ETV Bharat / bharat

ಕಾರು​ ಅಪಘಾತದಲ್ಲಿ ಲಾಲೂ ಪುತ್ರನಿಗೆ ಗಾಯ: ನಾಲ್ವರ ಸ್ಥಿತಿ ಗಂಭೀರ

author img

By

Published : May 31, 2019, 5:28 PM IST

ಇಂದು ಮಧ್ಯಾಹ್ನ ಪಾಟ್ನಾದ ಎಕೋ ಪಾರ್ಕ್​ ಬಳಿ ತೇಜ್ ಪ್ರತಾಪ್​ ಯಾದವ್ ಸಾಗುತ್ತಿದ್ದ ಕಾರು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ತೇಜ್​ , ಮಾರುತಿ ಕಾರಿ​ನಲ್ಲಿ ಇಬ್ಬರು ಆಪ್ತರೊಂದಿಗೆ ಸಂಚರಿಸುತ್ತಿದ್ದರು ಎನ್ನಲಾಗಿದೆ.

ತೇಜ್ ಪ್ರತಾಪ್​ ಯಾದವ್

ಪಾಟ್ನಾ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್​ ಯಾದವ್ ಇಂದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ ಪಾಟ್ನಾದ ಎಕೋ ಪಾರ್ಕ್​ ಬಳಿ ಅವರು ಸಾಗುತ್ತಿದ್ದ ಕಾರು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ತೇಜ್​ , ಮಾರುತಿ ಕಾರಿ​ನಲ್ಲಿ ಇಬ್ಬರು ಆಪ್ತರೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಎರಡೂ ಕಾರುಗಳಿಗೆ ಹಾನಿಯಾಗಿದೆ. ತೇಜ್​ ಕಾಲಿಗೆ ಪೆಟ್ಟಾಗಿದ್ದು, ಇಬ್ಬರು ಸಹಚರರ ತಲೆಗೆ ಗಾಯವಾಗಿದೆ. ಮತ್ತೊಂದು ಕಾರಿನಲ್ಲಿದ್ದ ಡ್ರೈವರ್​ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತತ್​ಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ತೇಜ್​ ಈ ಹಿಂದೆ ಸಾಂಸಾರಿಕ ಸಮಸ್ಯೆಯಿಂದ ಸನ್ಯಾಸಿಯಂತೆ ಓಡಾಡುತ್ತಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರ ಆರ್​ಜೆಡಿ ಪಕ್ಷ ನಿರೀಕ್ಷಿತ ಯಶಸ್ಸು ಗಳಿಸಿದ ಕಾರಣ ಮತ್ತೆ ಬೇಸರಗೊಂಡಿದ್ದರು. ಇದರ ಬೆನಲ್ಲೇ ಇಂದು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

_

ಪಾಟ್ನಾ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್​ ಯಾದವ್ ಇಂದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ ಪಾಟ್ನಾದ ಎಕೋ ಪಾರ್ಕ್​ ಬಳಿ ಅವರು ಸಾಗುತ್ತಿದ್ದ ಕಾರು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ತೇಜ್​ , ಮಾರುತಿ ಕಾರಿ​ನಲ್ಲಿ ಇಬ್ಬರು ಆಪ್ತರೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಎರಡೂ ಕಾರುಗಳಿಗೆ ಹಾನಿಯಾಗಿದೆ. ತೇಜ್​ ಕಾಲಿಗೆ ಪೆಟ್ಟಾಗಿದ್ದು, ಇಬ್ಬರು ಸಹಚರರ ತಲೆಗೆ ಗಾಯವಾಗಿದೆ. ಮತ್ತೊಂದು ಕಾರಿನಲ್ಲಿದ್ದ ಡ್ರೈವರ್​ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತತ್​ಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ತೇಜ್​ ಈ ಹಿಂದೆ ಸಾಂಸಾರಿಕ ಸಮಸ್ಯೆಯಿಂದ ಸನ್ಯಾಸಿಯಂತೆ ಓಡಾಡುತ್ತಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರ ಆರ್​ಜೆಡಿ ಪಕ್ಷ ನಿರೀಕ್ಷಿತ ಯಶಸ್ಸು ಗಳಿಸಿದ ಕಾರಣ ಮತ್ತೆ ಬೇಸರಗೊಂಡಿದ್ದರು. ಇದರ ಬೆನಲ್ಲೇ ಇಂದು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

_

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.