೇ ವೇಳೆ, ಆಡಳಿತ ಪಕ್ಷ ಈ ಎರಡು ಸಮುದಾಯಗಳ ಮೇಲೆ ಹಕ್ಕು ಸಾಧಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಮಧ್ಯಪ್ರದೇಶ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿರುವ ರಾವ್‌, ಭೋಪಾಲ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ವಿಭಾಗಗಳಲ್ಲೂ ಕಾಂಗ್ರೆಸ್‌ ದ್ರೋಹ ಮಾಡಿರುವುದಲ್ಲದೇ, ವಿಭಜಿಸಿದೆ. ಪರಿಶಿಷ್ಟ ಪಂಗಡದವರು ಹಿಂದುಳಿದಿದ್ದರೆ ಏಕೈಕ ಕಾರಣ ಕಾಂಗ್ರೆಸ್ ಎಂದು ದೂರಿದ್ದಾರೆ.

ಬಿಜೆಪಿಯು ಅಭಿವೃದ್ಧಿಯ ಅಂಚಿನಲ್ಲಿರುವ ಸಮುದಾಯಗಳ ಮೇಲೆ ತನ್ನ ಗುರಿ ಕೇಂದ್ರೀಕರಿಸಿದೆ. ಇದು ವೋಟ್ ಬ್ಯಾಂಕ್‌ಗಾಗಿ ಅಲ್ಲ, ಆದರೆ ಹಿಂದುಳಿದಿರುವಿಕೆ, ಉದ್ಯೋಗ ಹಾಗೂ ಶಿಕ್ಷಣದ ಕೊರತೆಯನ್ನು ನೀಗಿಸುವುದು ಎಂದು ಪ್ರತಿಪಾದಿಸಿದ್ದಾರೆ.

ಬ್ರಾಹ್ಮಣರು ಇದ್ದಾಗ ನೀವು ನಮ್ಮನ್ನು ಬ್ರಾಹ್ಮಣರ ಪಕ್ಷ ಎಂದು ಕರೆದಿದ್ದೀರಿ, ಬನಿಯಾಗಳು ಇದ್ದಾಗ ನೀವು ನಮ್ಮನ್ನು ಬನಿಯಾ ಪಾರ್ಟಿ ಎಂದು ಕರೆದಿದ್ದೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಮುರಳೀಧರ್‌ ರಾವ್‌ ಉತ್ತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.