ETV Bharat / bharat

ನಂಗೆ ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿ ಅಪ್ಪಿಕೊಳ್ಳುವೆ ಎಂದಿದ್ದ ಬಿಜೆಪಿ ಅನುಪಮ್​ ಹಜ್ರಾಗೆ ಕೋವಿಡ್​!

author img

By

Published : Oct 2, 2020, 4:45 PM IST

ತಮಗೆ ಮಹಾಮಾರಿ ಕೊರೊನಾ ವೈರಸ್​ ಕಾಣಿಸಿಕೊಂಡರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡನಿಗೆ ಇದೀಗ ಡೆಡ್ಲಿ ವೈರಸ್​ ಅಂಟಿಕೊಂಡಿದೆ.

anupam Hazra
anupam Hazra

ಕೋಲ್ಕತ್ತಾ: ನನಗೆ ಕೊರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್​ ಹಜ್ರಾಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಫೇಸ್​ಬುಕ್​​ನಲ್ಲಿ ಅವರು ಮಾಹಿತಿ ನೀಡಿದ್ದು, ಕೋಲ್ಕತ್ತಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ರ‍್ಯಾಲಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತಾದರೂ ನನಗೆ ಕೋವಿಡ್​ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು - ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದಿದ್ದರು.

ಇದನ್ನೂ ಓದಿ: ನಂಗೆ ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುವೆ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಇವರ ಹೇಳಿಕೆ ಖಂಡಿಸಿ ಅನುಪಮ್ ಹಜ್ರಾ ವಿರುದ್ಧ ಪೊಲೀಸ್​ ದೂರು ಕೂಡ ದಾಖಲಾಗಿತ್ತು. ಇನ್ನು ಇವರು ಭಾಗಿಯಾಗಿದ್ದ ರ‍್ಯಾಲಿಯಲ್ಲಿ ಅನುಪಮ್​ ಹಜ್ರಾ ಆಗಲಿ, ಇತರ ಬಿಜೆಪಿ ಕಾರ್ಯಕರ್ತರಾಗಲಿ ಮಾಸ್ಕ್​ಗಳನ್ನ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.

ಕೋಲ್ಕತ್ತಾ: ನನಗೆ ಕೊರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್​ ಹಜ್ರಾಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಫೇಸ್​ಬುಕ್​​ನಲ್ಲಿ ಅವರು ಮಾಹಿತಿ ನೀಡಿದ್ದು, ಕೋಲ್ಕತ್ತಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ರ‍್ಯಾಲಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತಾದರೂ ನನಗೆ ಕೋವಿಡ್​ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು - ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದಿದ್ದರು.

ಇದನ್ನೂ ಓದಿ: ನಂಗೆ ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುವೆ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಇವರ ಹೇಳಿಕೆ ಖಂಡಿಸಿ ಅನುಪಮ್ ಹಜ್ರಾ ವಿರುದ್ಧ ಪೊಲೀಸ್​ ದೂರು ಕೂಡ ದಾಖಲಾಗಿತ್ತು. ಇನ್ನು ಇವರು ಭಾಗಿಯಾಗಿದ್ದ ರ‍್ಯಾಲಿಯಲ್ಲಿ ಅನುಪಮ್​ ಹಜ್ರಾ ಆಗಲಿ, ಇತರ ಬಿಜೆಪಿ ಕಾರ್ಯಕರ್ತರಾಗಲಿ ಮಾಸ್ಕ್​ಗಳನ್ನ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.