ETV Bharat / bharat

ಸಿಎಎ ಪರವಾಗಿ ಅಂಬೇಡ್ಕರ್​, ಗಾಂಧಿ ಹೆಸರು ಬಳಕೆ: ಮೋದಿ ಸರ್ಕಾರದ ವಿರುದ್ಧ ಪ್ರಕಾಶ್ ಅಂಬೇಡ್ಕರ್​ ಕಿಡಿ

author img

By

Published : Feb 16, 2020, 11:53 AM IST

ಎನ್​ಆರ್​ಸಿ ಮತ್ತು ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮೋದಿ ಸರ್ಕಾರ ಅಂಬೇಡ್ಕರ್​, ಗಾಂಧೀಜಿಯಂತಹ ಮಹನೀಯರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಡಾ. ಭೀಮ್​ರಾವ್​ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್​ ಆರೋಪಿಸಿದ್ದಾರೆ.

Prakash ambedkar statement in alwar on NRC and CAA
ಸಿಎಎ ಪರ ಜನ್ರ ಗಮನ ಸೆಳೆಯಲು ಮೋದಿ ಸರ್ಕಾರ ಅಂಬೇಡ್ಕರ್​, ಗಾಂಧಿಯ ಹೆಸರನ್ನು ಬಳಸಿಕೊಳ್ಳುತ್ತಿದೆ: ಪ್ರಕಾಶ್ ಅಂಬೇಡ್ಕರ್​ ಆರೋಪ!

ಅಲ್ವಾರ್​: ಎನ್​ಆರ್​ಸಿ ಮತ್ತು ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮೋದಿ ಸರ್ಕಾರ ಅಂಬೇಡ್ಕರ್​, ಗಾಂಧೀಜಿಯಂತಹ ಮಹನೀಯರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಡಾ. ಭೀಮ್​ರಾವ್​ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್​ ಆರೋಪಿಸಿದ್ದಾರೆ.

ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್..

ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ದೇಶಾದ್ಯಂತ ನಿರಂತರ ಪ್ರತಿಭಟನೆ, ಹೋರಾಟ, ಸತ್ಯಾಗ್ರಹ ಮುಂದುವರೆದಿವೆ. ಹೀಗೆ ಅಲ್ವಾರ್​ನ ಕಾರ್ಬಾಲಾ ಮೈದಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಕಾಶ್ ಅಂಬೇಡ್ಕರ್​ ಭಾಗವಹಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಿಡಿಕಾರಿದರು.

ಮಾಧ್ಯಮದವರೊಂದಿಗೆ ಪ್ರಕಾಶ್ ಅಂಬೇಡ್ಕರ್​ ಮಾತನಾಡಿ, ಭಾರತದಲ್ಲಿ ಜನಿಸಿದವರು ಭಾರತೀಯರು. ಅದಕ್ಕೆ ಯಾವುದೇ ಪುರಾವೆ ಬೇಡ. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ನಿಯಮಗಳನ್ನು ಬದಲಾಯಿಸುವ ಪ್ರಯತ್ನದಲ್ಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಅವರ ಬಗ್ಗೆ ಜನರ ಮನಸ್ಸಿನಲ್ಲಿ ಗೌರವವಿದೆ. ಆ ಕಾರಣದಿಂದಾಗಿಯೇ ಮೋದಿ ಸರ್ಕಾರ ಆ ಗಣ್ಯರ ಹೆಸರಿನಿಂದ ಜನರನ್ನು ನಿರಂತರವಾಗಿ ಗೊಂದಲಗೊಳಿಸುತ್ತಿದೆ ಎಂದು ಕಿಡಿಕಾರಿದರು.

ಹದಗೆಟ್ಟ ಆರ್ಥಿಕ ಸ್ಥಿತಿಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರವು ಏಪ್ರಿಲ್ 1 ರಿಂದ ವಿಶೇಷ ಸಮೀಕ್ಷೆ ಪ್ರಾರಂಭಿಸುತ್ತಿದೆ. ಈ ಸರ್ಕಾರ ಮನುವಾದಿ ಸರ್ಕಾರ, ತನ್ನ ಆಲೋಚನೆಯನ್ನು ಇತರರ ಮೇಲೆ ಹೇರುವಲ್ಲಿ ನಿರತವಾಗಿದೆಯೇ ಹೊರತು ಅಭಿವೃದ್ಧಿಯಲ್ಲ. ಹಾಗಾಗಿ ಜನರು ಸುದೀರ್ಘ ಯುದ್ಧ ಮಾಡಬೇಕಾಗಿದೆ ಎಂದರು.

ಅಲ್ವಾರ್​: ಎನ್​ಆರ್​ಸಿ ಮತ್ತು ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮೋದಿ ಸರ್ಕಾರ ಅಂಬೇಡ್ಕರ್​, ಗಾಂಧೀಜಿಯಂತಹ ಮಹನೀಯರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಡಾ. ಭೀಮ್​ರಾವ್​ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್​ ಆರೋಪಿಸಿದ್ದಾರೆ.

ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್..

ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ದೇಶಾದ್ಯಂತ ನಿರಂತರ ಪ್ರತಿಭಟನೆ, ಹೋರಾಟ, ಸತ್ಯಾಗ್ರಹ ಮುಂದುವರೆದಿವೆ. ಹೀಗೆ ಅಲ್ವಾರ್​ನ ಕಾರ್ಬಾಲಾ ಮೈದಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಕಾಶ್ ಅಂಬೇಡ್ಕರ್​ ಭಾಗವಹಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಿಡಿಕಾರಿದರು.

ಮಾಧ್ಯಮದವರೊಂದಿಗೆ ಪ್ರಕಾಶ್ ಅಂಬೇಡ್ಕರ್​ ಮಾತನಾಡಿ, ಭಾರತದಲ್ಲಿ ಜನಿಸಿದವರು ಭಾರತೀಯರು. ಅದಕ್ಕೆ ಯಾವುದೇ ಪುರಾವೆ ಬೇಡ. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ನಿಯಮಗಳನ್ನು ಬದಲಾಯಿಸುವ ಪ್ರಯತ್ನದಲ್ಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಅವರ ಬಗ್ಗೆ ಜನರ ಮನಸ್ಸಿನಲ್ಲಿ ಗೌರವವಿದೆ. ಆ ಕಾರಣದಿಂದಾಗಿಯೇ ಮೋದಿ ಸರ್ಕಾರ ಆ ಗಣ್ಯರ ಹೆಸರಿನಿಂದ ಜನರನ್ನು ನಿರಂತರವಾಗಿ ಗೊಂದಲಗೊಳಿಸುತ್ತಿದೆ ಎಂದು ಕಿಡಿಕಾರಿದರು.

ಹದಗೆಟ್ಟ ಆರ್ಥಿಕ ಸ್ಥಿತಿಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರವು ಏಪ್ರಿಲ್ 1 ರಿಂದ ವಿಶೇಷ ಸಮೀಕ್ಷೆ ಪ್ರಾರಂಭಿಸುತ್ತಿದೆ. ಈ ಸರ್ಕಾರ ಮನುವಾದಿ ಸರ್ಕಾರ, ತನ್ನ ಆಲೋಚನೆಯನ್ನು ಇತರರ ಮೇಲೆ ಹೇರುವಲ್ಲಿ ನಿರತವಾಗಿದೆಯೇ ಹೊರತು ಅಭಿವೃದ್ಧಿಯಲ್ಲ. ಹಾಗಾಗಿ ಜನರು ಸುದೀರ್ಘ ಯುದ್ಧ ಮಾಡಬೇಕಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.