ETV Bharat / bharat

ಕೇಂದ್ರ ಸಂಪುಟ ಸಭೆ ಬಳಿಕ ಪ್ರಧಾನಿ ಮೋದಿ ಧಿಡೀರ್​​ ಭೇಟಿ ನೀಡಿದ್ದೆಲ್ಲಿಗೆ..?

author img

By

Published : Feb 19, 2020, 5:29 PM IST

ಕೇಂದ್ರ ಸಚಿವ ಸಂಪುಟ ಸಭೆ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆಯೋಜಿಸುವ ಹುನಾರ್​ ಹಾತ್​ನಲ್ಲಿ ಪಾಲ್ಗೊಂಡರು. ದೇಶದ ಹಲವೆಡೆಯಿಂದ ಭಾಗವಹಿಸುವ ಕುಶಲಕರ್ಮಿಗಳ ಜೊತೆ ಸಂವಾದ ನಡೆಸಿದರು

PM Modi makes surprise visit to 'Hunar Haat' at Rajpath
ನವದೆಹಲಿಯ ಹುನಾರ್​ ಹಾತ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಜಪಥದಲ್ಲಿರುವ ಹುನಾರ್​ ಹಾತ್​ಗೆ ಧಿಡೀರ್ ಭೇಟಿ ನೀಡಿ ಅಚ್ಚರಿ ಸೃಷ್ಟಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ನಂತರ ಹುನಾರ್ ಹಾತ್​ಗೆ ಭೇಟಿ ನೀಡಿದ ಅವರು, ಅಲ್ಲಿನ ಕುಶಲಕರ್ಮಿಗಳ ಜೊತೆಗೆ ಸಂವಾದ ನಡೆಸಿ ಖುಷಿ ಪಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಮೋದಿ ಧಿಡೀರ್​ ಭೇಟಿ ನೀಡಿದ್ದರಿಂದ ಅಲ್ಲಿ ನೆರೆದಿದ್ದವರು ಆಶ್ಚರ್ಯ ಚಕಿತರಾದರು.

ನವದೆಹಲಿಯ ಹುನಾರ್​ ಹಾತ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಈ ವೇಳೆ, ಪ್ರಧಾನಿ ಮೋದಿ ಗೋದಿ ಹಿಟ್ಟಿನಿಂದ ಮಾಡಿದ ಲಿಟ್ಟಿ ಚೋಖಾ ಎಂಬ ತಿಂಡಿ ಸೇವಿಸಿ ಕುಲ್ಹಾದ್​ ಟೀ ಸೇವಿಸಿ ಖುಷಿ ಪಟ್ಟರು. ಸುಮಾರು 50 ನಿಮಿಷಗಳ ಕಾಲ ಅಲ್ಲಿನ ಜನರೊಂದಿಗೆ ಬೆರತು ಪ್ರಧಾನಿ ಸಂತಸಪಟ್ಟರು. ಪ್ರಧಾನಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಾಥ್​ ನೀಡಿದರು.

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಹುನಾರ್ ಹಾತ್​ ಆಯೋಜಿಸಿತ್ತದೆ. ವಿವಿಧ ರೀತಿಯ ಕುಶಲ ಕರ್ಮಿಗಳು ಇಲ್ಲಿ ಪಾಲ್ಗೊಳ್ಳುತ್ತಾರೆ. ಚಿತ್ರಕಲೆ, ವಾಸ್ತುಶಿಲ್ಪ, ಪಾಕ ಶಾಲೆ , ಸಂಗೀತಕ್ಕೆ ಸಂಬಂಧಿಸಿದ ಕುಶಲ ಕರ್ಮಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕೌಶಲ್​​ ಕೋ ಕಾಮ್​ ಎಂಬ ಹೆಸರಲ್ಲಿ ಆಯೋಜಿಸಿದ್ದ ಹುನಾರ್ ಹಾತ್​ನಲ್ಲಿ ದೇಶಾದ್ಯಂತ ನೂರಾರು ಪ್ರಮುಖ ಕುಶಲಕರ್ಮಿಗಳು ಭಾಗವಹಿಸಿದ್ದರು.

ಪಾಕ ಪ್ರವೀಣರಿಗಾಗಿಯೇ ಹಲವರು ರಾಜ್ಯಗಳ ಸಾಂಪ್ರದಾಯಿಕ ಭಕ್ಷ್ಯಗಳನ್ನು ಪರಿಚಯಿಸುವ ಬಾವರ್ಚಿಖಾನಾ ಅನ್ನು ಸ್ಥಾಪಿಸಲಾಗಿತ್ತು. ಫೆಬ್ರವರಿ 22ರವರೆಗೆ ನಡೆಯಲಿರುವ ಈ ಹುನಾರ್​ ಹಾತ್ ಕಾರ್ಯಕ್ರಮದಲ್ಲಿ ಅಪಾರ ಜನಸಂದಣಿ ಇತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಜಪಥದಲ್ಲಿರುವ ಹುನಾರ್​ ಹಾತ್​ಗೆ ಧಿಡೀರ್ ಭೇಟಿ ನೀಡಿ ಅಚ್ಚರಿ ಸೃಷ್ಟಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ನಂತರ ಹುನಾರ್ ಹಾತ್​ಗೆ ಭೇಟಿ ನೀಡಿದ ಅವರು, ಅಲ್ಲಿನ ಕುಶಲಕರ್ಮಿಗಳ ಜೊತೆಗೆ ಸಂವಾದ ನಡೆಸಿ ಖುಷಿ ಪಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಮೋದಿ ಧಿಡೀರ್​ ಭೇಟಿ ನೀಡಿದ್ದರಿಂದ ಅಲ್ಲಿ ನೆರೆದಿದ್ದವರು ಆಶ್ಚರ್ಯ ಚಕಿತರಾದರು.

ನವದೆಹಲಿಯ ಹುನಾರ್​ ಹಾತ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಈ ವೇಳೆ, ಪ್ರಧಾನಿ ಮೋದಿ ಗೋದಿ ಹಿಟ್ಟಿನಿಂದ ಮಾಡಿದ ಲಿಟ್ಟಿ ಚೋಖಾ ಎಂಬ ತಿಂಡಿ ಸೇವಿಸಿ ಕುಲ್ಹಾದ್​ ಟೀ ಸೇವಿಸಿ ಖುಷಿ ಪಟ್ಟರು. ಸುಮಾರು 50 ನಿಮಿಷಗಳ ಕಾಲ ಅಲ್ಲಿನ ಜನರೊಂದಿಗೆ ಬೆರತು ಪ್ರಧಾನಿ ಸಂತಸಪಟ್ಟರು. ಪ್ರಧಾನಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಾಥ್​ ನೀಡಿದರು.

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಹುನಾರ್ ಹಾತ್​ ಆಯೋಜಿಸಿತ್ತದೆ. ವಿವಿಧ ರೀತಿಯ ಕುಶಲ ಕರ್ಮಿಗಳು ಇಲ್ಲಿ ಪಾಲ್ಗೊಳ್ಳುತ್ತಾರೆ. ಚಿತ್ರಕಲೆ, ವಾಸ್ತುಶಿಲ್ಪ, ಪಾಕ ಶಾಲೆ , ಸಂಗೀತಕ್ಕೆ ಸಂಬಂಧಿಸಿದ ಕುಶಲ ಕರ್ಮಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕೌಶಲ್​​ ಕೋ ಕಾಮ್​ ಎಂಬ ಹೆಸರಲ್ಲಿ ಆಯೋಜಿಸಿದ್ದ ಹುನಾರ್ ಹಾತ್​ನಲ್ಲಿ ದೇಶಾದ್ಯಂತ ನೂರಾರು ಪ್ರಮುಖ ಕುಶಲಕರ್ಮಿಗಳು ಭಾಗವಹಿಸಿದ್ದರು.

ಪಾಕ ಪ್ರವೀಣರಿಗಾಗಿಯೇ ಹಲವರು ರಾಜ್ಯಗಳ ಸಾಂಪ್ರದಾಯಿಕ ಭಕ್ಷ್ಯಗಳನ್ನು ಪರಿಚಯಿಸುವ ಬಾವರ್ಚಿಖಾನಾ ಅನ್ನು ಸ್ಥಾಪಿಸಲಾಗಿತ್ತು. ಫೆಬ್ರವರಿ 22ರವರೆಗೆ ನಡೆಯಲಿರುವ ಈ ಹುನಾರ್​ ಹಾತ್ ಕಾರ್ಯಕ್ರಮದಲ್ಲಿ ಅಪಾರ ಜನಸಂದಣಿ ಇತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.