ಹೈದರಾಬಾದ್(ತೆಲಂಗಾಣ): ಚಿಕನ್ ತಿನ್ನುವುದರಿಂದಾಗಿ ಕೊರೊನಾ ವೈರಸ್ ಬರಲಿದೆ ಎಂಬ ಭಯವನ್ನು ಜನರ ಮನಸ್ಸಿನಿಂದ ಹೋಗಲಾಡಿಸುವ ಉದ್ದೇಶದಿಂದ ತೆಲಂಗಾಣ ಸಚಿವರುಗಳಾದ ಕೆ.ಟಿ.ರಾಮರಾವ್, ಎಟೆಲಾ ರಾಜೇಂದ್ರ, ತಲಸನಿ ಶ್ರೀನಿವಾಸ್ ಹಾಗೂ ಮತ್ತಿತರು ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಚಿಕನ್ ಪೀಸ್ಗಳನ್ನು ತಿನ್ನುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.
ಹೈದರಾಬಾದ್ನ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ವೆಂಕಾಬ್ ಚಿಕನ್ ಬಾಯ್ಲರ್ ಕಂಪನಿಯಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಿಕನ್ ಮತ್ತು ಎಗ್ ಮೇಳ ಎಂಬ ಕಾರ್ಯಕ್ರಮದಲ್ಲಿ ಸಚಿವರುಗಳು ಭಾಗಿಯಾಗಿದ್ದು, ಈ ವೇಳೆ, ವೇದಿಕೆಯ ಮೇಲೆಯೇ ಸಾರ್ವಜನಿಕರ ಎದುರು ಚಿಕನ್ ಸವಿಯುವ ಮೂಲಕ, ಚಿಕನ್ನಿಂದಾಗಿ ಕೊರೊನಾ ವೈರಸ್ ಬರಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.