ETV Bharat / bharat

ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಶಾಸಕರು ಹೋಟೆಲ್​​ನಲ್ಲೇ ಇರಬೇಕು: ಸಿಎಂ ಗೆಹ್ಲೋಟ್​

ರಾಜಸ್ಥಾನ ಸರ್ಕಾರಕ್ಕೆ ಬೆದರಿಕೆಯಿದ್ದು, ಒಗ್ಗಟ್ಟಿನಿಂದ ಮಾತ್ರ ವಿಜಯ ಗಳಿಸಿಸಲು ಸಾಧ್ಯ. ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಹೋಟೆಲ್ ಫೇರ್ಮಾಂಟ್​ನಲ್ಲೇ ಇರುವಂತೆ ಶಾಸಕರಿಗೆ ಸಿಎಂ ಅಶೋಕ್​ ಗೆಹ್ಲೋಟ್ ತಿಳಿಸಿದ್ದಾರೆ.

author img

By

Published : Jul 30, 2020, 7:20 PM IST

CM Gehlot
ಸಿಎಂ ಅಶೋಕ್​ ಗೆಹ್ಲೋಟ್

ಜೈಪುರ: ಒಗ್ಗಟ್ಟಿನಿಂದ ಮಾತ್ರ ಜಯ ಗಳಿಸಿಸಲು ಸಾಧ್ಯವಿದೆ. ಹೀಗಾಗಿ ಆ.14 ಅಂದರೆ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಹೋಟೆಲ್ ಫೇರ್ಮಾಂಟ್​ನಲ್ಲೇ ಇರುವಂತೆ ಶಾಸಕರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್, ಸರ್ಕಾರಕ್ಕೆ ಇರುವ ಕಂಟಕದಿಂದ ಪಾರಾಗುವವರೆಗೆ ಎಲ್ಲಾ ಶಾಸಕರು ಒಟ್ಟಿಗೆ ಇರಬೇಕು. ಅದು ಎಷ್ಟು ದಿನಗಳಾದರೂ ಆಗಬಹುದು. ಹೋಟೆಲ್​ನಲ್ಲಿ ಕುಳಿತುಕೊಂಡೆ ನಿಮ್ಮ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಂತೆ ಶಾಸಕರಿಗೆ ಸೂಚಿಸಿದ್ದಾರೆ.

ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯದ ಹೈಡ್ರಾಮಾದ ನಡುವೆ ಬಿಜೆಪಿ ಜೊತೆ ಕೈ ಜೋಡಿಸದೆ ಸಿಎಂ ಪರ ಇರುವ ಕಾಂಗ್ರೆಸ್ ಶಾಸಕರನ್ನು ಜೈಪುರದ ಫೇರ್ಮಾಂಟ್ ಹೋಟೆಲ್​ನಲ್ಲಿರಿಸಲಾಗಿದೆ. ಸುಮಾರು 70 ಶಾಸಕರು ಇಲ್ಲಿದ್ದು, ಅವರ ಕುಟುಂಬಸ್ಥರು ಹೋಟೆಲ್​ಗೆ ಭೇಟಿ ನೀಡುತ್ತಿರುತ್ತಾರೆ.

ಈದ್, ರಕ್ಷಾಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿಯನ್ನು ಹೋಟೆಲ್​ನಲ್ಲೇ ಆಚರಿಸಲು ಕೂಡ ಶಾಸಕರ ಕುಟುಂಬ ಮತ್ತು ಸಂಬಂಧಿಕರಿಗೆ ವ್ಯವಸ್ಥೆ ಮಾಡಲಾಗಿದೆ.

ಜೈಪುರ: ಒಗ್ಗಟ್ಟಿನಿಂದ ಮಾತ್ರ ಜಯ ಗಳಿಸಿಸಲು ಸಾಧ್ಯವಿದೆ. ಹೀಗಾಗಿ ಆ.14 ಅಂದರೆ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಹೋಟೆಲ್ ಫೇರ್ಮಾಂಟ್​ನಲ್ಲೇ ಇರುವಂತೆ ಶಾಸಕರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್, ಸರ್ಕಾರಕ್ಕೆ ಇರುವ ಕಂಟಕದಿಂದ ಪಾರಾಗುವವರೆಗೆ ಎಲ್ಲಾ ಶಾಸಕರು ಒಟ್ಟಿಗೆ ಇರಬೇಕು. ಅದು ಎಷ್ಟು ದಿನಗಳಾದರೂ ಆಗಬಹುದು. ಹೋಟೆಲ್​ನಲ್ಲಿ ಕುಳಿತುಕೊಂಡೆ ನಿಮ್ಮ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಂತೆ ಶಾಸಕರಿಗೆ ಸೂಚಿಸಿದ್ದಾರೆ.

ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯದ ಹೈಡ್ರಾಮಾದ ನಡುವೆ ಬಿಜೆಪಿ ಜೊತೆ ಕೈ ಜೋಡಿಸದೆ ಸಿಎಂ ಪರ ಇರುವ ಕಾಂಗ್ರೆಸ್ ಶಾಸಕರನ್ನು ಜೈಪುರದ ಫೇರ್ಮಾಂಟ್ ಹೋಟೆಲ್​ನಲ್ಲಿರಿಸಲಾಗಿದೆ. ಸುಮಾರು 70 ಶಾಸಕರು ಇಲ್ಲಿದ್ದು, ಅವರ ಕುಟುಂಬಸ್ಥರು ಹೋಟೆಲ್​ಗೆ ಭೇಟಿ ನೀಡುತ್ತಿರುತ್ತಾರೆ.

ಈದ್, ರಕ್ಷಾಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿಯನ್ನು ಹೋಟೆಲ್​ನಲ್ಲೇ ಆಚರಿಸಲು ಕೂಡ ಶಾಸಕರ ಕುಟುಂಬ ಮತ್ತು ಸಂಬಂಧಿಕರಿಗೆ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.