ETV Bharat / bharat

ಬೆಂಗಳೂರಿಗೆ ಹೋಗುವ ಪ್ಲಾನ್​​... ಇಬ್ಬರು ಲವರ್ಸ್​ ಜೊತೆ ಸೇರಿ ಗಂಡನ ಕೊಲೆ ಮಾಡಿದ ಹೆಂಡತಿ!

author img

By

Published : Aug 13, 2020, 4:45 AM IST

ಲವರ್ಸ್​ಗಳೊಂದಿಗೆ ಬೆಂಗಳೂರಿಗೆ ಹೋಗುವ ಆಸೆಯಿಂದಾಗಿ ಹೆಂಡತಿಯೋರ್ವಳು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Wife killed husband
Wife killed husband

ಧೋಲ್ಪುರ್​​​​(ರಾಜಸ್ಥಾನ): ಇಬ್ಬರು ಲವರ್​​ಗಳೊಂದಿಗೆ​ ಸೇರಿ ಮಹಿಳೆಯೋರ್ವಳು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿರುವ ಘಟನೆ ರಾಜಸ್ಥಾನದ ಧೋಲ್ಪುರ್​​ದಲ್ಲಿ ನಡೆದಿದೆ. ಪ್ರಕರಣ ನಡೆದ ಕೇವಲ 24 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ವ್ಯಕ್ತಿಯ ಹೆಂಡತಿಯ ಇಬ್ಬರು ಪ್ರೇಮಿಗಳು ವ್ಯಕ್ತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ, ತದನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಮೃತದೇಹವನ್ನ ಮಹಾಕಲೇಶ್ವರ ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆದಿದ್ದಾರೆ. ಮೃತದೇಹ ನೋಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಎಫ್​ಎಸ್​ಎಲ್​ ತಂಡ ಆಗಮಿಸಿದ್ದು, ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

ಮೃತ ವ್ಯಕ್ತಿ ರವಿ ಹೆಂಡತಿ ಚಾಂದನಿ ವಿಚಾರಣೆ ನಡೆಸಿದಾಗ ನಿಜಾಂಶ ಹೊರಹಾಕಿದ್ದಾಳೆ. ಇದಾದ ಬಳಿಕ ಆಕೆಯ ಇಬ್ಬರು ಪ್ರೇಮಿಗಳ ಬಂಧನ ಮಾಡಲಾಗಿದೆ. ಮೃತ ರವಿ ಪತ್ನಿ ಚಾಂದನಿ ಕಳೆದ ಕೆಲ ವರ್ಷಗಳಿಂದ ಇಬ್ಬರು ವ್ಯಕ್ತಿಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆಯನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಲು ಇವರಿಬ್ಬರು ನಿರ್ಧರಿಸಿದ್ದರು. ಆದರೆ ಪತಿ ರವಿ ಮಧ್ಯೆ ಬರುತ್ತಿದ್ದನು. ಹೀಗಾಗಿ ಆತನ ಕೊಲೆ ಮಾಡಿಸಲು ಹೆಂಡತಿ ನಿರ್ಧರಿಸಿದ್ದಾಳೆ. ಅದರಂತೆ ತನ್ನ ಲವರ್ಸ್​​ಗೆ ಮಾಹಿತಿ ನೀಡಿದ್ದರಿಂದ ಈ ಕೃತ್ಯವೆಸಗಿದ್ದಾರೆ. ಆತ ಕುಡಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಕೊಳ್ಳಲಿ ಎಂದು ಆತನ ಜೇಬಿನಲ್ಲಿ ಮದ್ಯದ ಬಾಟಲಿ ಇಟ್ಟಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿ ಇವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಧೋಲ್ಪುರ್​​​​(ರಾಜಸ್ಥಾನ): ಇಬ್ಬರು ಲವರ್​​ಗಳೊಂದಿಗೆ​ ಸೇರಿ ಮಹಿಳೆಯೋರ್ವಳು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿರುವ ಘಟನೆ ರಾಜಸ್ಥಾನದ ಧೋಲ್ಪುರ್​​ದಲ್ಲಿ ನಡೆದಿದೆ. ಪ್ರಕರಣ ನಡೆದ ಕೇವಲ 24 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ವ್ಯಕ್ತಿಯ ಹೆಂಡತಿಯ ಇಬ್ಬರು ಪ್ರೇಮಿಗಳು ವ್ಯಕ್ತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ, ತದನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಮೃತದೇಹವನ್ನ ಮಹಾಕಲೇಶ್ವರ ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆದಿದ್ದಾರೆ. ಮೃತದೇಹ ನೋಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಎಫ್​ಎಸ್​ಎಲ್​ ತಂಡ ಆಗಮಿಸಿದ್ದು, ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

ಮೃತ ವ್ಯಕ್ತಿ ರವಿ ಹೆಂಡತಿ ಚಾಂದನಿ ವಿಚಾರಣೆ ನಡೆಸಿದಾಗ ನಿಜಾಂಶ ಹೊರಹಾಕಿದ್ದಾಳೆ. ಇದಾದ ಬಳಿಕ ಆಕೆಯ ಇಬ್ಬರು ಪ್ರೇಮಿಗಳ ಬಂಧನ ಮಾಡಲಾಗಿದೆ. ಮೃತ ರವಿ ಪತ್ನಿ ಚಾಂದನಿ ಕಳೆದ ಕೆಲ ವರ್ಷಗಳಿಂದ ಇಬ್ಬರು ವ್ಯಕ್ತಿಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆಯನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಲು ಇವರಿಬ್ಬರು ನಿರ್ಧರಿಸಿದ್ದರು. ಆದರೆ ಪತಿ ರವಿ ಮಧ್ಯೆ ಬರುತ್ತಿದ್ದನು. ಹೀಗಾಗಿ ಆತನ ಕೊಲೆ ಮಾಡಿಸಲು ಹೆಂಡತಿ ನಿರ್ಧರಿಸಿದ್ದಾಳೆ. ಅದರಂತೆ ತನ್ನ ಲವರ್ಸ್​​ಗೆ ಮಾಹಿತಿ ನೀಡಿದ್ದರಿಂದ ಈ ಕೃತ್ಯವೆಸಗಿದ್ದಾರೆ. ಆತ ಕುಡಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಕೊಳ್ಳಲಿ ಎಂದು ಆತನ ಜೇಬಿನಲ್ಲಿ ಮದ್ಯದ ಬಾಟಲಿ ಇಟ್ಟಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿ ಇವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.