ETV Bharat / bharat

ಅಂಬೇಡ್ಕರ್ ಮನೆ ಆವರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಆರೋಪಿ ಬಂಧನ

author img

By

Published : Jul 10, 2020, 7:46 AM IST

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರು ಈ ಹಿಂದೆ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಂತೆ ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

'ರಾಜ್‌ಗ್ರುಹಾ' ಆವರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಆರೋಪಿ ಬಂಧನ
'ರಾಜ್‌ಗ್ರುಹಾ' ಆವರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಆರೋಪಿ ಬಂಧನ

ಮುಂಬೈ (ಮಹಾರಾಷ್ಟ್ರ): ಜುಲೈ 7 ರಂದು ಮುಂಬೈನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ 'ರಾಜಗೃಹ' ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಉಮೇಶ್ ಸೀತಾರಾಮ್ ಜಾಧವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 8 ರಂದು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಟುಂಗಾ ಪೊಲೀಸರು ತಿಳಿಸಿದ್ದಾರೆ.

'ರಾಜ್‌ಗ್ರುಹಾ' ಆವರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಆರೋಪಿ ಬಂಧನ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರು ಈ ಹಿಂದೆ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅಂಬೇಡ್ಕರ್ ಅವರ ನಿವಾಸದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಪಾಟ್​​ಗಳು ಮತ್ತು ಕಲ್ಲು ಎಸೆದು ಕಿಟಕಿಯ ಗಾಜುಗಳನ್ನ ಒಡೆದು ಹಾಕಲಾಗಿತ್ತು.

ಸಂವಿಧಾನ ವಾಸ್ತುಶಿಲ್ಪಿ ಅವರ ಮನೆಯ ಹಿಂದಿನಿಂದ ಬಂದ ಆರೋಪಿಗಳು ಈ ಕೃತ್ಯ ಎಸೆಗಿರುವುದು ಸಿಸಿಟಿವಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆಯೇ ಪೊಲೀಸರು ಆರೋಪಿಗಳನ್ನ ಹುಡುಕಿ ಬಂಧನ ಮಾಡುತ್ತಿದ್ದಾರೆ.

ದಾದರ್​ನ ಹಿಂದೂ ಕಾಲೊನಿಯಲ್ಲಿರುವ ಎರಡು ಅಂತಸ್ತಿನ ಪಾರಂಪರಿಕ ಬಂಗಲೆಯಲ್ಲಿ ಅಂಬೇಡ್ಕರ್ ಮ್ಯೂಸಿಯಂ ಇದೆ, ಅಲ್ಲಿ ಬಾಬಾಸಾಹೇಬ್ ಅವರ ಪುಸ್ತಕಗಳು, ಭಾವಚಿತ್ರ, ಚಿತಾಭಸ್ಮ ಸೇರಿದಂತೆ ಅವರು ಬಳಸಿದ ಅಮೂಲ್ಯ ವಸ್ತುಗಳನ್ನ ಸಂಗ್ರಹಿಸಿ ಇಡಲಾಗಿದೆ.

ಮುಂಬೈ (ಮಹಾರಾಷ್ಟ್ರ): ಜುಲೈ 7 ರಂದು ಮುಂಬೈನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ 'ರಾಜಗೃಹ' ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಉಮೇಶ್ ಸೀತಾರಾಮ್ ಜಾಧವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 8 ರಂದು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಟುಂಗಾ ಪೊಲೀಸರು ತಿಳಿಸಿದ್ದಾರೆ.

'ರಾಜ್‌ಗ್ರುಹಾ' ಆವರಣದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಆರೋಪಿ ಬಂಧನ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರು ಈ ಹಿಂದೆ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅಂಬೇಡ್ಕರ್ ಅವರ ನಿವಾಸದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಪಾಟ್​​ಗಳು ಮತ್ತು ಕಲ್ಲು ಎಸೆದು ಕಿಟಕಿಯ ಗಾಜುಗಳನ್ನ ಒಡೆದು ಹಾಕಲಾಗಿತ್ತು.

ಸಂವಿಧಾನ ವಾಸ್ತುಶಿಲ್ಪಿ ಅವರ ಮನೆಯ ಹಿಂದಿನಿಂದ ಬಂದ ಆರೋಪಿಗಳು ಈ ಕೃತ್ಯ ಎಸೆಗಿರುವುದು ಸಿಸಿಟಿವಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆಯೇ ಪೊಲೀಸರು ಆರೋಪಿಗಳನ್ನ ಹುಡುಕಿ ಬಂಧನ ಮಾಡುತ್ತಿದ್ದಾರೆ.

ದಾದರ್​ನ ಹಿಂದೂ ಕಾಲೊನಿಯಲ್ಲಿರುವ ಎರಡು ಅಂತಸ್ತಿನ ಪಾರಂಪರಿಕ ಬಂಗಲೆಯಲ್ಲಿ ಅಂಬೇಡ್ಕರ್ ಮ್ಯೂಸಿಯಂ ಇದೆ, ಅಲ್ಲಿ ಬಾಬಾಸಾಹೇಬ್ ಅವರ ಪುಸ್ತಕಗಳು, ಭಾವಚಿತ್ರ, ಚಿತಾಭಸ್ಮ ಸೇರಿದಂತೆ ಅವರು ಬಳಸಿದ ಅಮೂಲ್ಯ ವಸ್ತುಗಳನ್ನ ಸಂಗ್ರಹಿಸಿ ಇಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.