ನವದೆಹಲಿ: ಗಣೇಶ ಚತುರ್ಥಿಯ ಮುನ್ನಾದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ನಾಗರಿಕರಿಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ.
ಗಣೇಶ ಹಬ್ಬವು ಗಜಮುಖನ ಜನ್ಮದಿನವೆಂದು ಆಚರಿಸಲ್ಪಡುತ್ತದೆ. ಈ ಸಂದರ್ಭ ಜನರು ಉತ್ಸಾಹ, ಸಂತೋಷ ಮತ್ತು ಸಹಿಷ್ಣುತೆಯಿಂದಿರಬೇಕು. ಹಬ್ಬದಂದು ದೇಶದ ಎಲ್ಲ ನಾಗರಿಕರಲ್ಲಿ ಪರಸ್ಪರ ಸಾಮರಸ್ಯ, ಭ್ರಾತೃತ್ವ ಮತ್ತು ಐಕ್ಯತೆಯನ್ನು ಬಲಪಡಿಸುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ್ದಾರೆ.
ಪ್ರಸ್ತುತ ನಾವು ಕೋವಿಡ್-19 ಸಾಂಕ್ರಾಮಿಕದಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ರೋಗವನ್ನು ಆದಷ್ಟು ಬೇಗನೆ ನಿವಾರಿಸಲು ಗಣೇಶನ ಬಳಿ ಬೇಡಿಕೊಳ್ಳೋಣ. ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮತ್ತು ನಾವೆಲ್ಲರೂ ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ ಎಂದಿದ್ದಾರೆ.