ETV Bharat / bharat

ರಾಷ್ಟ್ರಪತಿ ತಿರಸ್ಕರಿಸಿದ ಅರ್ಜಿ ಪರಿಶೀಲನೆಗೆ ಪಟ್ಟು ಹಿಡಿದ ನಿರ್ಭಯಾ ಅಪರಾಧಿ​​

author img

By

Published : Jan 25, 2020, 3:31 PM IST

Updated : Jan 25, 2020, 4:01 PM IST

ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಮುಖೇಶ್​​ ಕುಮಾರ್​ ರಾಷ್ಟ್ರಪತಿಗಳು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಇದೀಗ ಮತ್ತೆ ಸುಪ್ರೀಂ ಮೆಟ್ಟಿಲೇರಿದ್ದಾನೆ.

Mukesh Kumar
ಆರೋಪಿ ಮುಖೇಶ್​​

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮುಖೇಶ್​​ ಕುಮಾರ್​ ಸಿಂಗ್​ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿ ತಿರುಸ್ಕೃತವಾದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

ಅಪರಾಧಿ ಮುಖೇಶ್​​ ಸಿಂಗ್​ ಈ ಹಿಂದೆ ರಾಷ್ಟ್ರಪತಿಗಳಿಗೆ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದು, ಜನವರಿ 17ರಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಈ ಮನವಿಯನ್ನು ತಿರಸ್ಕಾರ ಮಾಡಿದ್ದರು.

ರಾಷ್ಟ್ರಪತಿಯಿಂದ ಅರ್ಜಿ ತಿರಸ್ಕಾರವಾದ ಹಿನ್ನೆಲೆ ದೆಹಲಿ ನ್ಯಾಯಾಲಯವು ನಿರ್ಭಯ ಅತ್ಯಾಚಾರಿಗಳಿಗೆ ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ಮರಣದಂಡನೆ ಎಂದು ಘೋಷಿಸಿದ್ದು, ಇದೀಗ ಮತ್ತೆ ಮುಕೇಶ್​​ ಸಿಂಗ್​ ಈ ಅರ್ಜಿ ಪರಿಶೀಲನೆಗೆ ಸುಪ್ರೀಂ ಮೆಟ್ಟಿಲೇರಿದ್ದಾನೆ.

ಈ ನಡುವೆ ಸುಪ್ರೀಂಗೆ ಕೇಂದ್ರ ಸಹ ಅರ್ಜಿ ಸಲ್ಲಿಸಿದ್ದು, ಶೀಘ್ರ ಕ್ಷಮಾಪಣೆ ಅರ್ಜಿಗೆ 7 ದಿನಗಳ ಗಡುವು ನೀಡುವಂತೆ ಮನವಿ ಮಾಡಿದೆ. ಈ ಅರ್ಜಿಯೂ ಸಹ ಸುಪ್ರೀಂಕೋರ್ಟ್​ ಮುಂದಿದೆ. ಈಗ ಮತ್ತೆ ಮುಖೇಶ್​ ಸಲ್ಲಿಸಿರುವ ಅರ್ಜಿ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮುಖೇಶ್​​ ಕುಮಾರ್​ ಸಿಂಗ್​ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿ ತಿರುಸ್ಕೃತವಾದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

ಅಪರಾಧಿ ಮುಖೇಶ್​​ ಸಿಂಗ್​ ಈ ಹಿಂದೆ ರಾಷ್ಟ್ರಪತಿಗಳಿಗೆ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದು, ಜನವರಿ 17ರಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಈ ಮನವಿಯನ್ನು ತಿರಸ್ಕಾರ ಮಾಡಿದ್ದರು.

ರಾಷ್ಟ್ರಪತಿಯಿಂದ ಅರ್ಜಿ ತಿರಸ್ಕಾರವಾದ ಹಿನ್ನೆಲೆ ದೆಹಲಿ ನ್ಯಾಯಾಲಯವು ನಿರ್ಭಯ ಅತ್ಯಾಚಾರಿಗಳಿಗೆ ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ಮರಣದಂಡನೆ ಎಂದು ಘೋಷಿಸಿದ್ದು, ಇದೀಗ ಮತ್ತೆ ಮುಕೇಶ್​​ ಸಿಂಗ್​ ಈ ಅರ್ಜಿ ಪರಿಶೀಲನೆಗೆ ಸುಪ್ರೀಂ ಮೆಟ್ಟಿಲೇರಿದ್ದಾನೆ.

ಈ ನಡುವೆ ಸುಪ್ರೀಂಗೆ ಕೇಂದ್ರ ಸಹ ಅರ್ಜಿ ಸಲ್ಲಿಸಿದ್ದು, ಶೀಘ್ರ ಕ್ಷಮಾಪಣೆ ಅರ್ಜಿಗೆ 7 ದಿನಗಳ ಗಡುವು ನೀಡುವಂತೆ ಮನವಿ ಮಾಡಿದೆ. ಈ ಅರ್ಜಿಯೂ ಸಹ ಸುಪ್ರೀಂಕೋರ್ಟ್​ ಮುಂದಿದೆ. ಈಗ ಮತ್ತೆ ಮುಖೇಶ್​ ಸಲ್ಲಿಸಿರುವ ಅರ್ಜಿ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ZCZC
PRI GEN LGL NAT
.NEWDELHI LGD11
SC-NIRBHAYA
Nirbhaya case: Mukesh Kumar moves SC, seeks judicial review of rejection of mercy petition by Prez
          New Delhi, Jan 25 (PTI) One of the death row convicts in the 2012 Nirbhaya murder and gang rape case on Saturday moved the Supreme Court seeking judicial review of the rejection of mercy petition by the President.
          The petition has been filed by convict Mukesh Kumar whose mercy plea was dismissed by President Ram Nath Kovind on January 17.
          "A petition has been filed under Article 32 for judicial review of the manner of rejection of the mercy petition in terms of the judgement of Supreme Court in Shatrughan Chauhan case," advocate Vrinda Grover, who is representing Kumar, told PTI. PTI RKS SJK ABA
AQS
AQS
01251444
NNNN
Last Updated : Jan 25, 2020, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.