ETV Bharat / bharat

ಎರಡು ದಿನದಲ್ಲಿ ಮೂವರ ಅನುಮಾನಾಸ್ಪದ ಸಾವು: ಕಳ್ಳಭಟ್ಟಿ ದುರಂತದ ಶಂಕೆ

author img

By

Published : Oct 19, 2020, 7:26 PM IST

ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಹಿಂದೆ ಕಳ್ಳಭಟ್ಟಿ ಸೇವನೆಯ ಶಂಕೆ ವ್ಯಕ್ತವಾಗಿದೆ.

Three die in mysterious circumstances in Walayar
ಕೇರಳದ ಪಾಲಕ್ಕಾಡ್​ನಲ್ಲಿ ಮೂವರ ಸಾವು

ಪಾಲಕ್ಕಾಡ್ : ( ಕೇರಳ) ಜಿಲ್ಲೆಯ ವಲಯಾರ್​​ನಲ್ಲಿ ಎರಡು ದಿನದೊಳಗೆ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಹಿಂದೆ ಕಳ್ಳಭಟ್ಟಿಯ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಆದಿವಾಸಿ ಪ್ರದೇಶವಾದ ವಲಯಾರ್​ ಪಯ್ಯತ್ತುಕಾಡ್ ನಿವಾಸಿಗಳಾದ ರಾಮನ್ , ಅಯ್ಯಪ್ಪನ್ ಮತ್ತು ಶಿವನ್ ಮೃತರು. ಇವರಲ್ಲಿ ಇಬ್ಬರು ಭಾನುವಾರ ಮೃತಪಟ್ಟರೆ, ಓರ್ವ ಸೋಮವಾರ ಮೃತಪಟ್ಟಿದ್ದಾನೆ. ಕಳ್ಳಭಟ್ಟಿ ಸೇವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ​

ಭಾನುವಾರ ಮೃತಪಟ್ಟ ಇಬ್ಬರ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸೋಮವಾರ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿದ್ದಾರ ಎಂಬುವುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಲಿದೆ.

ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ಸ್ಯಾನಿಟೈಸರ್​ ವಾಸನೆ ಬಂದಿದೆ ಮತ್ತು ಸಾಬೂನು ಪತ್ತೆಯಾಗಿದೆ. ಮೇಲ್ನೋಟಕ್ಕೆ ಸ್ಯಾನಿಟೈಸರ್​ ಸೇವಿಸಿ ಮೃತಪಟ್ಟಿರುವ ಶಂಕೆಯಿದೆ. ನಮಗೆ ಪರಿಸರದಲ್ಲಿ ಯಾವುದೇ ನಕಲಿ ಮದ್ಯದಂಗಡಿ ಪತ್ತೆಯಾಗಿಲ್ಲ. ಅನಧಿಕೃತ ಮದ್ಯದಂಗಡಿ ಪತ್ತೆಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಡಿವೈಎಸ್ಪಿ ಪಿ. ಸಾಯಿಕುಮಾರ್​ ತಿಳಿಸಿದ್ದಾರೆ.

ಪಾಲಕ್ಕಾಡ್ : ( ಕೇರಳ) ಜಿಲ್ಲೆಯ ವಲಯಾರ್​​ನಲ್ಲಿ ಎರಡು ದಿನದೊಳಗೆ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಹಿಂದೆ ಕಳ್ಳಭಟ್ಟಿಯ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಆದಿವಾಸಿ ಪ್ರದೇಶವಾದ ವಲಯಾರ್​ ಪಯ್ಯತ್ತುಕಾಡ್ ನಿವಾಸಿಗಳಾದ ರಾಮನ್ , ಅಯ್ಯಪ್ಪನ್ ಮತ್ತು ಶಿವನ್ ಮೃತರು. ಇವರಲ್ಲಿ ಇಬ್ಬರು ಭಾನುವಾರ ಮೃತಪಟ್ಟರೆ, ಓರ್ವ ಸೋಮವಾರ ಮೃತಪಟ್ಟಿದ್ದಾನೆ. ಕಳ್ಳಭಟ್ಟಿ ಸೇವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ​

ಭಾನುವಾರ ಮೃತಪಟ್ಟ ಇಬ್ಬರ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸೋಮವಾರ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿದ್ದಾರ ಎಂಬುವುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಲಿದೆ.

ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ಸ್ಯಾನಿಟೈಸರ್​ ವಾಸನೆ ಬಂದಿದೆ ಮತ್ತು ಸಾಬೂನು ಪತ್ತೆಯಾಗಿದೆ. ಮೇಲ್ನೋಟಕ್ಕೆ ಸ್ಯಾನಿಟೈಸರ್​ ಸೇವಿಸಿ ಮೃತಪಟ್ಟಿರುವ ಶಂಕೆಯಿದೆ. ನಮಗೆ ಪರಿಸರದಲ್ಲಿ ಯಾವುದೇ ನಕಲಿ ಮದ್ಯದಂಗಡಿ ಪತ್ತೆಯಾಗಿಲ್ಲ. ಅನಧಿಕೃತ ಮದ್ಯದಂಗಡಿ ಪತ್ತೆಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಡಿವೈಎಸ್ಪಿ ಪಿ. ಸಾಯಿಕುಮಾರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.