ETV Bharat / bharat

ರಾಮ ಮಂದಿರ, ಆರ್ಟಿಕಲ್ 370, ಮೊಘಲ್ಸರಾಯ್... ಆಗಸ್ಟ್ 5ರಂದು ನಡೆದ ಪ್ರಮುಖ ಘಟನೆಗಳ ಹಿನ್ನೋಟ

author img

By

Published : Aug 4, 2020, 3:21 PM IST

ಆಗಸ್ಟ್ 5ರಂದು(ನಾಳೆ) ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಎನ್‌ಡಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಇದೇ ದಿನಾಂಕದಂದು ಪ್ರಮುಖ ಘಟನೆಗಳು ನಡೆದಿವೆ. ಆಗಸ್ಟ್ 5ರಂದೇ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗಿತ್ತು. ಉತ್ತರ ಪ್ರದೇಶದ ಮೊಘಲ್ಸರಾಯ್ ರೈಲ್ವೆ ನಿಲ್ದಾಣವನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ ಎಂದು ಇದೇ ದಿನಾಂಕದಂದು ಮರುನಾಮಕರಣ ಮಾಡಲಾಗಿತ್ತು. ಇದರಂತೆ ಈ ಹಿಂದೆ ಆಗಸ್ಟ್​ ಐದರಂದು ನಡೆದ ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

ayodhya
ayodhya

ಹೈದರಾಬಾದ್: ಆಗಸ್ಟ್ 5 ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 'ಶುಭ' ದಿನವಾಗಿದೆ. ಏಕೆಂದರೆ ಈ ನಿರ್ದಿಷ್ಟ ದಿನಾಂಕದಂದು ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ 'ಭೂಮಿ ಪೂಜೆ' ಅದೇ ದಿನಾಂಕದಂದು ನಡೆಯುತ್ತಿರುವುದು ವಿಶೇಷ.

ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ:

ಆಗಸ್ಟ್ 5, 2020ರಂದು 500 ವರ್ಷಗಳ ವಿವಾದ ಅಂತ್ಯಗೊಳ್ಳಲಿದೆ. ಈ ವಿಷಯದ ಬಗ್ಗೆ ದೇಶವು ಹಲವಾರು ಹಿಂಸಾಚಾರ ಮತ್ತು ವಿಭಜನೆಯ ನಿದರ್ಶನಗಳನ್ನು ಕಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಮತ್ತು ಅಡಿಪಾಯ ಹಾಕುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಧಾರ್ಮಿಕ ಆಚರಣೆಯ ದಿನಾಂಕ ಮತ್ತು ಸಮಯವನ್ನು ವೈದಿಕ ಪ್ರಕ್ರಿಯೆಯ ಪ್ರಕಾರ ನಿರ್ಧರಿಸಲಾಗಿದ್ದರೂ, ಬಿಜೆಪಿಗೆ ಆಗಸ್ಟ್ 5 ಶುಭ ದಿನವಾಗಿದೆ.

ಆರ್ಟಿಕಲ್ 370 ರದ್ದು:

ಇದೊಂದು 'ಐತಿಹಾಸಿಕ ನಡೆ'. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಗಸ್ಟ್ 5, 2019ರಂದು ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು. ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಕ್ರಮದಿಂದ ಬಿಜೆಪಿ ತನ್ನ 'ಒಂದು ರಾಷ್ಟ್ರ, ಒಂದು ಸಂವಿಧಾನ' ಕನಸನ್ನು ನನಸಾಗಿಸಿತು. ಆಗಸ್ಟ್ 5 ದಿನಾಂಕವನ್ನೇ ಏಕೆ ನಿರ್ಧರಿಸಲಾಯಿತು ಎಂಬುದು ಕಾಕತಾಳೀಯ.

ಮೊಘಲ್ಸರಾಯ್ ನಿಲ್ದಾಣದ ಮರುನಾಮಕರಣ:

ಏಷ್ಯಾದ ಅತಿ ದೊಡ್ಡ ರೈಲ್ವೆ ನಿಲ್ದಾಣವಾಗಿರುವ ಉತ್ತರ ಪ್ರದೇಶದ ಚಂಡೌಲಿ ಜಿಲ್ಲೆಯ ಮೊಘಲ್ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಅಧಿಕೃತವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ನಿಲ್ದಾಣವೆಂದು ಆಗಸ್ಟ್ 5, 2018ರಂದು ಬದಲಾಯಿಸಲಾಯಿತು. ನಿಲ್ದಾಣದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಲಾಗಿತ್ತು. ಕೇಂದ್ರ ಎನ್​ಡಿಎ ಸರ್ಕಾರ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತ್ತು.

ಆಗಸ್ಟ್ 5ರಂದು ನಡೆದ ವಿಶ್ವದ ಪ್ರಮುಖ ಘಟನೆಗಳು:

ಆಗಸ್ಟ್ 5, 1945ರಂದು ಜಪಾನ್‌ನ ಹಿರೋಷಿಮಾದ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿ ನಡೆಸಿತ್ತು.

ಚಂದ್ರನ ಮೇಲ್ಮೈ ಮೇಲೆ ಮೊದಲಿಗೆ ಹೆಜ್ಜೆ ಇಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಆಗಸ್ಟ್ 5, 1890ರಂದು ಜನಿಸಿದರು.

ಆಗಸ್ಟ್ 5, 2011ರಂದು ಮಂಗಳ ಗ್ರಹದಲ್ಲಿ ನೀರು ಇದೆ ಎಂದು ನಾಸಾ ವಿಜ್ಞಾನಿಗಳು ಹೇಳಿಕೊಂಡಿದ್ದರು.

ಆಗಸ್ಟ್ 5, 2011ರಂದು ಗುರು ಗ್ರಹದ ಅಧ್ಯಯನ ಮಾಡಲು ನಾಸಾ ಆಕಾಶನೌಕೆ ಉಡಾವಣೆ ಮಾಡಿತ್ತು.

ಸಾಮಾಜಿಕ ಸಮೀಕರಣಗಳು, ಸಂಶೋಧನೆ, ಆವಿಷ್ಕಾರಗಳು ಮತ್ತು ವಿಶ್ವ ರಾಜಕಾರಣದ ಮೇಲೆ ಪ್ರಭಾವ ಬೀರಿದ ಹಲವು ಘಟನೆಗಳು ಆಗಸ್ಟ್ 5ರಂದು ನಡೆದಿವೆ. ಭಾರತಕ್ಕೆ ಸಂಬಂಧಿಸಿದಂತೆ, ಆಗಸ್ಟ್ 5ರಂದು 370ನೇ ವಿಧಿಯ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು, ಈಗ ಇದೇ ದಿನದಂದು ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಲಾಗುತ್ತಿದೆ.

ಹೈದರಾಬಾದ್: ಆಗಸ್ಟ್ 5 ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 'ಶುಭ' ದಿನವಾಗಿದೆ. ಏಕೆಂದರೆ ಈ ನಿರ್ದಿಷ್ಟ ದಿನಾಂಕದಂದು ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ 'ಭೂಮಿ ಪೂಜೆ' ಅದೇ ದಿನಾಂಕದಂದು ನಡೆಯುತ್ತಿರುವುದು ವಿಶೇಷ.

ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ:

ಆಗಸ್ಟ್ 5, 2020ರಂದು 500 ವರ್ಷಗಳ ವಿವಾದ ಅಂತ್ಯಗೊಳ್ಳಲಿದೆ. ಈ ವಿಷಯದ ಬಗ್ಗೆ ದೇಶವು ಹಲವಾರು ಹಿಂಸಾಚಾರ ಮತ್ತು ವಿಭಜನೆಯ ನಿದರ್ಶನಗಳನ್ನು ಕಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಮತ್ತು ಅಡಿಪಾಯ ಹಾಕುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಧಾರ್ಮಿಕ ಆಚರಣೆಯ ದಿನಾಂಕ ಮತ್ತು ಸಮಯವನ್ನು ವೈದಿಕ ಪ್ರಕ್ರಿಯೆಯ ಪ್ರಕಾರ ನಿರ್ಧರಿಸಲಾಗಿದ್ದರೂ, ಬಿಜೆಪಿಗೆ ಆಗಸ್ಟ್ 5 ಶುಭ ದಿನವಾಗಿದೆ.

ಆರ್ಟಿಕಲ್ 370 ರದ್ದು:

ಇದೊಂದು 'ಐತಿಹಾಸಿಕ ನಡೆ'. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಗಸ್ಟ್ 5, 2019ರಂದು ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು. ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಕ್ರಮದಿಂದ ಬಿಜೆಪಿ ತನ್ನ 'ಒಂದು ರಾಷ್ಟ್ರ, ಒಂದು ಸಂವಿಧಾನ' ಕನಸನ್ನು ನನಸಾಗಿಸಿತು. ಆಗಸ್ಟ್ 5 ದಿನಾಂಕವನ್ನೇ ಏಕೆ ನಿರ್ಧರಿಸಲಾಯಿತು ಎಂಬುದು ಕಾಕತಾಳೀಯ.

ಮೊಘಲ್ಸರಾಯ್ ನಿಲ್ದಾಣದ ಮರುನಾಮಕರಣ:

ಏಷ್ಯಾದ ಅತಿ ದೊಡ್ಡ ರೈಲ್ವೆ ನಿಲ್ದಾಣವಾಗಿರುವ ಉತ್ತರ ಪ್ರದೇಶದ ಚಂಡೌಲಿ ಜಿಲ್ಲೆಯ ಮೊಘಲ್ಸರಾಯ್ ರೈಲ್ವೆ ನಿಲ್ದಾಣದ ಹೆಸರನ್ನು ಅಧಿಕೃತವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ನಿಲ್ದಾಣವೆಂದು ಆಗಸ್ಟ್ 5, 2018ರಂದು ಬದಲಾಯಿಸಲಾಯಿತು. ನಿಲ್ದಾಣದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಲಾಗಿತ್ತು. ಕೇಂದ್ರ ಎನ್​ಡಿಎ ಸರ್ಕಾರ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತ್ತು.

ಆಗಸ್ಟ್ 5ರಂದು ನಡೆದ ವಿಶ್ವದ ಪ್ರಮುಖ ಘಟನೆಗಳು:

ಆಗಸ್ಟ್ 5, 1945ರಂದು ಜಪಾನ್‌ನ ಹಿರೋಷಿಮಾದ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿ ನಡೆಸಿತ್ತು.

ಚಂದ್ರನ ಮೇಲ್ಮೈ ಮೇಲೆ ಮೊದಲಿಗೆ ಹೆಜ್ಜೆ ಇಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಆಗಸ್ಟ್ 5, 1890ರಂದು ಜನಿಸಿದರು.

ಆಗಸ್ಟ್ 5, 2011ರಂದು ಮಂಗಳ ಗ್ರಹದಲ್ಲಿ ನೀರು ಇದೆ ಎಂದು ನಾಸಾ ವಿಜ್ಞಾನಿಗಳು ಹೇಳಿಕೊಂಡಿದ್ದರು.

ಆಗಸ್ಟ್ 5, 2011ರಂದು ಗುರು ಗ್ರಹದ ಅಧ್ಯಯನ ಮಾಡಲು ನಾಸಾ ಆಕಾಶನೌಕೆ ಉಡಾವಣೆ ಮಾಡಿತ್ತು.

ಸಾಮಾಜಿಕ ಸಮೀಕರಣಗಳು, ಸಂಶೋಧನೆ, ಆವಿಷ್ಕಾರಗಳು ಮತ್ತು ವಿಶ್ವ ರಾಜಕಾರಣದ ಮೇಲೆ ಪ್ರಭಾವ ಬೀರಿದ ಹಲವು ಘಟನೆಗಳು ಆಗಸ್ಟ್ 5ರಂದು ನಡೆದಿವೆ. ಭಾರತಕ್ಕೆ ಸಂಬಂಧಿಸಿದಂತೆ, ಆಗಸ್ಟ್ 5ರಂದು 370ನೇ ವಿಧಿಯ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು, ಈಗ ಇದೇ ದಿನದಂದು ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.