ETV Bharat / bharat

ಪಾಕ್​ಗೆ ನುಂಗಲಾರದ ತುತ್ತಾದ ಆರ್ಟಿಕಲ್​ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!

ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರ ಪುನರ್​ ರಚನೆ ಮಸೂದೆ ಅಂಗೀಕಾರ ಮಾಡುತ್ತಿದ್ದಂತೆ ನೆರೆಯ ಪಾಕ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದೀಗ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು- ನೀರು ಬಿಡಲು ಮುಂದಾಗಿದೆ.

author img

By

Published : Aug 7, 2019, 8:14 PM IST

Updated : Aug 7, 2019, 9:01 PM IST

ಆರ್ಟಿಕಲ್​ 370ರದ್ದು

ಇಸ್ಲಾಮಾಬಾದ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370ರದ್ದು ಮಾಡಿದೆ. ಇದೀಗ ಈ ವಿಚಾರ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಭಾರತದೊಂದಿಗಿನ ಎಲ್ಲ ರೀತಿಯ ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರ ಸ್ಥಗಿತಗೊಳಿಸಲೂ ಅದು ನಿರ್ಧರಿಸಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್​ ಕರೆಯಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಇದೇ ತಿಂಗಳು ತನ್ನ ಹೈಕಮಿಷನರ್​ ಅವರನ್ನ ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ.

ವಿಶೇಷವಾಗಿ ಮೂರು ನಿರ್ಧಾರ ತೆಗೆದುಕೊಂಡಿರುವ ಪಾಕ್​ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಕ್ಕಿಳಿಸುವುದು, ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವುದು ಹಾಗೂ ದ್ವಿಪಕ್ಷೀಯ ವ್ಯವಸ್ಥೆ ಬಗ್ಗೆ ಪರಾಮರ್ಶೆ ನಡೆಸುವುದು.ಇನ್ನು ಪಾಕ್​​ನಲ್ಲಿದ್ದ ಭಾರತೀಯ ರಾಯಭಾರಿಯನ್ನ ಹೊರಹಾಕಿ ಆದೇಶ ಹೊರಡಿಸಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೂ ಮೊದಲು ಭಾರತ-ಪಾಕ್​ ನಡುವೆ 2018ರ ಜುಲೈನಿಂದ 2019ರ ಜನವರಿ ವರೆಗೆ 6,230 ಕೋಟಿ ವ್ಯವಹಾರ ನಡೆದಿತ್ತು. ಇದಕ್ಕೂ ಮೊದಲು 2017-18ರಲ್ಲಿ ಉಭಯ ದೇಶಗಳ ನಡುವೆ 1,600ಕೋಟಿ ರೂ ವ್ಯವಹಾರ ನಡೆದಿತ್ತು.

ಎರಡೂ ರಾಷ್ಟಗಳ ನಡುವೆ 2016- 17 ರಲ್ಲಿ 15ಸಾವಿರ ಕೋಟಿ ರೂ. ವ್ಯವಹಾರ ನಡೆದರೆ, 2017- 18 ರಲ್ಲಿ 16,400 ಕೋಟಿ ಹಾಗೂ 2018-19ರಲ್ಲಿ 18 ಸಾವಿರ ಕೋಟಿ ರೂ. ವ್ಯವಹಾರ ನಡೆದಿತ್ತು. ಇದೀಗ ಈ ವ್ಯವಹಾರಕ್ಕೆ ಅಂತಿಮ ತೆರೆ ಎಳೆಯಲು ಪಾಕಿಸ್ತಾನ ಮುಂದಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನ ವಿಪಕ್ಷ ಮುಖ್ಯಸ್ಥ ಹಾಗೂ ಮುಸ್ಲಿಂ ಲೀಗ್​​ ಮುಖಂಡ ಶಹಬಾಜ್​ ಶರೀಫ್​​, ಇದೀಗ ಭಾರತಕ್ಕೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ ಎಂದಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವಾಗಿ ವಿಶ್ವಸಂಸ್ಥೆ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಇಸ್ಲಾಮಾಬಾದ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370ರದ್ದು ಮಾಡಿದೆ. ಇದೀಗ ಈ ವಿಚಾರ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಭಾರತದೊಂದಿಗಿನ ಎಲ್ಲ ರೀತಿಯ ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರ ಸ್ಥಗಿತಗೊಳಿಸಲೂ ಅದು ನಿರ್ಧರಿಸಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್​ ಕರೆಯಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಇದೇ ತಿಂಗಳು ತನ್ನ ಹೈಕಮಿಷನರ್​ ಅವರನ್ನ ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ.

ವಿಶೇಷವಾಗಿ ಮೂರು ನಿರ್ಧಾರ ತೆಗೆದುಕೊಂಡಿರುವ ಪಾಕ್​ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಕ್ಕಿಳಿಸುವುದು, ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವುದು ಹಾಗೂ ದ್ವಿಪಕ್ಷೀಯ ವ್ಯವಸ್ಥೆ ಬಗ್ಗೆ ಪರಾಮರ್ಶೆ ನಡೆಸುವುದು.ಇನ್ನು ಪಾಕ್​​ನಲ್ಲಿದ್ದ ಭಾರತೀಯ ರಾಯಭಾರಿಯನ್ನ ಹೊರಹಾಕಿ ಆದೇಶ ಹೊರಡಿಸಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೂ ಮೊದಲು ಭಾರತ-ಪಾಕ್​ ನಡುವೆ 2018ರ ಜುಲೈನಿಂದ 2019ರ ಜನವರಿ ವರೆಗೆ 6,230 ಕೋಟಿ ವ್ಯವಹಾರ ನಡೆದಿತ್ತು. ಇದಕ್ಕೂ ಮೊದಲು 2017-18ರಲ್ಲಿ ಉಭಯ ದೇಶಗಳ ನಡುವೆ 1,600ಕೋಟಿ ರೂ ವ್ಯವಹಾರ ನಡೆದಿತ್ತು.

ಎರಡೂ ರಾಷ್ಟಗಳ ನಡುವೆ 2016- 17 ರಲ್ಲಿ 15ಸಾವಿರ ಕೋಟಿ ರೂ. ವ್ಯವಹಾರ ನಡೆದರೆ, 2017- 18 ರಲ್ಲಿ 16,400 ಕೋಟಿ ಹಾಗೂ 2018-19ರಲ್ಲಿ 18 ಸಾವಿರ ಕೋಟಿ ರೂ. ವ್ಯವಹಾರ ನಡೆದಿತ್ತು. ಇದೀಗ ಈ ವ್ಯವಹಾರಕ್ಕೆ ಅಂತಿಮ ತೆರೆ ಎಳೆಯಲು ಪಾಕಿಸ್ತಾನ ಮುಂದಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನ ವಿಪಕ್ಷ ಮುಖ್ಯಸ್ಥ ಹಾಗೂ ಮುಸ್ಲಿಂ ಲೀಗ್​​ ಮುಖಂಡ ಶಹಬಾಜ್​ ಶರೀಫ್​​, ಇದೀಗ ಭಾರತಕ್ಕೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ ಎಂದಿದ್ದಾರೆ.

ಇನ್ನು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವಾಗಿ ವಿಶ್ವಸಂಸ್ಥೆ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Intro:Body:

ಪಾಕ್​ಗೆ ನುಂಗಲಾರದ ತುತ್ತಾದ ಆರ್ಟಿಕಲ್​ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಧಕ್ಕೆ ಎಳುನೀರು! 





ಇಸ್ಲಾಮಾಬಾದ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370ರದ್ದು ಮಾಡಿದೆ. ಇದೀಗ ಈ ವಿಚಾರ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದ್ದು, ಭಾರತದೊಂದಿಗಿನ ಎಲ್ಲ ರೀತಿಯ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದೆ. 



ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್​ ಕರೆಯಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 



ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೂ ಮೊದಲು ಭಾರತ-ಪಾಕ್​ ನಡುವೆ 2018ರ ಜುಲೈನಿಂದ 2019ರ ಜನವರಿ ವರೆಗೆ 6,230 ಕೋಟಿ ವ್ಯವಹಾರ ನಡೆದಿತ್ತು.  ಇದಕ್ಕೂ ಮೊದಲು 2017-18ರಲ್ಲಿ ಉಭಯ ದೇಶಗಳ ನಡುವೆ 1600ಕೋಟಿ ವ್ಯವಹಾರ ನಡೆದಿತ್ತು. 



ಇನ್ನು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವಾಗಿ ವಿಶ್ವಸಂಸ್ಥೆ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. 


Conclusion:
Last Updated : Aug 7, 2019, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.